ಕಿಡಿಗೇಡಿಗಳು ರಾತ್ರಿ ಪ್ಲೆಕ್ಸ್ ನ್ನು ಹರಿದು ಬೆಂಕಿ ಹಚ್ಚಿದ್ದಾರೆ. ಗ್ರಾಮಸ್ಥರ ಪ್ರತಿಭಟನೆ ‘ಅವಿನ್ ಟಿವಿ “M.G ವರದಿ.
1 min readಪ್ಲೆಕ್ಸ್ ಹರಿದ ಕಿಡಿಗೇಡಿಗಳು: ಮೂಡಿಗೆರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲು
ಮೂಡಿಗೆರೆ ತಾಲ್ಲೂಕಿನ ಮಗ್ಗಲಮಕ್ಕಿ ಗ್ರಾಮದಲ್ಲಿ ದಿನಾಂಕ 08-01-2021 ರ ಸಂಜೆ 5 ಗಂಟೆಗೆ zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಹಾನಾಯಕ ಧಾರಾವಾಹಿಯ 50 ನೇ ಸಂಚಿಕೆ ಪೂರೈಸಿದ ಹಿನ್ನಲೆಯಲ್ಲಿ ಶುಭಕೋರುವ ಪ್ಲೆಕ್ಸನ್ನು ಮಗ್ಗಲಮಕ್ಕಿ ಗ್ರಾಮಸ್ಥರೆಲ್ಲಾ ಸೇರಿ ಅನಾವರಣ ಮಾಡಿದ್ದರು.
ಶನಿವಾರ ರಾತ್ರಿ 10-30 ರ ಸುಮಾರಿಗೆ ಕಿಡಿಗೇಡಿಗಳು ಪ್ಲೆಕ್ಸ್ ನ್ನು ಹರಿದು ಬೆಂಕಿ ಹಚ್ಚಿದ್ದಾರೆ. ರಾತ್ರಿ ಬೆಂಕಿ ಹಚ್ಚಿರುವ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದಿದ್ದು ಕೂಡಲೇ ಮೂಡಿಗೆರೆ ಠಾಣೆಯಲ್ಲಿ ಮಗ್ಗಲಮಕ್ಕಿ ಗ್ರಾಮಸ್ಥರು ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಮೂಡಿಗೆರೆ ವೃತ್ತ ನಿರೀಕ್ಷಕ ಜಗನ್ನಾಥ್, ಪಿಎಸ್ಐ ರವಿ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪ್ಲೆಕ್ಸ್ ಹರಿದ ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು ಭಾನುವಾರ ಬೆಳಿಗ್ಗೆ ಗ್ರಾಮಸ್ಥರೆಲ್ಲರೂ ಮೂಡಿಗೆರೆ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು ತಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವೃತ್ತ ನಿರೀಕ್ಷಕ ಜಗನ್ನಾಥ್, ಈ ಬಗ್ಗೆ ತನಿಖೆ ನಡೆಸಿ ತಕ್ಷಣವೇ ಆರೋಪಿಗಳನ್ನು ಬಂದಿಸುವುದಾಗಿ ತಿಳಿಸಿದ್ದಾರೆ. ಸ್ಥಳದಲ್ಲಿ ಗ್ರಾಮದ ಮುಖಂಡರಾದ ಎಂ.ಎಸ್ ಆನಂದ್. ಎಮ್.ಎಚ್ ಸುರೇಶ್.ಎಂ.ಎಸ್ ಕೃಷ್ಣ. ಗ್ರಾಮ ಪಂಚಾಯತಿ ಸದಸ್ಯರಾದ ಜಿ.ಕೆ ರಘು, ಕುಸುಮ ಹಾಗೂ ಟಿಎಪಿಸಿಎಂಎಸ್ ಸದಸ್ಯರಾದ ಅಭಿಜಿತ್, ಎಂ.ಎಂ ಸುರೇಶ್ ಬಿಎಸ್ಪಿ ಮುಖಂಡರಾದ ಬಕ್ಕಿ ಮಂಜು, ಪಿ.ಕೆ ಮಂಜುನಾಥ್ ಹಾಗೂ ಗ್ರಾಮಸ್ಥರಾದ ಕೃಷ್ಣ, ನಾರಾಯಣ, ಎಂ.ಆರ್ ನರೇಂದ್ರ ಮುಂತಾದವರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ.
ಸ್ಥಾನಿಕ ಸಂಪಾದಕರು
ಅವಿನ್ ಟಿವಿ.