ಸರ್ಕಾರದ ಮಾರ್ಗ ಸೂಚಿಯಂತೆ ಡ್ರೈರನ್ ಕಾರ್ಯಾಚರಣೆ: ಜಿಲ್ಲಾಧಿಕಾರಿಗಳು #avintvcom
1 min read
ಸರ್ಕಾರದ ಮಾರ್ಗ ಸೂಚಿಯಂತೆ ಡ್ರೈರನ್ ಕಾರ್ಯಾಚರಣೆ: ಜಿಲ್ಲಾಧಿಕಾರಿಗಳು
ಮಂಡ್ಯ ಜ.08 (ಕರ್ನಾಟಕ ವಾರ್ತೆ ):- ಮಂಡ್ಯ ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿಯವರಿಗೆ ವ್ಯಾಕ್ಸಿನ್ ಕೊಡುವುದರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿರುವಂತೆ ಜಿಲ್ಲೆಯ ಒಟ್ಟು ಏಳು ಕೇಂದ್ರಗಳಲ್ಲಿ ಡ್ರೈರನ್ ಅನ್ನು ಸಿದ್ದತೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಎಂ.ವಿ ವೇಂಕಟೇಶ್ ರವರು ತಿಳಿಸಿದರು.
ನಗರದ ಮಿಮ್ಸ್ನಲ್ಲಿ ನಡೆದ ಕರೋನ ಲಸಿಕೆ ಡ್ರೈರನ್ ಸಿದ್ದತೆಯನ್ನು ವೀಕ್ಷಿಸಿ ಮಾತನಾಡಿದ ಅವರು ಪ್ರತಿ ಕೇಂದ್ರದಲ್ಲಿಯೂ ಸಹ ವ್ಯಾಕ್ಸಿನ್ ಕೊಡಬೇಕಾದರೆ ಯಾವ ರೀತಿಯಾದಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾರ್ಯಾರಿಗೆ ಎμÉ್ಟಷ್ಟು ಸಮಯವನ್ನು ನಿಗದಿಪಡಿಸಿಕೊಳ್ಳಬೇಕು ಮತ್ತು ಏನಾದರೂ ಸಮಸ್ಯೆ ಉಂಟಾದರೆ ಯಾವ ರೀತಿ ನಿವಾರಣೆ ಮಾಡಬೇಕು ಎಂಬುದರ ಬಗ್ಗೆ ವಿಸ್ತೃತವಾದ ಮಾರ್ಗಸೂಚಿಗಳ ಪ್ರಕಾರ ಈ ದಿವಸ ಜಿಲ್ಲೆಯ ಮಿಮ್ಸ್ ಮೆಡಿಕಲ್ ಕಾಲೇಜ್, ಆದಿಚುಂಚನಗಿರಿ ಮೆಡಿಕಲ್ ಕಾಲೇಜ್, ಅರಕೆರೆ ಆಸ್ಪತ್ರೆ ಹಾಗೂ ಒಟ್ಟು ಏಳು ಕಡೆ ಈ ಡ್ರೈರನ್ ಅನ್ನು ಮಾಡಲಾಗಿದೆ ಎಂದು ತಿಳಿಸಿದರು.
ಪ್ರಮುಖವಾಗಿ ವೈದ್ಯರು ಮತ್ತು ಅರೆವೈದ್ಯ ಸಿಬ್ಬಂದಿಗಳಿಗೆ ಪ್ರಥಮವಾಗಿ ವ್ಯಾಕ್ಸಿನೇಷನ್ ಅನ್ನು ಕೊಡಲು ಕ್ರಮ ವಹಿಸಲಾಗುತ್ತz.É ಮಂಡ್ಯ ಜಿಲ್ಲೆಯಲ್ಲಿ ಒಟ್ಟು 13,200 ಜನರಿಗೆ ವ್ಯಾಕ್ಸಿನ್ ಕೊಡುವಂತಹ ಪ್ರಕ್ರಿಯೆ ಜನವರಿ 13 ರಿಂದ ಪ್ರಾರಂಭವಾಗುತ್ತದೆ ಎಂದರು.
