ದಾದಾಸಾಹೇಬ ಪಾಟೀಲ ಅವರ 43 ನೇ ಜನ್ಮದಿನದ ಕಾರ್ಯಕ್ರಮ ನಡೆಯಿತು #avintvcom
1 min read
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಪರಿತಕನವಾಡಿ ಗ್ರಾಮದಲ್ಲಿ ಕರ್ನಾಟಕ ಶಿವಸೇನೆ ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ದಾದಾಸಾಹೇಬ ಪಾಟೀಲ ಅವರ 43 ನೇ ಜನ್ಮದಿನದ ಕಾರ್ಯಕ್ರಮ ನಡೆಯಿತು ಈ ಸಮಾರಂಭದಲ್ಲಿ ಕಾಗವಾಡ ಪಿ ಎಸ್ ಐ ಹಣಮಂತ ಧರ್ಮಟ್ಟಿ ಅವರು ಆಗಮಿಸಿ.ಸನ್ಮಾನ ಸ್ವೀಕರಿಸಿ ಹುಟ್ಟು ಸಾವುಗಳ ನಡುವೆ ನಾವು ಸಮಾಜ ಮುಖಿ ಕೆಲಸ ಮಾಡಬೇಕು.ಇಂತಹ ಕೆಲಸವನ್ನು ದಾದಾ ಸಾಹೇಬ ಪಾಟೀಲರು ಜಾತಿ ಭೇದ ಮಾಡದೆ ಬಡವ ಶ್ರೀಮಂತ ಅನ್ನದೆ ಸಮಾಜ ಮುಖಿ ಕೆಲಸ ಮಾಡುತ್ತಿರುವದು ಶ್ಲಾಘನೀಯ ವಾದದ್ದು ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ, ಕಾಂಗ್ರೆಸ್ ಮುಖಂಡ ವೀರಭದ್ರಪ್ಪ ಕಟಗೇರಿ, ಶಿವಸೇನೆ ಜಿಲ್ಲಾ ಕಾರ್ಯದರ್ಶಿ ರೂಪಾಲಿ ಪಾಟೀಲ,ಮಹಾದೇವ ಕಟಗೇರಿ ,ಜಯಂದ್ರ ಶೆಟ್ಟಿ ,ಪರಶುರಾಮ ನಾಯಕ ,ಜ್ನ್ಯಾನೇಶ್ವರ ಮಲ್ಲೆವಾಡಿ,ಎಂ ಎ ಗಾಣಿಗೇರ ಹಾಗೂ ಮುಂತಾದವರು ಉಪಸ್ಥಿತರಿದ್ದರು.ಇದೆ ಸಂದರ್ಭದಲ್ಲಿ ಮದಭಾವಿ ಗ್ರಾಮದಲ್ಲಿರುವ ಶ್ರೀ ಶಾರದಾ ಮಾತಾ ಬುದ್ಧಿ ಮಾಂದ್ಯ ಮಕ್ಕಳ ಶಾಲೆಗೆ ಕರ್ನಾಟಕ ಸರ್ಕಾರದಿಂದ ರಾಜ್ಯ ಮಟ್ಟದ ಪ್ರಶಸ್ತಿ ಪಡೆಡಿದ್ದರಿಂದ ಸಂಸ್ಥಾಪಕರಾದ ಶಂಕರ ಶಿಂಧೆ ಅವರಿಗೆ ಸನ್ಮಾನಿಸಲಾಯಿತು.