AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೊಟ್ಟ ಮಾತು ಉಳಿಸಿಕೊಂಡ ಉಪಮುಖ್ಯಮಂತ್ರಿ- ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದೀಜಿ Laxman Savadi #avintvcom

1 min read
Featured Video Play Icon

ಕೊಟ್ಟ ಮಾತು ಉಳಿಸಿಕೊಂಡ ಉಪಮುಖ್ಯಮಂತ್ರಿ- ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದೀಜಿ Laxman Savadi

ದಕ್ಷಿಣ ಕನ್ನಡದ ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ಮಹಿಷಮರ್ದಿನಿ ಕಂಬಳ ಸಮಿತಿ ವತಿಯಿಂದ Jan 30th ನಡೆದಿದ್ದ ವೀರ-ವಿಕ್ರಮ ಜೋಡುಕರೆ ಕಂಬಳಕ್ಕೆ #ಲಕ್ಷ್ಮಣಸವದಿ ಯವರು ಅತಿಥಿಯಾಗಿ ಆಗಮಿಸಿದ್ದರು.

ಕಂಬಳವನ್ನು ನೋಡಿ ತುಂಬಾ ಆನಂದಪಟ್ಟ ಲಕ್ಷ್ಮಣ ಸವದಿಯವರು ವೈಯಕ್ತಿಕವಾಗಿ 11 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದ್ದರು.

ಇದೀಗ ಆ 11 ಲಕ್ಷ ಹಣವನ್ನು ಕಂಬಳ ಸಮಿತಿಗೆ ನೀಡಿದ್ದಾರೆ.

ಕಂಬಳವನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯನ್ನಾಗಿ ಬೆಳಗಿಸಬೇಕೆನ್ನುವ ಆಶಯ ಹೊಂದಿರುವ ಸವದಿಯವರು ಅದಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡಿದ ಈ ಕಾಣಿಕೆ ತುಳುನಾಡಿನ ಜನಪದ ಕ್ರೀಡೆ ಬೆಳಗಲು ಖಂಡಿತಾ ಸಹಕಾರಿಯಾಗಲಿದೆ.

ಬಂಟ್ವಾಳಕ್ಕೆ ಆಗಮಿಸಿ ಕಂಬಳವನ್ನು ವೀಕ್ಷಿಸಿ ಅದಕ್ಕೆ ಧನ ಸಹಾಯ ನೀಡಿ ಪ್ರೋತ್ಸಾಹಿಸಿದ ಲಕ್ಷ್ಮಣ ಸವದಿಯವರಿಗೆ ಕಂಬಳ ಸಮಿತಿ ಹಾಗೂ ಸಮಸ್ತ ತುಳುನಾಡಿನ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author