ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಪತ್ರಿಕೆ ಗೋಷ್ಠಿ#avintvcom
1 min read
ದಿನಾಂಕ :16-02-2021ನೇ ಮಂಗಳವಾರ ಮೂಡಿಗೆರೆಯಲ್ಲಿ ಬೆಳಗ್ಗೆ 11ಗಂಟೆಗೆ ಮೂಡಿಗೆರೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಪತ್ರಿಕೆ ಗೋಷ್ಠಿ ಕರೆಯಲಾಗಿತ್ತು..
ಈ ಒಂದು ಗೋಷ್ಠಿಯಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ ದೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇರಡೂ ಬಡವರ ಮಧ್ಯಮ ವರ್ಗದ ಜನರ ಬದುಕನ್ನು ಕಿತ್ತು ಬೀದಿಗೆ ನಿಲ್ಲಿಸುವ ಅಧಿಕಾರ ಮಾಡುತ್ತಿವೆ ಹಾಗಾಗಿ ಇವತ್ತು ಪೆಟ್ರೋಲ್ ಡೀಸೆಲ್ ರೇಟ್ ದಿನ ನಿತ್ಯ ಹೆಚ್ಚಾಗುತ್ತಿದ್ದು ಆಟೋ ಓಡಿಸುವುದು ಕಷ್ಟವಾಗಿದೆ.
ಹಾಗಾಗಿ ಅದನ್ನು ಖಂಡಿಸುವ ನಿಟ್ಟಿನಲ್ಲಿ ಇದೇ ಶುಕ್ರವಾರ ಬೆಳಗ್ಗೆ 11ಗಂಟೆಗೆ ಮೂಡಿಗೆರೆಯಲ್ಲಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಕೇಂದ್ರ,ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ.
ಈ ಒಂದು ಪ್ರತಿಭಟನೇ ಗೆ ತಾಲೂಕಿನ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಬೆಂಬಲ ನೀಡುವ ವಿಶ್ವಾಸ ತಿಳಿಸಿವೆ ಎಂದರು.
ಈ ಒಂದು ಗೋಷ್ಠಿಯಲ್ಲಿ ಬಿ ಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್,
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರಸನ್ನ ದಾರದಹಳ್ಳಿ,
ಬಿ ಎಸ್ ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಕ್ಕಿ ಮಂಜುನಾಥ್,
ಬಿ ಎಸ್ ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಲ್ ಬಿ ರಮೇಶ್, ಹೆಸ್ಗಲ್ ಶಿವಣ್ಣ,
ಆಟೋ ಸಂಘದ ಕಾರ್ಯದರ್ಶಿ ನಾಗರಾಜ್, ಮಾಜಿ ಆಟೋ ಸಂಘದ ಅಧ್ಯಕ್ಷ ಗಣೇಶ್, ಜನ್ನಾಪುರ ಆಟೋ ಸಂಘದ ಅಧ್ಯಕ್ಷ ಚಂದ್ರು, ಮುಂತಾದವರು ಹಾಜರಿದ್ದರು
ವರದಿ :
ಮಗ್ಗಲಮಕ್ಕಿ ಗಣೇಶ್
ಬ್ಯುರೋ ನ್ಯೂಸ್