ನಿಮ್ಮ ಸಮಯವನ್ನು ನಾವು ಗೌರವಿಸುತ್ತೇವೆ, ಆದ್ದರಿಂದ ನಾವು ಸೇವೆಯನ್ನು ಸಮಯಕ್ಕೆ ಸರಿಯಾಗಿ ತಲುಪಿಸುತ್ತೆವೆ #avintvcom
1 min readಸಕಾಲ ಸಪ್ತಾಹ🔥
🔥”ನಿಮ್ಮ ಅಮೂಲ್ಯ ಸಮಯವನ್ನು ನಾವು ಗೌರವಿಸುತ್ತೇವೆ, ಆದ್ದರಿಂದ ನಾವು ಸೇವೆಯನ್ನು ಸಮಯಕ್ಕೆ ಸರಿಯಾಗಿ ತಲುಪಿಸುತ್ತೆವೆ”.🚒
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಡಿಸೆಂಬರ್ 14 ರಿಂದ 20 ರವರೆಗೆ ಅಥಣಿ ಅಗ್ನಿಶಾಮಕ ಠಾಣೆಯಲ್ಲಿ ಸಕಾಲ ಸಪ್ತಾಹ ಆಚರಿಸಲಾಗುವುದು ಎಂದು ಅಥಣಿ ಅಗ್ನಿಶಾಮಕ ಠಾಣಾಧಿಕಾರಿ ಶ್ರೀ ಆರ್ ಕೆ ಸಂಭೋಜಿ ರವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ನೀಡಿರುವ ಅವರು ಸಕಾಲ ವ್ಯಾಪ್ತಿಯಲ್ಲಿ 05 ಸೇವೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೋಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಬಹುಮಹಡಿ ಕಟ್ಟಡಗಳ ನಿರ್ಮಾಣ ಹಂತದಲ್ಲಿರುವ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆಯಿಂದ ನೀಡಲಾಗುವ ಕ್ಲಿಯರೆನ್ಸ್ ಪ್ರಮಾಣ ಪತ್ರ, ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ ಪೂರ್ವದಲ್ಲಿ ಅಗ್ನಿಶಾಮಕ ಇಲಾಖೆಯಿಂದ ನೀಡಲಾಗುವ ನಿರಾಕ್ಷೇಪಣಾ ಪ್ರಮಾಣ ಪತ್ರ, ಆಕಸ್ಮಿಕ ಬೆಂಕಿ ಹಾಗೂ ತುರ್ತು ಕರೆಗೆ ಪ್ರತಿಕ್ರಿಯೆ,ಅಪಘಾತ, ನೈಸರ್ಗಿಕ ವಿಪತ್ತು,ರಕ್ಷಣಾ ಕಾರ್ಯ ಮತ್ತು ವಿಪತ್ತು ನಿರ್ವಹಣೆಯ ತುರ್ತು ಕರೆಗಳಿಗೆ ಪ್ರತಿಕ್ರಿಯೆ,ಪಟಾಕಿಗಳ ಲೈಸೆನ್ಸ್ ಗೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಸಕಾಲದಡಿಯಲ್ಲಿ ನೀಡಲಾಗುತ್ತಿದೆ. ಈ ಐದು ಸೇವೆಗಳನ್ನು ಸಾರ್ವಜನಿಕರು https://sevasindhu.karnataka.gov.in ವೆಬ್ಸೈಟ್ ಮೂಲಕ ಸದುಪಯೋಗ ಪಡೆದುಕೋಳ್ಳಬಹುದೆಂದು ಅವರು ತಿಳಿಸಿದರು.