AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜೆಸಿಐ ಮೂಡಿಗೆರೆ ಹಾಗು ವಿವೇಕಾನಂದ ಜಾಗೃತ ಬಳಗದ ವತಿಯಿಂದ ವಿವೇಕಾನಂದ ರ 119.ನೆ ಜಯಂತಿಯನ್ನು ನಡೆಸಲಾಯಿತು.#avintvcom

1 min read
Featured Video Play Icon

ತಾ:12.01.2021.ರ ಮಂಗಳವಾರ ಸಂಜೆ 5.30.ಕ್ಕೆ ಜೆಸಿಐ ಮೂಡಿಗೆರೆ ಹಾಗು ವಿವೇಕಾನಂದ ಜಾಗೃತ ಬಳಗದ ವತಿಯಿಂದ ವಿವೇಕಾನಂದ ರ 119.ನೆ ಜಯಂತಿಯನ್ನು ಮೂಡಿಗೆರೆ ವಿವೇಕಾನಂದ ಜಾಗ್ರುತ ಬಳಗದ ಆಶ್ರಮದಲ್ಲಿ ನಡೆಸಲಾಯಿತು.
ಸಭೆಯನ್ನು ಉದ್ಘಾಟಿಸಿದ ಮೂಡಿಗೆರೆ ತಾ:ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ ಮಾತನಾಡಿ ವಿವೇಕಾನಂದರ ಆದರ್ಶಗಳನ್ನು ಮೌಲ್ಯ ಗಳನ್ನು ನಾವು ಎತ್ತಿ ಹಿಡಿಯಬೇಕಾಗಿದೆ.
ಈಗಾಗಲೇ ಆನೇಕ ಸಾದು ಸಂತರು ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ.
ಮುಂದೆ ಯಾರು ಸಹ ಉತ್ತಮ ಮೌಲ್ಯದ ಬಗ್ಗೆ ಮಾತನಾಡಲು ಬರುವುದಿಲ್ಲ.
ಅನುಷ್ಟಾನ ಬಾಕಿ ಇದೆ ಎಂದರು.ಅವುಗಳನ್ನು ಅನುಷ್ಠಾನಗೊಳಿಸದಿದ್ದರೆ ಮಾನವ ಕುಲಕ್ಕೆ ಆಪತ್ತು.
ಯಾವುದೆ ಸಂಘ ಸಂಸ್ತೆ ರಾಜಕೀಯ ಪಕ್ಷದಲ್ಲಿದ್ದರು ಅದರ ಉದ್ದೇಶಗಳನ್ನು ಮೊದಲು ತಿಳಿದುಕೊಳ್ಳಬೇಕು.ಇಲ್ಲದಿದ್ದರೆ ಬರಿ ಹುದ್ದೆ ಅಲಂಕರಿಸಿ ಯಾವ ವಿಚಾರಗಳನ್ನು ತಿಳಿದುಕೊಳ್ಳದೆ ಇರಬೇಕಾಗುತ್ತೆ.
ಉತ್ತಮರು ಮಾತ್ರ ಜಾಗ್ರುತ ಬಳಗಕ್ಕೆ ಬರಬೇಕು ಎಂದೆನಿಲ್ಲ.ಇಲ್ಲಿಗೆ ಬಂದು ಒಳ್ಳೆಯರಾಗಬಹುದು .
ಇ ಆಶ್ರಯದಲ್ಲಿ ಇರುವ ಸ್ವಚ್ಚತೆ ನಿಮ್ಮ ಮನೆಯಲ್ಲಿ ಇಟ್ಟು ಕೊಳ್ಳಿ ಮನಸ್ಸು ಸ್ತಿಮಿತತೆಯಲ್ಲಿರುತ್ತದೆ ಎಂದು ಮಹಿಳೆಯರಿಗೆ ಕರೆ ನೀಡಿದರು.
ಜೇಸಿ ಅಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ ಮಾನಸಿಕ ಸಮತೊಲನಕ್ಕೆ ಈ ಆಶ್ರಮ ಪರಿಣಾಮ ಕಾರಿಯಾಗಲಿದೆ ಎಂದರು.
ರೋಟರಿ ಮಾಜಿ ಅಧ್ಯಕ್ಷ ವಿನೊದ್.ಮಲ್ನಾಡ್ ಗಲ್ಫ್ ಅಸೊಶಿಯೇಶನ್ ಅದ್ಯಕ್ಷ ಹಮೀದ್ ಸಬ್ಬೆನಹಳ್ಳಿ.ಜೇಸಿರೆಟ್ ಸುದಾಚಂದ್ರಶೇಕರ್.ಜೇಸಿ ಸದಸ್ಯರು. ವಿವೇಕ ಜಾಗ್ರುತ ಬಳಗದ ಸದಸ್ಯರು ಇದ್ದರು.ಮಣಿಕಂಠ ಸ್ವಾಗತಿಸಿ,
ಕಾರ್ಯದರ್ಶಿ ಶ್ರೆಷ್ಟಿ ವಂದಿಸಿದರು.

ವರದಿ:
ಮಗ್ಗಲಮಕ್ಕಿಗಣೇಶ.
ನ್ಯೂಸ್ ಬ್ಯೂರೊ.
ಅವಿನ್ ಟಿವಿ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author