AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರಿ ಪ್ರೌಢಶಾಲೆಯಲ್ಲಿ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. #avintvcom

1 min read

ಕೊಟ್ಟಿಗೆಹಾರ, ಬಣಕಲ್ನಲ್ಲಿ 72ನೇ ಗಣರಾಜ್ಯೋತ್ಸವ ಸವi ಸಮಾಜ ಕಟ್ಟಲು ಸಂವಿಧಾನದ ಪಾತ್ರ ಮುಖ್ಯ: ಡಿ.ಟಿ.ನವೀನ್ ಕುಮಾರ್ ದೇಶವು ವಿಶ್ವವೇ ಗೌರವಿಸುವ ಸಂವಿಧಾನ ಹೊಂದಿದ್ದು, ಸಮ ಸಮಾಜ ಕಟ್ಟಲು ಸಂವಿಧಾನದ ಪಾತ್ರ ಮುಖ್ಯ ಎಂದು ಬಣಕಲ್ ಜೆಸಿಐ ವಿಸ್ಮಯದ ಅಧ್ಯಕ್ಷ ಡಿ.ಟಿ.ನವೀನ್ ಕುಮಾರ್ ಹೇಳಿದರು. ಕೊಟ್ಟಿಗೆಹಾರ ಸರ್ಕಾರಿ ಪ್ರೌಢಶಾಲೆಯಲ್ಲಿ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಅಖಂಡತೆ ಹಾಗೂ ಏಕತೆಗೆ ಯಾವುದೇ ದಕ್ಕೆ ಬಾರದಂತೆ ಭಾರತೀಯರಾದ ನಾವು ನೋಡಿಕೊಳ್ಳಬೇಕಿದೆ. ಯುವಕರು ಜೆಸಿಐನಂತಹ ಸಂಸ್ಥೆಗಳಿಗೆ ಸೇರಿ ವ್ಯಕ್ತಿತ್ವ ವಿಕಸನಗೊಂಡು ಉತ್ತಮ ಸತ್ಪ್ರಜೆಗಳಾಗಿ ಬದುಕಬೇಕು ಎಂದರು. ಜೆಸಿಐ ಪೂರ್ವಾಧ್ಯಕ್ಷ ಎನ್.ಟಿ.ದಿನೇಶ್ ಮಾತನಾಡಿ, ಭಾರತಕ್ಕೆ ಸಂವಿಧಾನ ತಂದು ಕೊಟ್ಟ ಮಹಾನೀಯ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಿ ದೇಶಕ್ಕಾಗಿ ನಾವೇನಾದರೂ ಒಳಿತು ಮಾಡಬೇಕು. ದೇಶದಲ್ಲಿ ನಾವು ಸುರಕ್ಷಿತವಾಗಿದ್ದೇವೆ ಎಂದರೆ ದೇಶದ ಸೈನಿಕರ ಕೊಡುಗೆಯಾಗಿದೆ ಎಂದರು. ಸರ್ಕಾರಿ ಪ್ರೌಢಶಾಲೆಯ ಸಮಿತಿ ಅಧ್ಯಕ್ಷ ಸಂಜಯ್ಗೌಡ ಮಾತನಾಡಿ ದೇಶದಲ್ಲಿ ರಾಜ್ಯರ ಆಳ್ವಿಕೆಯಿಂದ ಬ್ರಿಟಿಷರು ಭಾರತವನ್ನು ಆಳಿದರು. ಬ್ರಿಟಿಷರನ್ನು ದೇಶದಿಂದ ಓಡಿಸಲು ಮಹಾನೀಯರು ಸಂಘಟಿತವಾಗಿ ಹೋರಾಟ ಮಾಡಿದರು. ಇದರಿಂದ ಭಾರತ ದೇಶ ಸಂಘಟಿತವಾಗಿ ಇರುವಂತೆ ಅವರು ನಮಗೆ ಪ್ರೇರಣೆಯಾದರು ಎಂದರು. ಈ ಸಂದರ್ಭದಲ್ಲಿ ಸ್ಥಳಿಯರಾದ ಉಮೇಶ್ ಬಾಳೂರು ಅವರನ್ನು ಸನ್ಮಾನಿಸಲಾಯಿತು. ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ.