ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಭದ್ರಾ ಕಾಡ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ #avintvcom
1 min read[4:26 pm, 19/12/2020] Sharma Avin Tv: 1.ದಿನಾಂಕ 17/12/2020 ರಂದು, ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಭದ್ರಾ ಕಾಡ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ ಮಾಹಿತಿ ವಿವಿಧ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿ.
[4:26 pm, 19/12/2020] Sharma Avin Tv: 2.ದಿನಾಂಕ 19/12/2020 ರಂದು, ಭದ್ರಾವತಿ ತಾಲೂಕು ಅರಸನಗಟ್ಟ, ವಡೆರಪುರ ಹಾಗೂ ಇಟ್ಟಿಗೆಹಳ್ಳಿ ಗ್ರಾಮದ ರೈತರು ನಿಂಬೇಗೊಂದಿ ಮಹಾದೇವಪ್ಪ ಅವರೊಂದಿಗೆ ಕಚೇರಿಗೆ ಭೇಟಿ ನೀಡಿ ಅಚ್ಚುಕಟ್ಟು ಭಾಗದ ರಸ್ತೆಗಳನ್ನು ಅಭಿವೃದ್ದಿ ಪಡಿಸಿಕೊಡುವಂತೆ ಮನವಿ ಸಲ್ಲಿಸಿದರು.
3.ದಿನಾಂಕ 19/12/2020 ರಂದು, ಭದ್ರಾವತಿ ತಾಲೂಕು ಬಾವಿಕೆರೆ ಗ್ರಾಮದ ರೈತರು ಕಚೇರಿಗೆ ಭೇಟಿ ನೀಡಿ ತಮ್ಮ ಹೊಲಗಳಿಗೆ ಕಾಲುವೆ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.
4.ದಿನಾಂಕ 19/12/2020 ರಂದು, ಶಿವಮೊಗ್ಗ ತಾಲ್ಲೂಕು ಬಿ.ಬಿರನಹಳ್ಳಿ ಗ್ರಾಮದ ರೈತರು ಕಚೇರಿಗೆ ಭೇಟಿ ನೀಡಿ ತಮ್ಮ ಹೊಲಗಳಿಗೆ ಕಾಲುವೆ ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಿದರು.
5.ದಿನಾಂಕ 19/12/2020 ರಂದು, ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಾರಾಹಿ ಅಚ್ಚುಕಟ್ಟು ಭಾಗದ ರೈತರು ಕಚೇರಿಗೆ ಭೇಟಿ ನೀಡಿ ತಮ್ಮ ಭಾಗಗಳಲ್ಲಿ ಹೊಲಗಾಲುವೆ ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.