AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇ ಬಾರಿಯ ಸಂಕ್ರಾತಿ ಹಬ್ಬದ ಆಚರಣೆಯನ್ನು ಉಪಾಧ್ಯಕ್ಷರಾದ ಮಹಮದ್ಇರ್ಷಾದ್ ರವರ ಮನೆಯಲ್ಲಿ ಆಚರಿಸಲಾಯಿತು.#avintvcom

1 min read
Featured Video Play Icon

ಸೌಹಾರ್ದ ಸಂಕ್ರಾಂತಿ

ಜೇಸಿಐ ಮೂಡಿಗೆರೆ.

ಇ ಬಾರಿಯ ಸಂಕ್ರಾತಿ ಹಬ್ಬದ ಆಚರಣೆಯನ್ನು ಜೇಸಿಐ ಮೂಡಿಗೆರೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಜೇಸಿ ಉಪಾಧ್ಯಕ್ಷರಾದ ಮಹಮದ್ಇರ್ಷಾದ್ ರವರ ಮನೆಯಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜೇಸಿ ಪೂರ್ವಾಧ್ಯಕ್ಷರಾದ ಆಶೋಕ್ ಎಂ.ಎಸ್  ಹಾಗೂ ಜೇಸಿ ಪೂರ್ವಾಧ್ಯಕ್ಷರಾದ ವಿಜಯ ಕುಮಾರ್ ಮತ್ತು ಜೇಸಿರೇಟ್ ಪೂರ್ವಾಧ್ಯಕ್ಷರು ಹಾಗು ಪೂರ್ವ ವಲಯಾದಿಕಾರಿಯಾದ ಪವನವಿಜಯ ಕುಮಾರ ಇದ್ದರು. ಕಾರ್ಯಕ್ರಮಕ್ಕೆ ಜೇಸಿ ಖಜಾಂಚಿ ಹಮೀದ್ ಸಬ್ಬೇನಹಳ್ಳಿ ರವರು ಮತ್ತು ಜೇಸಿರೇಟ್ ನಿಕಟ ಪೂರ್ವಾಧ್ಯಕ್ಷರಾದ ವಿದ್ಯಾರಾಜು ಇದ್ದರು.

ಜೇಸಿ ಪೂರ್ವಾಧ್ಯಕ್ಷರಾದ ಎಂ.ಎಸ್.ಅಶೋಕ ರವರು ಮಾತನಾಡಿ  ಸಂಕ್ರಾಂತಿ ಹಬ್ಬ ರೈತರು ಬೆಳೆದ ಪಸಲನ್ನು ಕಣದಲ್ಲಿ ಇಟ್ಟು  ಪೂಜೆ ಮಾಡಿ ಎಲ್ಲರೂ ಏಳ್ಳು ಬೆಲ್ಲ ಕಬ್ಬು ಹಂಚಿ ಹೊಸ ವರುಷದ ಮೊದಲ

ತಿಂಗಳ ಹಬ್ಬವನ್ನು ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾನಾಡುವುದು ಈ ಸಂಕ್ರಾಂತಿ ಹಬ್ಬದ ವಿಶೇಷ.

ಹಾಗೂ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದು

ದಿಕ್ಕು ಬದಲಾಯಿಸುವುದು ಹಾಗೂ ಹಳ್ಳಿಯಲ್ಲಿ ಈ ಹಬ್ಬದಂದು ಮನೆಯ ಮಂಭಾಗದ ಬಾಗಿಲಿಗೆ ರಂಗೋಲಿ ಹಾಕುವುದು ವಿಶೇಷ

ಎಲ್ಲಾರು ಜಾತಿ ಭೇದ ಮರೆತು ಸೌಹಾರ್ದ ಹಬ್ಬವನ್ನು ಆಚರಿಸುತ್ತೆವೆ ಎಂದು ತಿಳಿಸಿದರು.

ಜೇಸಿ ವಿಜಯ ಕುಮಾರ್ ಮಾತನಾಡಿ ಸೌಹಾರ್ದವಾಗಿ ಬದುಕಿದರೆ ಜೀವನ ಅರ್ಥ ಪೂರ್ಣ ಎಂದರು.

ಪವನವಿಜಯ್ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಹಬ್ಬದ ವಾತವರಣ ಕಳೆಗಟ್ಟುತ್ತಿಲ್ಲ.ಮಹಿಳೆಯರು ಆಸಕ್ತಿ ವಹಿಸಬೇಕಾಗುತ್ತದೆ ಎಂದರು.

ಜೇಸಿ ಹಮೀದ್ ಸಬ್ಬೇನಹಳ್ಳಿ ಮಾತಾಡಿ ಎಲ್ಲ ದರ್ಮದ ಹಬ್ಬಗಳು ಭಗವಂತನನ್ನು ಪೂಜಿಸುವಂತವು.ಕಂದಚಾರ,ಮೂಡನಂಬಿಕೆಯಿಂದ ಕೂಡಿರಬಾರದು.ಮಾನವಿಯತೆಯಿಂದ ಬದುಕುವುದೆ ನಿಜವಾದ ದರ್ಮ ಎಂದರು.

ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ದಾರ್ಮಿಕ ನಂಬಿಕೆಯುಳ್ಳವರು ಸಂತೊಷವಾಗಿ ಇರಲು ಸಾದ್ಯ. ಪೂರ್ವಜರ ಆಚರಣೆ ನಮಗೆ ಉತ್ತಮ ಸಂಬಂದ ಕಲ್ಪಿಸುವಲ್ಲಿ ಸಹಕಾರಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರಾಜು.ರಾಣಿಚಂದ್ರಶೇಕರ್.ಇದ್ದರು.

ಎಲ್ಲರಿಗು ಎಳ್ಳು ಬೆಲ್ಲ ಹಂಚಲಾಯಿತು.

 

ಮಹಮದ್ ಇರ್ಷಾದ್ ರವರು ಲಘು ಉಪಹಾರ ಏರ್ಪಡಿಸಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author