Zee ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ #avintvcom
1 min read
Zee ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಜೀವನಾಧಾರಿತ ಕಥೆ “ಮಹಾನಾಯಕ “ಧಾರಾವಾಹಿಯು 50 ನೇ ಸಂಚಿಕೆ ಪೂರೈಸಿದ ಹಿನ್ನೆಲೆಯಲ್ಲಿ
ವಾಹಿನಿಯ ಮುಖ್ಯಸ್ಥರಾದ ಶ್ರೀ ರಾಘವೇಂದ್ರ ಹುಣಸೂರ್ ರವರಿಗೆ ಹಾಗೂ ಧಾರಾವಾಹಿ ಯಲ್ಲಿ ಭಾಗವಹಿಸಿರುವ ಕಲಾವಿದರು, ತಂತ್ರಜ್ಞರಿಗೆ ಶುಭಕೋರುವ ನಿಟ್ಟಿನಲ್ಲಿ ಮೂಡಿಗೆರೆ ತಾಲೂಕಿನ “ಮಗ್ಗಲಮಕ್ಕಿ ” ಗ್ರಾಮಸ್ಥರು ತಾರೀಕು 08 01 2021 ರಂದು ಸಂಜೆ 5 00 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಇತ್ತೀಚಿಗೆ ಸುರಿಯುತ್ತಿರುವ ಅಕಾಲಿಕ ಬಿರು ಮಳೆಯಲ್ಲಿಯೂ ಸಹ ಉತ್ಸಾಹದಿಂದ ಎಲ್ಲರೂ ಪಾಲ್ಗೊಂಡಿದ್ದು ವಿಶೇಷ ವಾಗಿತ್ತು. ಜಾತ್ಯತೀತವಾಗಿ ಎಲ್ಲರೂ ಪಾಲ್ಗೊಂಡ ಈ ಕಾರ್ಯಕ್ರಮ ದಲ್ಲಿ ಊರಿನ ಹಿರಿಯ ರಾದ ಶ್ರೀ ಎಂ. ಲಕ್ಷ್ಮಣಗೌಡ, ಪ್ರಗತಿಪರ ಚಿಂತಕ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಎಂ ಕೆ ಗಣೇಶ್, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತ ಕವಿ ಶ್ರೀ ಹೆಚ್ ಆರ್ ವೆಂಕಟೇಶ್, ಯುವ ಮುಖಂಡರಾದ ಶ್ರೀ ಎಂ ಎಸ್ ಅಶೋಕ್, ಶ್ರೀ ಕೆ ಎಲ್ ಪ್ರದೀನ್ ಕುಮಾರ್
C P I M L ಜಿಲ್ಲಾ ನಿರ್ದೇಶಕರಾದ ಶ್ರೀ ಕೃಷ್ಣ, ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀ ಜಿ ಕೆ ಕುಮಾರ್, ಶ್ರೀಮತಿ ಕುಸುಮ ಸಂಜೀವ್, ದಲಿತ ಹೋರಾಟ ಗಾರರಾದ ಶ್ರೀ ಪಿ ಕೆ ಮಂಜುನಾಥ್, ಜಾನಪದ ಕಲಾವಿದರಾದ ಶ್ರೀ ಬಕ್ಕಿ ಮಂಜುನಾಥ್, ಶ್ರೀ ಜಯಪಾಲ್, ಶ್ರೀ ಎಂ ಹೆಚ್ ಸುರೇಶ್ ಮುಂತಾದವರು ಪಾಲ್ಗೊಂಡಿದ್ದರು. ಊರಿನ ಯುವ ಮುಖಂಡ ಹಾಗೂ ಜಾನಪದ ಕಲಾವಿದ ಶ್ರೀ ಎಂ ಎಸ್ ಆನಂದ ಕಾರ್ಯಕ್ರಮ ನಿರೂಪಿಸಿದರು. ಯುವ ಮುಖಂಡ ಶ್ರೀ ನಾರಾಯಣ ಸ್ವಾಗತಿಸಿದರು.
ಮಗ್ಗಲಮಕ್ಕಿಗಣೇಶ ಮಾತನಾಡಿ ಅಂಬೇಡ್ಕರ್ ರವರು ಇಂದು ದಲಿತರ ನಾಯಕ ಎಂದು ಬಿಂಬಿಸುವುದು ದುರಾದುಷ್ಟಕರ,
ಎಲ್ಲರಿಗೂ ವಿದ್ಯೆ ಅಗತ್ಯ ಎಂದ ಅಂಬೇಡ್ಕರ್ ರವರ ದಾರವಾಹಿ ನೋಡಿ ನೋಡಿ ಎಂದು ಕಾರ್ಯಕ್ರಮ ಮಾಡುತ್ತಿರುವುದು ನಮ್ಮ ಮಾನವಿಯತೆಯನ್ನೆ ಪ್ರಶ್ನೆ ಮಾಡಿದೆ ಎಂದರು.
ಭಾಗವಹಿಸಿದ್ದ ಅತಿಥಿಗಳು ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಒಂದು ವ್ಯಕ್ತಿಯಲ್ಲ ಅದೊಂದು ಶಕ್ತಿ, ಹಾಗೂ ಈಗ ಅವರಬಗ್ಗೆ ಪ್ರಸಾರ ವಾಗುತ್ತಿರುವ ಧಾರಾವಾಹಿಯು ಬೇರೆಲ್ಲಾ ಧಾರಾವಾಹಿಗಳಂತೆ ಕೇವಲ ಮನೋರಂಜನೆಗಾಗಿ ಅಲ್ಲ ಅವರ ಜೀವನದ ಆದರ್ಶ, ಪಟ್ಟ ಕಷ್ಟ, ಕಷ್ಟಗಳನ್ನೆಲ್ಲ ಜಯಿಸಿ ಮಾನವಕುಲಕ್ಕೆ ಮಾರ್ಗ ದರ್ಶಕ ರಾದ ರೀತಿಯನ್ನು zee ವಾಹಿನಿಯು ಎಳೆ ಎಳೆ ಯಾಗಿ ಬಿಡಿಸಿಡುತ್ತಿದೆ.ಇದನ್ನುಎಲ್ಲರೂಅನುಸರಿಸಬೇಕು ಎಂದು ಕರೆ ನೀಡಿದರು.
ವಕೀಲರಾದ ಎಂ.ವಿ.ಕೀರ್ತಿಕುಮಾರ್ ವಂದಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ.
ಬ್ಯೂರೊ ನ್ಯೂಸ್.