AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ತಾಲೂಕಿನಲ್ಲಿ ತುಕ್ಕು ಹಿಡಿಯುತ್ತಿದೆ 27 ಶುದ್ಧಗಂಗಾ ಘಟಕ “ಉದ್ಘಾಟನೆಯೂ ಇಲ್ಲ ಸೌಲಭ್ಯವೂ ಇಲ್ಲ” #avintvcom

1 min read
Featured Video Play Icon

ಮೂಡಿಗೆರೆ ತಾಲೂಕಿನಲ್ಲಿ ತುಕ್ಕು ಹಿಡಿಯುತ್ತಿದೆ 27 ಶುದ್ಧಗಂಗಾ ಘಟಕ
“ಉದ್ಘಾಟನೆಯೂ ಇಲ್ಲ ಸೌಲಭ್ಯವೂ ಇಲ್ಲ”
ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ದೃಷ್ಟಿಯಿಂದ ,ಮೂಡಿಗೆರೆ ತಾಲೂಕಿನಲ್ಲಿ ಸ್ಥಾಪಿಸಲಾಗಿದ್ದ ಕೆಲವೇ ಶುದ್ಧಗಂಗಾ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಘಟಕಗಳು ಉದ್ಘಾಟನೆಗೊಳ್ಳದೆ ತುಕ್ಕು ಹಿಡಿದು ಉಪಯೋಗಕ್ಕೆ ಬಾರದಂತಾಗಿವೆ.
ಈ ಹಿಂದೆ ಶಾಸಕರಾಗಿದ್ದ ಬಿ.ಬಿ. ನಿಂಗಯ್ಯ ಅವರ ಅವಧಿಯಲ್ಲಿ ತಾಲೂಕಿನಲ್ಲಿ 27 ಶುದ್ಧಗಂಗಾ ಘಟಕ ಗಳು ಸ್ಥಾಪನೆಯಾಗಿ ಉದ್ಘಾಟನೆಗೆ ತಯಾರಾಗಿದ್ದವು. ವಿಧಾನಸಭೆ ಚುನಾವಣೆ ಬಂದಿದ್ದರಿಂದ ,ಉದ್ಘಾಟನೆ ಭಾಗ್ಯ ಕಂಡಿರಲಿಲ್ಲ. ಈಗ ಎಂ.ಪಿ. ಕುಮಾರಸ್ವಾಮಿ ಶಾಸಕರಾಗಿ ಮೂರು ವರ್ಷ ಕಳೆದರೂ ಇಂದಿಗೂ ಶುದ್ಧಗಂಗಾ ಘಟಕ ಉದ್ಘಾಟನೆಗೊಂಡಿಲ್ಲ.
ಘಟಕಗಳ ನಿರ್ವಹಣೆ ಇಲ್ಲದೆ ಶುದ್ಧಗಂಗಾ ಘಟಕ ಹಾಳಾಗಿ ದನದ ಕೊಟ್ಟಿಗೆ ಯಂತಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಘಟಕಗಳನ್ನು ದುರಸ್ತಿಪಡಿಸಿ ಉದ್ಘಾಟಿಸಬೇಕೆಂದು ಕಳೆದ ಮೂರು ವರ್ಷದ ಹಿಂದೆಯೇ ತಾಲೂಕು ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ,ಆದರೆ ಇದುವರೆಗೂ ಉದ್ಘಾಟನೆಗೊಂಡಿಲ್ಲ. ಅಧಿಕಾರಿಗಳಿಗೆ ಶಾಸಕರು ಕೈಗೇ ಸಿಕ್ಕಿಲ್ಲ ವೇನೋ ಎಂದು ಜನರು ಅಪಹಾಸ್ಯ ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು 27 ಶುದ್ಧಗಂಗಾ ಘಟಕ ವಿದೆ .ಜಿಲ್ಲಾ ಪಂಚಾಯಿತಿಗೆ ಸೇರಿರುವ ಹೆಸಗಲ್ ನಲ್ಲಿ 2 .ಹಳೆ ಮೂಡಿಗೆರೆ 2 .ಹಾಗೂ ಬಿ. ಹೊಸಹಳ್ಳಿ ಹಂತೂರು, ಜಾವಳಿ, ಮಾಕೋನಹಳ್ಳಿ ನಿಡುವಾಳೆ, ಫಲ್ಗುಣಿ ,ತರುವೆ, ತ್ರಿಪುರ ,ಬಾಳೂರು ,ಬಣಕಲ್, ಬಿದರಹಳ್ಳಿ ,ದಾರದಹಳ್ಳಿ ,ಜಿ. ಹೊಸಹಳ್ಳಿ ಗ್ರಾಮದಲ್ಲಿ 1 ಸೇರಿದಂತೆ 17 ಶುದ್ಧಗಂಗಾ ಘಟಕವಿದೆ. ಭೂಸೇನೆ ಇಲಾಖೆಗೆ ಸೇರಿದ್ದ ಕಳಸದಲ್ಲಿ 2 ,ಬಣಕಲ್, ಬಿಳಗುಳ, ಕೂವೆ, ಗೋಣಿಬೀಡು, ಹೆಸಗಲ್ ,ಹೊರನಾಡು ,ಮರಸಣಿಗೆ, ಸಂಸೆ ,ಗ್ರಾಮದಲ್ಲಿ ತಲಾ 1 ಸೇರಿದಂತೆ 10 ಶುದ್ಧಗಂಗಾ ಘಟಕವಿದೆ .10 ಘಟಕಗಳನ್ನು ಕ್ರೆಡಿಲ್ ಕಂಪನಿಯೊಂದು ನಿರ್ವಹಣೆ ಮಾಡುತ್ತಿತ್ತು .ಎಲ್ಲಾ ಶುದ್ಧಗಂಗಾ ಘಟಕ ಗಳು ಹಾಳಾಗಿದ್ದು ,ಅವುಗಳನ್ನೆಲ್ಲ ಈಗ ಜಿಲ್ಲಾ ಪಂಚಾಯತ್ ಸುಪರ್ದಿಗೆ ನೀಡಲಾಗಿದೆ.
ಕುಡಿಯುವ ನೀರಿಗಾಗಿ ಕಾದವರು ನಲ್ಲಿ ,ಬಾವಿ ನೀರು ಕುಡಿಯುತ್ತಿದ್ದಾರೆ. ಕಟ್ಟಡದ ಹೊರ ಪಾರ್ಶ್ವದಲ್ಲಿ ಮುಖ್ಯಮಂತ್ರಿಗಳು, ಸಂಸದರ, ಶಾಸಕರ, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಫೋಟೋಗಳನ್ನು ಹಾಕಿಸಿಕೊಂಡು ಪುಕ್ಕಟೆ ಪ್ರಚಾರ ಪಡೆಯಲು ಮಾತ್ರ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ .ಇನ್ನಾದರೂ ಹಾಳಾಗಿರುವ ಶುದ್ಧಗಂಗಾ ಘಟಕ ದುರಸ್ತಿಪಡಿಸಿ ಶುದ್ಧ ಕುಡಿಯುವ ನೀರು ಒದಗಿಸಬಹುದೆಂದು ನಿರೀಕ್ಷೆಯಲ್ಲಿದ್ದಾರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author