ಕೊಟ್ಟ ಮಾತು ಉಳಿಸಿಕೊಂಡ ಉಪಮುಖ್ಯಮಂತ್ರಿ- ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದೀಜಿ Laxman Savadi #avintvcom
1 min read
ಕೊಟ್ಟ ಮಾತು ಉಳಿಸಿಕೊಂಡ ಉಪಮುಖ್ಯಮಂತ್ರಿ- ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದೀಜಿ Laxman Savadi
ದಕ್ಷಿಣ ಕನ್ನಡದ ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ಮಹಿಷಮರ್ದಿನಿ ಕಂಬಳ ಸಮಿತಿ ವತಿಯಿಂದ Jan 30th ನಡೆದಿದ್ದ ವೀರ-ವಿಕ್ರಮ ಜೋಡುಕರೆ ಕಂಬಳಕ್ಕೆ #ಲಕ್ಷ್ಮಣಸವದಿ ಯವರು ಅತಿಥಿಯಾಗಿ ಆಗಮಿಸಿದ್ದರು.
ಕಂಬಳವನ್ನು ನೋಡಿ ತುಂಬಾ ಆನಂದಪಟ್ಟ ಲಕ್ಷ್ಮಣ ಸವದಿಯವರು ವೈಯಕ್ತಿಕವಾಗಿ 11 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದ್ದರು.
ಇದೀಗ ಆ 11 ಲಕ್ಷ ಹಣವನ್ನು ಕಂಬಳ ಸಮಿತಿಗೆ ನೀಡಿದ್ದಾರೆ.
ಕಂಬಳವನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯನ್ನಾಗಿ ಬೆಳಗಿಸಬೇಕೆನ್ನುವ ಆಶಯ ಹೊಂದಿರುವ ಸವದಿಯವರು ಅದಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡಿದ ಈ ಕಾಣಿಕೆ ತುಳುನಾಡಿನ ಜನಪದ ಕ್ರೀಡೆ ಬೆಳಗಲು ಖಂಡಿತಾ ಸಹಕಾರಿಯಾಗಲಿದೆ.
ಬಂಟ್ವಾಳಕ್ಕೆ ಆಗಮಿಸಿ ಕಂಬಳವನ್ನು ವೀಕ್ಷಿಸಿ ಅದಕ್ಕೆ ಧನ ಸಹಾಯ ನೀಡಿ ಪ್ರೋತ್ಸಾಹಿಸಿದ ಲಕ್ಷ್ಮಣ ಸವದಿಯವರಿಗೆ ಕಂಬಳ ಸಮಿತಿ ಹಾಗೂ ಸಮಸ್ತ ತುಳುನಾಡಿನ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.