ರಾಜ್ಯಾಧ್ಯಕ್ಷ ನೆ. ಲ. ನರೇಂದ್ರಬಾಬು ಅವರಿಗೆ ಮಾಳಿ/ಮಾಲಗಾರ ಸಮಾಜಕ್ಕೆ ನಿಗಮ ಮಂಡಳಿ ರಚಿಸಿ ಎಂದು ಮನವಿ.#avintvcom
1 min read
ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ನೆ. ಲ. ನರೇಂದ್ರಬಾಬು ಅವರಿಗೆ ಮಾಳಿ/ಮಾಲಗಾರ ಸಮಾಜಕ್ಕೆ ನಿಗಮ ಮಂಡಳಿ ರಚಿಸಿ ಎಂದು ಮನವಿ.
ಅಥಣಿ- ಮಾಳಿ/ಮಾಲಗಾರ ಸಮಾಜ ತೀರಾ ಹಿಂದುಳಿದಿದ್ದು ಸರಕಾರ ನಿಗಮ ಮಂಡಳಿ ರಚನೆ ಮಾಡಿ ಮಾಳಿ/ಮಾಲಗಾರ ಸಮಾಜವನ್ನು ಅಭಿವೃದ್ದಿಪಡಿಸಬೇಕು ಎಂದು ಆಗ್ರಹಿಸಿ ಬಿ ಜೆ ಪಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ನೆ. ಲ. ನರೇಂದ್ರಬಾಬು ಅವರಿಗೆ ಅಥಣಿ ಮಾಳಿ/ಮಾಲಗಾರ ಸಮಾಜದ ವತಿಯಿಂದ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಲಾಯಿತು.
ನಂತರ ಮನವಿ ಸ್ವೀಕರಿಸಿ ಮಾತನಾಡಿದ ನೆ. ಲ. ನರೇಂದ್ರಬಾಬು ಅವರು ಕರ್ನಾಟಕದಾದ್ಯಂತ ಸುಮಾರು 40 ರಿಂದ 45 ಲಕ್ಷಕ್ಕೂ ಅಧಿಕ ಸಂಖ್ಯೆಯ ಮಾಳಿ/ಮಾಲಗಾರ ಸಮಾಜದವರಿದ್ದು. ಇಂದಿಗೂ ಇವರು ಕೃಷಿಯನ್ನು ಮೂಲಕಸುಬನ್ನಾಗಿ ಆಧರಿಸಿ ಜೀವನ ಸಾಗಿಸುತ್ತಿದ್ದಾರೆ ಇದರಿಂದ ಅವರು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ್ದಿದ್ದು ನಿಜವಾಗಿದೆ, ಈ ಹಿಂದುಳಿದ ಸಮಾಜಕ್ಕೆ ಸರಕಾರದ ವತಿಯಿಂದ ಪ್ರತ್ಯೇಕ ನಿಗಮ ಮಂಡಳಿಯ ಅವಶ್ಯಕತೆಯಿದ್ದು ಅದಕ್ಕಾಗಿ ಕೂಡಲೇ ನಾನು ಸಂಬಂಧಪಟ್ಟ ಇಲಾಖೆ ಹಾಗೂ ಮುಖ್ಯಮಂತ್ರಿ ಅವರಿಗೆ ಈ ಮಾಹಿತಿ ಮುಟ್ಟಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವ್ರತ್ತರಾಗುವೆ ಎಂದು ತಿಳಿಸಿದರು. ಹಾಗೂ ಎಲ್ಲ ಮಾಳಿ/ಮಾಲಗಾರ ಸಮಾಜದವರು ಸಂಘಟನೆ ಮಾಡಿ ಸತತವಾದಂತಹ ಪ್ರಯತ್ನ ಮಾಡಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖಂಡ ಸಂತೋಷ ಬಡಕಂಬಿ ಮಾತನಾಡಿ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ಮಾಳಿ/ಮಾಲಗಾರ ಸಮಾಜದ ಜನಸಂಖ್ಯೆಯು ಅತೀ ಹೆಚ್ಚಾಗಿದ್ದು ಅತೀ ಕಡೆಗಣನೆಯಾದ ಸಮಾಜ ಆಗಿದ್ದು ಕೂಡಲೇ ಸರಕಾರ ನಮ್ಮತ್ತ ಗಮನ ಹರಿಸಿ ಕೂಡಲೇ ಸೌಲಭ್ಯ ಕಲ್ಪಿಸಬೇಕೆಂದರು..
ಈ ವೇಳೆ ಬಸವರಾಜ ಗುಮಟಿ, ಅರುಣ ಭಾಸಿಂಗಿ, ಪರಶುರಾಮ ಸೋನಕರ, ಮಲ್ಲೇಶ ಹುದ್ದಾರ, ರಮೇಶ ಕಾಗಲೆ, ಗಿರೀಶ ದಿವಾನಮಳ, ಮಹಾಂತೇಶ ಮಾಳಿ, ರವಿ ಬಡಕಂಬಿ, ಬಸವರಾಜ ಹಳ್ಳದಮಳ, ಮಲ್ಲಿಕಾರ್ಜುನ ಬಾಳಿಕಾಯಿ, ಜಗದೀಶ ಕಿವಡಿ, ರವಿ ಬಕಾರಿ, ಸುಭಾಸ ಮಾಳಿ, ಅಶೋಕ ಲಿಂಬಿಗಿಡದ, ಮಹಾದೇವ ಚಮಕೇರಿ, ಪ್ರಶಾಂತ ತೋಡಕರ, ರಮೇಶ ಮಾಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪೊಟೊ ಶೀರ್ಷಿಕೆ – ಮಾಳಿ/ಮಾಲಗಾರ ಸಮಾಜಕ್ಕೆ ನಿಗಮ ಮಂಡಳಿ ಬೇಕು ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗ ಮೋರ್ಚಾ ರಾಜ್ಯಾಧ್ಯಕ್ಷ ನೆ. ಲ. ನರೇಂದ್ರಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿರುವ ಅಥಣಿ ಮಾಳಿ/ಮಾಲಗಾರ ಸಮಾಜದವರು.