ಕಾರ್ಮಿಕನ ಮೇಲೆ ಎರಡು ಕರಡಿಗಳು ದಾಳಿ ನಡೆಸಿದ ಘಟನೆ ಪೊನ್ನಂಪೇಟೆ ತಾಲೂಕಿನ ಬಾಳಲೆ ಹೋಬಳಿಯಲ್ಲಿ ನಡೆದಿದೆ. #avintvcom
1 min read
ಕರಡಿ ದಾಳಿ,ವ್ಯಕ್ತಿ ಗಂಭೀರ ಕೊಡಗು- ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ಎರಡು ಕರಡಿಗಳು ದಾಳಿ ನಡೆಸಿದ ಘಟನೆ ಪೊನ್ನಂಪೇಟೆ ತಾಲೂಕಿನ ಬಾಳಲೆ ಹೋಬಳಿಯಲ್ಲಿ ನಡೆದಿದೆ. ಬಾಳಲೆ ಗ್ರಾಮದ ತಟ್ಟೆಕೆರೆ ಕಾಲೋನಿ ನಿವಾಸಿ ಕುರುಬರ ರಾಜು (40)ಕರಡಿ ದಾಳಿಯಿಂದ ತೀವ್ರ ಘಸಿ ಗೊಂಡಿದ್ದಾರೆ. ಕೈ ,ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಕರಡಿ ದಾಳಿ ನಡೆಸಿದೆ. ರಾಜು ಅವರ ದೇಹದ ತಂಬ ಪರಚಿದ ಗಾಯಗಳಗಿದ್ದು ರಕ್ತಸ್ರವ ಗೊಂಡಿದೆ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗ್ಗೆ ಏಳು ಗಂಟೆಯ ಸಮಯದಲ್ಲಿ ತಟ್ಟೆಕೆರೆ ಕಾಲೋನಿಯಿಂದ ಜಾಗಲೆ ತೋಟವೊಂದಕ್ಕೆ ಕಾಫಿ ಹಣ್ಣು ಕೀಳಲು ರಾಜು ತೆರಳುತ್ತಿದ್ದರು. ಈ ಸಮಯದಲ್ಲಿ ಕರಡಿ ದಾಳಿ ನಡೆಸಿದೆ. ದಾಳಿಗೆ ಹೆದರಿದ ರಾಜು ಜೋರಾಗಿ ಕಿರುಚಿಕೊಂಡಿದ್ದಾರೆ ತಕ್ಷಣವೇ ಸಮೀಪದಲ್ಲೇ ಇದ್ದ ಹಾಡಿ ನಿವಾಸಿಗಳು ರಾಜು ಕಿರಿಚಿದ ಶಬ್ದವನ್ನು ಆಲಿಸಿ ಓಡಿ ಬಂದಾಗ ಕರಡಿಗಳು ಕಾಡಿನ ಒಳಗೆ ಓಡಿಹೋಗಿದೆ ಎಂದು ಹಾಡಿ ನಿವಾಸಿ ರಾಮು ಮಾಹಿತಿ ನೀಡಿದ್ದಾರೆ. 6 ಗಂಟೆಗೆ ಇದೆ ಕರಡಿಗಳು ಮಲ್ಚಿರಾ ವಿಠಲ ಎಂಬುವರ ತೋಟ ಕಾರ್ಮಿಕನನ್ನು ಅವರ ಗದ್ದೆಯ ಸಮೀಪದಲ್ಲಿ ದಾಳಿ ನಡೆಸಲು ಮುನ್ನುಗ್ಗಿದೆ ಸಮಯಪ್ರಜ್ಞೆಯಿಂದ ಕಾರ್ಮಿಕ ಪಾರಾಗಿದ್ದಾರೆ. ಇದೆ ಎರಡುಕರಡಿಗಳು ಏಳು ಗಂಟೆಗೆ ರಾಜುವಿನ ಮೇಲೆ ದಾಳಿ ನಡೆಸಿದೆ. ಕರಡಿ ದಾಳಿಗೆ ಒಳಗಾಗಿ ರಸ್ತೆಯಲ್ಲಿ ನರಳುತ್ತಿದ್ದ ರಾಜುವನ್ನು ಕಂಡ ಸ್ಥಳೀಯ ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ಚೆಕ್ಕರಾ ಸೂರ್ಯ ಅಯ್ಯಪ್ಪ ಅವರು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲು ಸಫಲರಾಗಿದ್ದಾರೆ. ಈ ಸಂದರ್ಭ ಮಾತನಾಡಿದ ಸೂರ್ಯ ಅಯ್ಯಪ್ಪ ಈಗಾಗಲೇ ಆನೆ ದಾಳಿ ಹುಲಿ ದಾಳಿಗಳಿಂದ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಕರಡಿ ದಾಳಿಯಿಂದ ಬೆಳೆಗಾರರು -ರೈತರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.