ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ, ಕೇಂದ್ರ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ #avintvcom
1 min readಬೆಂಗಳೂರು
ದಿವ್ಯಾಂಗರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ನಮ್ಮ ಗುರಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ, ಕೇಂದ್ರ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಅಲಿಂಕೋ ಸಂಸ್ಥೆಯ ಸಹಯೋಗದೊಂದಿಗೆ, ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳ ವಿತರಣಾ ಸಮಾರಂಭವನ್ನು ಕಂದಾಯ ಸಚಿವರಾದ ಆರ್.ಅಶೋಕ್ ಜಿ, ಅವರ ನೇತೃತ್ವದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಉದ್ಘಾಟಿಸಿದರು. ಬಳಿಕ ಫಲಾನುಭವಿ ವಿಕಲಚೇತನರಿಗೆ ಉಚಿತವಾಗಿ ದ್ವಿಚಕ್ರ ವಾಹನ, ಗಾಲಿ ಕುರ್ಚಿ, ಊರುಗೋಲು, ಸಿ.ಪಿ ಗಾಲಿ ಕುರ್ಚಿ, ಎಮ್.ಎಸ್.ಐ.ಡಿ ಕಿಟ್, ಕೃತಕ ಕಾಲುಗಳು ಹಾಗೂ ಕ್ಯಾಲಿಪರ್ಸ, ಶ್ರವಣ ಸಾಧನಗಳನ್ನು ವಿತರಿಸಿ, ಮಾತನಾಡಿದರು.
ಅಂಗವಿಕಲತೆ ಶಾಪವಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ಸದೃಢರಾಗಿ ಬದುಕುವುದನ್ನು ಕಲಿಯಬೇಕು. ವಿಕಲಚೇತರನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಸ್ವಾವಲಂಬಿಗಳನ್ನಾಗಿ ಮಾಡಿ ಸುಂದರ ಬದುಕು ರೂಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸಾಧನ ಸಲಕರಣೆಗಳನ್ನು ಪಡೆದುಕೊಂಡ ಫಲಾನುಭವಿಗಳು, ಇದನ್ನು ಸದುಪಯೋಗಪಡಿಸಿಕೊಂಡು ಸಾಧನೆಯ ಮೆಟ್ಟಿಲು ಹತ್ತಲು ಪ್ರಯತ್ನಪಡಬೇಕು ಎಂದು ಅವರಿಗೆ ಆತ್ಮವಿಶ್ವಾಸ ತುಂಬಿದರು. ಇದೇ ವೇಳೆ ಅಂಗವಿಕಲರನ್ನು ಸಮಾಜದಲ್ಲಿ ಸಬಲರನ್ನಾಗಿ ಮಾಡಲು ಶ್ರಮಿಸುತ್ತಿರುವ ಕೃತಕ ಅಂಗಾಂಗ ತಯಾರಿಕಾ ಅಲಿಂಕೋ ಸಂಸ್ಥೆಯ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಬಿ.ಎನ್ ಬಚ್ಚೇಗೌಡ, ಶಾಸಕರಾದ ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್, ಜಿಲ್ಲಾಧಿಕಾರಿಗಳಾದ ಶ್ರೀ ಪಿ.ಎನ್ ರವೀಂದ್ರ, ಗಣ್ಯರು, ಜನಪ್ರತಿನಿಧಿಗಳು, ಜಿ.ಪಂ ಅಧ್ಯಕ್ಷರು, ಸದಸ್ಯರು, ಫಲಾನುಭವಿಗಳು ಉಪಸ್ಥಿತರಿದ್ದರು.
दिव्यांगंना आत्मनिर्भर बनविणे हाच आपला ध्येय.
बेंगळूरु ग्रामीण जिल्हा प्रशासन भवनात, केंद्र सरकार, महिला व बालविकास विभाग, अपंग आणि ज्येष्ठ नागरिक सशक्तीकरण विभाग आणि अलींको संस्थेच्या सहकार्याने अपंगांना दुचाकी मोटार सायकल वितरण सोहळा महसूलमंत्री श्री आर. अशोक जी, यांच्या नेतृत्वात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी उद्घाटन केले. त्यानंतर लाभार्थ्यांना मोफत मोटार सायकल, व्हीलचेअर, कुबडी, सी.पी व्हीलचेयर, एम.एस.आय.डी किट, कृत्रिम पाय व कॅलिपर व श्रवणयंत्र वाटप करून, संबोधित केले.
अपंगत्व हा शाप नाही हे एक आव्हान म्हणून स्वीकारून, चांगले जगणे शिकले पाहिजे, अपंगांना समाजाच्या मुख्य प्रवाहात आणून, स्वावलंबी बनवून, सुंदर जीवन बनविणे आपली जबाबदारी आहे. उपकरणे प्राप्त करणाऱ्या लाभार्थ्यांनी त्याचा चांगला उपयोग करून घेऊन, यशाच्या पायऱ्या चढण्याचा प्रयत्न केला पाहिजे असे त्यांचे आत्मविश्वास वाढविले. त्याच वेळी अपंग लोकांना समाजात सक्षम बनविण्यासाठी प्रयत्न करत असलेल्या कृत्रिम अवयव बनवणाऱ्या अलिंको संस्थेचा कार्य कौतुकास्पद आहे असे सांगितले.
यावेळी खासदार श्री.बी.एन. बच्चेगौडा, आमदार श्री निसर्ग नारायणस्वामी एल.एन, जिल्हाधिकारी श्री पी एन रवींद्र, मान्यवर, लोकप्रतिनिधी, जिल्हा पंचायत अध्यक्ष, सदस्य, लाभार्थी उपस्थित होते.