112 ತುರ್ತು ಸಂಖ್ಯೆಯ ಬಗ್ಗೆ ಸಾರ್ವಜನಿಕರು, ಯುವಕರಿಗೆ ಸವಿಸ್ತಾರವಾಗಿ ಸಿಬ್ಬಂದಿಗಳಾದ ವಿಠಲ ಜಿ ಚಿಂಚಲಿ #avintvcom
1 min read
ಎಂಕೆ ಹುಬ್ಬಳ್ಳಿ ಪಟ್ಟಣದಲ್ಲಿ ಕಿತ್ತೂರು, ನಂದಗಡ ಪೊಲೀಸ್ ಠಾಣೆಗಳ ವತಿಯಿಂದ 112 ತುರ್ತು ಸಂಖ್ಯೆಯ ಜಾಗೃತಿಗೆ ಕೈ ಜೋಡಿಸಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್
ಸ್ಥಳ: ಎಂಕೆ ಹುಬ್ಬಳ್ಳಿ
ಹೌದು ಇಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಎಂಕೆ ಹುಬ್ಬಳ್ಳಿ ಉಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಟ್ಟಣದಲ್ಲಿ ಇಂದು ಕಿತ್ತೂರು, ನಂದಗಡ ಪೊಲೀಸ್ ಠಾಣೆಗಳ ಸಹಯೋಗದಲ್ಲಿ 112 ತುರ್ತು ಸಂಖ್ಯೆಯ ಬಗ್ಗೆ ಸಾರ್ವಜನಿಕರು, ಯುವಕರಿಗೆ ಸವಿಸ್ತಾರವಾಗಿ ಸಿಬ್ಬಂದಿಗಳಾದ ವಿಠಲ ಜಿ ಚಿಂಚಲಿ, ಉಮೇಶ್ ಪಟ್ಟೆಡ್ ಹಾಗೂ ಎಚ್ ಎಂ ನೆತಗಟ್ಟಿ ಯವರು ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯ ಉಪ ಸಂಘಟನಾ ಕಾರ್ಯದರ್ಶಿ ಬಸವರಾಜು ಕೈ ಜೋಡಿಸಿ ಮಾತನಾಡಿ ಇದು ದೇಶದ ಜನತೆಗೆ ಕೇಂದ್ರ ಸರ್ಕಾರವು ಏಕರೂಪದ ತುರ್ತು ಸಂಖ್ಯೆಯನ್ನು ಜಾರಿಗೆ ತೆಗೆದುಕೊಂಡು ಬಂದಿದ್ದು ಇದರ ಉಪಯೋಗವನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು 112 ಸಂಖ್ಯೆಯ ಮಾಹಿತಿ ಪತ್ರಗಳನ್ನು ವಿತರಣೆ ಮಾಡಿದರು💐🖋️🙏ವಂದನೆಗಳು. ಶ್ರೀ ಬಸವರಾಜು. ರಾಜ್ಯ ಉಪ ಸಂಘಟನಾ ಕಾರ್ಯದರ್ಶಿ. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್