AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೊಟ್ಟಿಗೆಹಾರದಿಂದ ಹೊರನಾಡು ರಸ್ತೆಯಲ್ಲಿ ನಾಲ್ಕೈದು ಕಿ.ಮಿ ಸಾಗಿದರೆ ಅಲ್ಲೊಂದು ಸರ್ಕಲ್ ಎದುರಾಗುತ್ತದೆ. #avintvcom

1 min read

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

ಬಾಳೂರು ಸರ್ಕಲ್ ಮತ್ತು ಗರಿಗರಿ ಗೋಲಿಬಜ್ಜಿ

 

ಕೊಟ್ಟಿಗೆಹಾರದಿಂದ ಹೊರನಾಡು ಕಡೆಗೆ ಸಾಗುವ ರಸ್ತೆಯಲ್ಲಿ ನಾಲ್ಕೈದು ಕಿ.ಮಿ ಸಾಗಿದರೆ ಅಲ್ಲೊಂದು ಸರ್ಕಲ್ ಎದುರಾಗುತ್ತದೆ. ಅದು ಬಾಳೂರು ಸರ್ಕಲ್. ಆ ಸರ್ಕಲ್ ನ ಬಿಂದುವಿಂದ ಹೊರಟ ಒಂದು ರಸ್ತೆ ಹೊರನಾಡು ಕಡೆಗೆ ಹೊರಟರೆ ಮತ್ತೊಂದು ಬಾಳೆಹೊನ್ನೂರು, ಶೃಂಗೇರಿ ಕಡೆಗೆ ಸಾಗುತ್ತದೆ. ಮತ್ತೊಂದು ಕೊಟ್ಟಿಗೆಹಾರ ಮೂಲಕ ಧರ್ಮಸ್ಥಳಕ್ಕೆ ಸಾಗುತ್ತದೆ. ಬಾಳೂರು ಸರ್ಕಲ್ ನಲ್ಲಿ ವಿವಿದೆಡೆ ಹೋಗುವ ಪ್ರಯಾಣಿಕರು ಕಾದು ನಿಂತ ದೃಶ್ಯ ನಿಮಗೆ ಸಾಮಾನ್ಯವಾಗಿ ಇಲ್ಲಿ ಕಂಡು ಬರುತ್ತದೆ. ಆ ಸರ್ಕಲ್ ಗೆ ಹೊಂದಿಕೊಂಡಂತೆ ಇರುವ ಸವಿತಾ ಕ್ಯಾಂಟಿನ್ ನ ಗೋಲಿ ಬಜ್ಜಿಯ ಘಮ ಎಲ್ಲೆಡೆ ಆವರಿಸಿ ಬಾಯಿ ಚಪ್ಪರಿಸುವಂತೆ ಮಾಡುತ್ತದೆ‌.ಹಲವಾರು ವರ್ಷಗಳಿಂದ ಜನಮನದಲ್ಲಿ ಪ್ರಸಿದ್ದವಾಗಿರುವ ಈ ಕ್ಯಾಂಟಿನ್ ನ ಮಾಲೀಕ ಶ್ರೀನಿವಾಸ್. ಸ್ಥಳೀಯರ ಪಾಲಿಗೆ ಇವರು ‘ಸೀನಿ’ . ಬಾಳೂರು ಸುತ್ತಮುತ್ತ ಇರುವ ಕಾಫಿ ತೋಟಗಳ ಕಾರ್ಮಿಕರು, ಸ್ಥಳೀಯರು, ವಿದ್ಯಾರ್ಥಿಗಳು ಇವರ ಕ್ಯಾಂಟಿನ್ ನ ಗ್ರಾಹಕರು, ಸಂಜೆ ಕಾಫಿ, ಟಿ‌ ನೊಂದಿಗೆ ಗರಿಗರಿಯಾದ ಗೋಲಿಬಜ್ಜಿ ಸವಿಯಲು ಬರುವ ಗ್ರಾಹಕರು. ಕಾಫಿ ಟಿ ನೊಂದಿಗೆ ಗೋಲಿ ಬಜ್ಜಿಯನ್ನು ಸೇವಿಸುತ್ತಾರೆ. ಸವಿತಾ ಕ್ಯಾಂಟಿನ್ ಮಾಲೀಕ ಶ್ರೀನಿವಾಸ ಅವರ ತಂದೆ ಈಶ್ವರ್ ಅವರು ಈ ಕ್ಯಾಂಟಿನನ್ನು ಹಲವು ದಶಕಗಳ ಹಿಂದೆ ಪ್ರಾರಂಬಿಸಿದ್ದು ಈಗ ಶ್ರೀನಿವಾಸ್ ದಂಪತಿಗಳು ಇ ಕ್ಯಾಂಟಿನ್ ನ್ನು ನಡೆಸಿಕೊಂಡು ಹೋಗುತ್ತಿದ್ದಾರೆ‌. ಬಿಡುವಿನ ಸಮಯದಲ್ಲಿ ಈಶ್ವರ್ ಅವರು ಕೂಡ ಕ್ಯಾಂಟಿನ್ ನಲ್ಲಿದ್ದು ಗ್ರಾಹಕರಿಗೆ ಸೇವೆ ನೀಡುತ್ತಾರೆ. ಕ್ಯಾಂಟಿನ್ ನ ಹೊರ ಭಾಗದಲ್ಲಿ ಕುದಿಯುವ ಎಣ್ಣೆಯಲ್ಲಿ ಕರಿದ ಗರಿಗರಿಯಾದ ಗೋಲಿಬಜ್ಜಿಯನ್ನು ಸ್ಥಳೀಯ ಹಾಗೂ ಪ್ರವಾಸಿ ಗ್ರಾಹಕರು ಇಷ್ಟ ಪಟ್ಟು ಸೇವಿಸಿದ್ದರೆ ಮತ್ತೆ ಕೆಲವರು ಮನೆಗೆ ಪಾರ್ಸಲ್ ತೆಗೆದುಕೊಂಡು ಹೋಗುತ್ತಾರೆ.  ನೀವು ಹೊರನಾಡು ಶೃಂಗೇರಿಗೆ ಬಾಳೂರು ಮಾರ್ಗವಾಗಿ  ಪ್ರವಾಸ ಬಂದರೆ ಸರ್ಕಲ್ ನಲ್ಲಿ ಕೆಲ ನಿಲ್ಲಿಸಿ ಗೋಲಿಬಜ್ಜಿಯನ್ನು ಸವಿಯಬಹುದು

 

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

About Author