ಹೊಸ ವರ್ಷದ ಸಂಭ್ರಮಾಚಾರಣೆ “ಕಲರವ -2021 ವನ್ನು ಯುವ ಸ್ಪಂದನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. #avintvcom

ಯುವ ಸ್ಪಂದನ, ಯುವ ಸಬಲೀಕರಣ ಕ್ರೀಡಾ ಇಲಾಖೆ,ನಿಮ್ಹಾನ್ಸ್ ಸಹಯೋಗದಲ್ಲಿ ಹೊಸ ವರ್ಷದ ಸಂಭ್ರಮಾಚಾರಣೆ “ಕಲರವ -2021 ವನ್ನು ಯುವ ಸ್ಪಂದನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಆರೋಗ್ಯ ಶಿಕ್ಷಣಾಧಿಕಾರಿ, ಜಿಲ್ಲಾಸ್ಪತ್ರೆ ಜಲಜಾಕ್ಷಿ ರವರು ಮಾನಸಿಕ ಆರೋಗ್ಯ ಸಂಭಂದಿಸಿದ ಈ ಯುವ ಸ್ಪಂದನ ಯೋಜನೆ ಯುವ ಜನತೆಗೆ ಉಪಯುಕ್ತಕಾರಿಯಾಗಿದೆ ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಯೋಜನೆಯ ಜೊತೆಗೆ ಒಡನಾಡಿಯಾಗಿ ಅರಿವು ಕಾರ್ಯಕ್ರಮ ಸಾಗಲಿ ಎಂದು ಆಶಿಸಿದರು.
ಜಿಲ್ಲಾ ಸಮನ್ವಯಧಿಕಾರಿ ಅಭಿಷೇಕ್ ಚಾವರೆ ಅವರು ಮಾತನಾಡಿ ನಾವು ಸಾಮಾಜಿಕ ವಾತವರಣದಲಿ ನಾವು ಸಮಾಜಕ್ಕಾಗಿ ಹೇಗೆ ಪ್ರತಿಕ್ರಿಯೆ ನೀಡುತ್ತೆವೆಯೊ ಹಾಗೇ ನಮ್ಮ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ ಎಂದು ನುಡಿದರು.
ಯುವ ಸಮಾಲೋಚಕಿ ಶಿಲ್ಪಾ ಮಾತನಾಡಿ ಈ ಹಿಂದಿನ ತಪ್ಪು -ಒಪ್ಪುಗಳಿಂದ ಕಲಿತ ಪಾಠದಿಂದ ಈ ಹೊಸ ವರ್ಷ ಬರಮಾಡಿಕೊಂಡು ಹುಮ್ಮಸಿನಿಂದ ಕಾರ್ಯ ನಿರ್ವಹಿಸುತ್ತಾ ಸಾಗೋಣ ಎಂದು ತಿಳಿಸಿದರು.
ದೈಹಿಕ ಹಾಗೂ ಮಾನಸಿಕವಾಗಿ ಕೂಡಿದ್ದಂತಹ ಚಟುವಟಿಕೆ ನಡೆಸಿ ಸ್ಮರಣಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಯುವಪರಿವರ್ತಕರಾದ ಅಬ್ದುಲ್ ನಾಜೀಮ್,ವಿನೋದ್, ಶ್ರೀನಿವಾಸ್,ಗವಿರಂಗ,ಸಿದ್ದೇಶ್ ಉಪಸ್ಥಿತರಿದ್ದರು.
– ಯುವ ಸ್ಪಂದನ
ಯುವ ಸಬಲೀಕರಣ ಕ್ರೀಡಾ
ಇಲಾಖೆ
ಚಿಕ್ಕಮಗಳೂರು