AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾನಸಿಕ ಅಸ್ವಸ್ಥನ ನೆರವಿಗೆ ಬಂದ ಗ್ರಾ.ಪಂ. ಸದಸ್ಯ ಮತ್ತು ಆಟೋ ಚಾಲಕರು #avintvcom

1 min read
Featured Video Play Icon

ಮಾನಸಿಕ ಅಸ್ವಸ್ಥನ ನೆರವಿಗೆ ಬಂದ ಗ್ರಾ.ಪಂ. ಸದಸ್ಯ ಮತ್ತು ಆಟೋ ಚಾಲಕರು

ಕೊಡಗು:ಮಾನಸಿಕ ಅಸ್ವಸ್ಥತೆಗೊಳಗಾಗಿ  ಕಳೆದ ಕೆಲವು ತಿಂಗಳಿನಿಂದ ಬಸ್ ತಂಗುದಾಣದಲ್ಲಿ ಬಿಡಾರ ಹೂಡಿ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ವ್ಯಕ್ತಿಯೋರ್ವ ಗ್ರಾಮ ಪಂಚಾಯತಿ ಸದಸ್ಯರೊಬ್ಬರ ಹಾಗೂ ಆಟೋ ರಿಕ್ಷಾ ಚಾಲಕರ  ನೆರವಿನಿಂದ ನಿರ್ಗತಿಕರ ಆಶ್ರಮಕ್ಕೆ ಸೇರ್ಪಡೆ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಬಿಹಾರದ ಬೆಲ್ ಗಂಜ್ ಎಂಬಲ್ಲಿನ ನಿವಾಸಿ ಎನ್ನಲಾಗಿರುವ ಮನೋಜ್ ಎಂಬಾತ  ಮಾನಸಿಕ ಅಸ್ವಸ್ಥನಾಗಿದ್ದು ಸಿದ್ಧಾಪುರ ಸಮೀಪದ ನೆಲ್ಲಿಹುದಿಕೇರಿಗೆ ಬಂದಿದ್ದು ಬಸ್ ನಿಲ್ದಾಣದಲ್ಲಿಯೇ ಬಿಡಾರ ಹೂಡಿದ್ದ.ಇದು ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದ ಕಾರಣ  ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ಮೂರನೇ ವಾರ್ಡ್ ನ ನೂತನ  ಸದಸ್ಯ ಪಿ.ಕೆ.ಟಿ. ಮುಸ್ತಾಫರವರು ಆಟೋ ಚಾಲಕರ ನೆರವಿನೊಂದಿಗೆ ಈತನನ್ನು  ಕಾವೇರಿ ಹೊಳೆಯಲ್ಲಿ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಆಹಾರ ನೀಡಿದ್ದಾರೆ. ನಂತರ ಸಿದ್ದಾಪುರ ಪೊಲೀಸ್ ಠಾಣೆಯ ಎ.ಎಸ್.ಐ. ಗಣೇಶ್ ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಸುಂಟಿಕೊಪ್ಪದ ವಿಕಾಸ್ ಜನಸೇವಾ ಟ್ರಸ್ಟಿನ ಆಶ್ರಮದಲ್ಲಿ ಆಶ್ರಯ ಕೊಡಿಸಿದ್ದಾರೆ. ಆದರೆ ಇವರು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author