AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಯುವಸ್ಪಂದನ ಯುವಜನೋತ್ಸವ-2021 ಮೂರು ಪ್ರಶಸ್ತಿಗಳ ಗರಿ ಚಿಕ್ಕಮಗಳೂರು ಜಿಲ್ಲೆಗೆ.

1 min read
Featured Video Play Icon

ಯುವಸ್ಪಂದನ ಯುವಜನೋತ್ಸವ-2021

ಮೂರು  ಪ್ರಶಸ್ತಿಗಳ ಗರಿ ಚಿಕ್ಕಮಗಳೂರು ಜಿಲ್ಲೆಗೆ.

 

ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನಿಮಾನ್ಸ್ ಬೆಂಗಳೂರು ಸಹಯೋಗದೊಂದಿಗೆ ಅನುಷ್ಠಾನಗೊಂಡಿರುವ ಯುವಸ್ಪಂದನ ಕಾರ್ಯಕ್ರಮದಡಿಯಲ್ಲಿ ನಡೆದ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂರು ವಿಭಾಗದಲ್ಲಿ ಪ್ರಶಸ್ತಿಗಳನ್ನು ಗಳಿಸಿ ಪ್ರಶಂಸೆಗೆ ಪಾತ್ರವಾಗಿದೆ.  ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಜೀವನ ಕೌಶಲ್ಯಗಾರರು  – ಯುವ ಸ್ಪಂದನದ ವಿನೋದ್ ಟಿ ಪಿ, ಅಬ್ದುಲ್ ನಾಜ಼ೀಮ್ ಪ್ರಶಸ್ತಿ ಮೂಡಿಗೇರಿಸಿಕೊಂಡಿದ್ದಾರೆ.

ವಿಡಿಯೋ ಕಾರ್ನರ್ ಕಿರು ಚಿತ್ರ ವಿಭಾಗದಲ್ಲಿ ಚಿಕ್ಕಮಗಳೂರು ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿದೆ.

 

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಇಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೋಜನಾ ಸಾಂಖಿಕ ಸಚಿವರಾದ ಶ್ರೀ ಕೆ. ಸಿ ನಾರಾಯಣ ಗೌಡ ಇವರು ಪ್ರಶಸ್ತಿ ಪ್ರದಾನ ಮಾಡಿದರು. ಯುವನೀತಿ ಅನ್ವಯ ಸಾಕಷ್ಟು ಯೋಜನೆ ಯೋಜಾನಾ ಪರೀಶಿಲಿಸಿ ಮುಂದಿನ ದಿನಗಳಲ್ಲಿ ಯುವಜನರಿಗೆ ಉತ್ತಮ ವ್ಯಕ್ತಿತ್ವ ರೂಪಿಸುದರ ಕಡೆಗೆ ಗಮನ ಹರಿಸಲಾಗುವುದು ಎಂದು ನುಡಿದರು.

ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಡಾ| ಶಾಲಿನಿರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಶ್ರೀ ಕೆ ಶ್ರೀನಿವಾಸ್,  ಡಾ| ಗುರುರಾಜ್ ನಿರ್ದೇಶಕರು ನಿಮಾನ್ಸ್ ಬೆಂಗಳೂರು, ಡಾ| ಪ್ರದೀಪ್ ಬಾನಂದೂರು ಹೆಚ್ಚುವರಿ ಪ್ರಾಧ್ಯಾಪಕರು ನಿಮಾನ್ಸ್ ಬೆಂಗಳೂರು  ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಮಗಳೂರು ಜಿಲ್ಲೆ  ಸಹಾಯಕ ನಿರ್ದೇಶಕರಾದ ಡಾ ಮಂಜುಳ ಹುಲ್ಲಹಳ್ಳಿ  ಭಾಗವಹಿಸಿ ಪ್ರಶಸ್ತಿ ಸ್ವಿಕರಿಸಿ  ತಂಡದ ಸಾಧನೆಗೆ ಅಭಿನಂದಿಸಿ  ಹಾರೈಸಿದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author