ಭರತ್, ನಿರ್ದೇಶಕ ಎ.ಆರ್.ಅಭಿಲಾಷ್, ಜೇಸಿರೆಟ್ ಅಧ್ಯಕ್ಷೆ ಮಧುರಾಕವೀಶ್, ಸೌಮ್ಯ ಶೆಟ್ಟಿ, ಸ್ವಾತಿನವೀನ್, ಸುರೇಂದ್ರ ಕೋಳೂರು, ಬಿ.ಎ.ಕವೀಶ್, ಅತ್ತಿಗೆರೆ ಸರ್ಕಾರಿ ಪ್ರಾಥಮಿಕ ಶಾಲಾ ಸಮಿತಿ ಅಧ್ಯಕ್ಷ ಕಾಂತರಾಜು,ಮುಖ್ಯ ಶಿಕ್ಷಕಿ ಪ್ರಭಾವತಿ, ಹಾಗೂ ಶಾಲೆಯ ಶಿಕ್ಷಕವರ್ಗ ಹಾಗೂ ಸಿಬ್ಬಂದಿ ಇದ್ದರು. ವಿವಿದೆಡೆ ಗಣರಾಜ್ಯೋತ್ಸವ ಕಾರ್ಯಕ್ರಮ ಬಣಕಲ್, ಕೊಟ್ಟಿಗೆಹಾರದಲ್ಲಿ ವಿವಿದೆಡೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕೊಟ್ಟಿಗೆಹಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣವನ್ನು ಮುಖ್ಯ ಶಿಕ್ಷಕ ಡಿ.ರಾಜು, ಏಕಲವ್ಯ ವಸತಿ ಶಾಲೆಯಲ್ಲಿ ಧ್ವಜಾರೋಹಣವನ್ನು ಶಿಕ್ಷಕಿ ಅಕ್ಷತಾ ನೆರವೇರಿಸಿದರು. ಪ್ರಾಂಶುಪಾಲ ನಾಗರಾಜ್ ಇದ್ದರು. ತರುವೆ ಗ್ರಾ.ಪಂ.ಯಲ್ಲಿ ಅಧ್ಯಕ್ಷೆ ರವಿಕಲಾ ಪೈ ಧ್ವಜಾರೋಹಣ ನೆರವೇರಿಸಿದರು. ಬಣಕಲ್ ಪ್ರೌಢಶಾಲೆಯಲ್ಲಿ ಧ್ವಜಾರೋಹಣವನ್ನು ಶಾಲಾ ಸಮಿತಿಯ ಅಧ್ಯಕ್ಷ ಬಿ.ಎ.ಜಯರಾಮ್ಗೌಡ ನೆರವೇರಿಸಿದರು. ನಿರ್ದೇಶಕ ಜಖಾವುಲ್ಲಾ, ಮುಖ್ಯ ಶಿಕ್ಷಕ ಪಿ.ವಾಸುದೇವ್ ಇದ್ದರು. ನಜರೆತ್ ಶಾಲೆಯಲ್ಲಿ ಧ್ವಜಾರೋಹಣವನ್ನು ಶಾಲಾ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ ನೆರವೇರಿಸಿದರು. ವಿದ್ಯಾಭಾರತಿ ಶಾಲೆಯಲ್ಲಿ ಧ್ವಜಾರೋಹಣವನ್ನು ಸಮಿತಿ ಅಧ್ಯಕ್ಷ ಬಿ.ಶಿವರಾಮಶೆಟ್ಟಿ ನೆರವೇರಿಸಿದರು. ರಿವರ್ ವ್ಯೂವ್ ಶಾಲೆಯಲ್ಲಿ ಶಾಲಾ ಸಮಿತಿಯ ಅಧ್ಯಕ್ಷ ಅಹಮ್ಮದ್ ಬಾವಾ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕಿ ರಾದಾ ಕಾರ್ಯಪ್ಪ ಇದ್ದರು. ಬಣಕಲ್ ಗ್ರಾ.ಪಂ.ನಲ್ಲಿ ಧ್ವಜಾರೋಹಣವನ್ನು ಅಧ್ಯಕ್ಷ ಜಿ.ಸತೀಶ್ ಮತ್ತಿಕಟ್ಟೆ ನೆರವೇರಿಸಿದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author