ಎತ್ತುಗಳ ಓಟದ ಸ್ಪರ್ಧೆ ವೇಳೆ ಮೇಲೆ ನುಗ್ಗಿದ ಬಂಡಿ:ಪ್ರೇಕ್ಷಕರ ನಿರ್ಲಕ್ಷ್ಯ #avintvcom
1 min read
ಎತ್ತುಗಳ ಓಟದ ಸ್ಪರ್ಧೆ ವೇಳೆ ಮೇಲೆ ನುಗ್ಗಿದ ಬಂಡಿ:ಪ್ರೇಕ್ಷಕರ ನಿರ್ಲಕ್ಷ್ಯ
ಹಾಸನ:ಸಂಕ್ರಾಂತಿ ಸಂದರ್ಭ ಕಿಚ್ಚಾಯಿಸುವುದು,ಜಾನುವಾರು ಜಾತ್ರೆ,ತಮಿಳುನಾಡಿನಲ್ಲಿ ಜೆಲ್ಲಿಕಟ್ಟು ಹೀಗೆ ದುಡಿದ ರೈತರಿಗೂ,ಎತ್ತುಗಳಿಗೆ ಒಂದಷ್ಟು ಬಿಡುವಿನ ಸಂದರ್ಭ ನಡೆಯುವ ಸ್ಪರ್ಧೆ ಆಚರಣೆ.ಹೀಗೆ ಜಿಲ್ಲೆಯ ಬೆಮ್ಮತ್ತಿಯಲ್ಲಿ ರಾಜ್ಯದ ವಿವಿದೆಡೆಗಳಿಂದ ಆಗಮಿಸುವ ಎತ್ತುಗಳು ಬಂಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ.ವಿಶಾಲವಾದ ಜಮೀನಿನಲ್ಲಿ ಚೀಟಿ ಮೂಲಕ ಪರಸ್ಪರ ಎದುರಾಳಿಗಳನ್ನು ನಿಗಧಿಪಡಿಸಿ ಬಹುಮಾನಕ್ಕೆ ನಡೆಯುವ ಈ ಸ್ಪರ್ಧೆಯಲ್ಲಿ ಒಂದು ಅನಾಹುತ ಸಂಭವಿಸಿದೆ.ತೀರ್ಪುಗಾರರು ಸೂಚನೆ ನೀಡುತ್ತಿದ್ದಂತೆ ನಿಗಧಿಪಡಿಸಿದ ಹಾದಿಯಲ್ಲಿ ಓಡಲು ಆರಂಭಿಸುವ ಬಂಡಿಯಲ್ಲಿ ಒಂದು ಎತ್ತಿನ ಬಂಡಿ ಮೈಮರೆತು ನೋಡುತ್ತಿದ್ದ ಪ್ರೇಕ್ಷಕರ ಮೇಲೆ ನುಗ್ಗಿದ ಪ್ರಸಂಗ ನಡೆದಿದೆ. ಕೊರೊನಾ ಹಿನ್ನಲೆಯಲ್ಲಿ ಜಾತ್ರೆ,ಸಮಾರಂಭಗಳಿಗೆ ನಿಷೇಧ ವಿದ್ದರೂ ಇಂತಹಾ ಸ್ಪರ್ಧೆ ನಡೆದಿದ್ದು ಸ್ವಲ್ಪದರಲ್ಲೇ ಅನಾಹುತ ತಪ್ಪಿದ್ದಂತಾಗಿದೆ.