ವ್ಯಾಕ್ಸಿನ್ ಪಡೆಯುವವರು ಪ್ರಥಮವಾಗಿ ಬಂದು ನೊಂದಾಯಿಸಿಕೊಳ್ಳಬೇಕಾಗುತ್ತದೆ, ನಂತರ ಅವರ ಐ.ಡಿ ಗೆ ಅನುಗುಣವಾಗಿ ವ್ಯಾಕ್ಸಿನ್ನನ್ನು ನೀಡಲಾಗುವುದು. ವ್ಯಾಕ್ಸಿನ್ ನೀಡಿದ ನಂತರ 30 ನಿಮಿಷಗಳ ಕಾಲ ಅವರನ್ನು ಪರೀಕ್ಷಿಸಲಾಗುತ್ತದೆ. ಅವರಲ್ಲಿ ಯಾವುದೇ ರೀತಿಯ ರಿಯಾಕ್ಷನ್ ಆಗದಿದ್ದ ಪಕ್ಷದಲ್ಲಿ ಅವರನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಒದಗಿಸಲಾಗುತ್ತದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಿಮ್ಸ್ ಆಸ್ಪತ್ರೆ ಮತ್ತು ಜಿಲ್ಲಾಡಳಿತ ಈ ಕೋವ್ಯಾಕ್ಸಿನ್ ಕೊಡುವುದಕ್ಕೆ ಎಲ್ಲ ರೀತಿಯಾದಂತಹ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಚ್ ಪಿ.ಮಂಚೇಗೌಡರವರು, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಎಂ .ಸಿ ಸೋಮಶೇಖರ್ರವರು, ಮಿಮ್ಸ್ ನ ಆಡಳಿತ ಮತ್ತು ಸಿಬ್ಬಂದಿ ವರ್ಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮಹಾರಾಷ್ಟ್ರದ ಕೆಲವು ಉದ್ಯಮಿಗಳ ಜೊತೆ ಚರ್ಚಿಸಿದಾಗ ಸೋಲಾಪುರ್, ನಾಸಿಕ್ ಜಿಲ್ಲೆಯಲ್ಲಿ 2 ಎಕರೆಯಲ್ಲಿ 5 ರಿಂದ 10 ಕೋಟಿ ಹೂಡಿಕೆ ಮಾಡಿ ಬೆಲ್ಲ ಮಾಡುವ ಕಾರ್ಖಾನೆಯನ್ನು ಪ್ರಾರಂಭಿಸಿದ್ದಾರೆ, ಈ ರೀತಿಯಾದಂತಹ ಕಾರ್ಖಾನೆಯನ್ನು ಮಂಡ್ಯದಲ್ಲಿ ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು. ಬೆಲ್ಲವನ್ನು ವೈಜ್ಞಾನಿಕವಾಗಿ ತಯಾರು ಮಾಡಿ ರಫ್ತು ಮಾಡಿದರೇ ಹೇಗೆ ಕೆಲವು ವರ್ತಕರು ವಜ್ರಗಳನ್ನು ರಫ್ತು ಮಾಡಿ ಹೆಚ್ಚು ಆದಾಯ ಗಳಿಸುತ್ತಿದ್ದಾರೆಯೋ ಅದೇ ರೀತಿ ನಾವು ಬೆಳೆಯುವುದಕ್ಕೆ ಸಾಧ್ಯ ಎಂದರು. ಸಣ್ಣಪುಟ್ಟ ಸವಾಲುಗಳನ್ನು ಮೆಟ್ಟಿ ಯುವಕರು ಸಾಧನೆಯನ್ನು ಮಾಡಿ ಎಂದರು. ನೀವು ಬೆಲ್ಲ ತಯಾರು ಮಾಡಲು 35% ಸಹಾಯಧನವನ್ನು ನೀಡಲಾಗುತ್ತದೆ. ಹೀಗಿರುವಾಗ ಆಲೆಮನೆಗಳನ್ನು ಆಧುನೀಕರಿಸಿ ಅದರ ಜೊತೆಗೆ ಅಲ್ಲಿ ತಯಾರು ಮಾಡುವ ಬೆಲ್ಲವನ್ನು ರಾಸಾಯನಿಕ ಮುಕ್ತ ಬೆಲ್ಲ ಎಂದು ಪ್ರಚಾರ ಮಾಡಿ, ಬ್ಯಾಂಕ್ಗಳಲ್ಲಿನ ಸಹಾಯಧನ, ಇನ್ನಿತರ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ ಎಂದರು.