ನಮ್ಮ ನೆಚ್ಚಿನ ಜನನಾಯಕರು ಆದ ಮಾಜಿ ಮುಖ್ಯಮಂತ್ರಿ ಗಳಾದ ಎಚ್.ಡಿ.ಕುಮಾರಣ್ಣ ಅವರ ಹುಟ್ಟು ಹಬ್ಬದ ವಿಜ್ರಂಭಣೆ #avintvcom
1 min readಬೆಂಗಳೂರು
ದಿನಾಂಕ 16-12-2020 ರಂದು ಬೆಂಗಳೂರಿನ ಜೆ. ಪಿ . ಭವನದಲ್ಲಿ ನಮ್ಮ ನೆಚ್ಚಿನ ಜನನಾಯಕರು ಆದ ಮಾಜಿ ಮುಖ್ಯಮಂತ್ರಿ ಗಳಾದ ಎಚ್.ಡಿ.ಕುಮಾರಣ್ಣ ಅವರ ಹುಟ್ಟು ಹಬ್ಬದ ವಿಜ್ರಂಭಣೆಯಿಂದ ಅದ್ದೂರಿಯಿಂದ ಅಂಗವಾಗಿ ನಮ್ಮ ಕರ್ನಾಟಕ ಕುಮಾರ ಪಡೆ (ರಿ) ವತಿಯಿಂದ ಈ ಪಡೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕುಮಾರ್ ಪಿ.ಗೌಡ್ರು ನೇತೃತ್ವದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು
ಕುಮಾರ್ . ಪಿ.ಗೌಡ್ರು ಸಹ ರಕ್ತದಾನ ಮಾಡುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗು ಕುಮಾರಪಡೆಯ ಎಲ್ಲ ಜಿಲ್ಲಾ ಅಧ್ಯಕ್ಷರು ಹಾಗು ಎಲ್ಲ ಪದಾಧಿಕಾರಿಗಳು ಭಾಗವಹಿಸಿ ರಕ್ತದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಗಣ್ಯವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಕಾರ್ಯಕ್ರಮಕ್ಕೆ ಜೆ ಡಿ ಎಸ್ ರಾಜ್ಯಾಧ್ಯಕ್ಷರಾದ ಎಚ್. ಕೆ. ಕುಮಾರಸ್ವಾಮಿ ಅವರು ಬಸವರಾಜ್ ಹೊರಟ್ಟಿ ಅವರು ಟಿ.ಏ.ಸರವಣ ಅವರು ಕೋನರೆಡ್ಡಿ ಅವರು ತಿಪ್ಪೇಸ್ವಾಮಿ ಅವರು ಹಾಗು ನಗರಾದ್ಯಕ್ಷರಾದ ಪ್ರಕಾಶ್ ಅವರು ಪಾಲ್ಗೊಂಡು ರಕ್ತದಾನ ಮಾಡಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರ ಪಾತ್ರ ಪ್ರಮುಖವಾಗಿತ್ತು ಸಂಭ್ರಮ ಸುಖಾಂತ್ಯ ಕಂಡಿತು…
ಕರ್ನಾಟಕ ಕುಮಾರ ಪಡೆ (ರಿ) ವತಿಯಿಂದ ಈ ಪಡೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕುಮಾರ್ ಪಿ.ಗೌಡ್ರು ಮಾತನಾಡಿ
ಮತ್ತೆ ನಮ್ಮ ಕುಮಾರಣ್ಣನಿಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಸದಾಕಾಲ ಅವರಿಗೆ ಭಗವಂತ ಬೆನ್ನಿಗೆ ನಿಂತು ಕೊಳ್ಳಲಿ ಸದಾಕಾಲ ಅವರು ಉನ್ನತ ಮಟ್ಟಕ್ಕೆ ಮತ್ತು ಉನ್ನತ ಹುದ್ದೆ ಉನ್ನತ ಸ್ಥಾನ ದೊರೆಯಲಿ ಮತ್ತೆ ಅವರು ಕರ್ನಾಟಕ ಜನತೆಗೆ ಮತ್ತೆ ಮುಖ್ಯಮಂತ್ರಿಯಾಗಿ ಸದಾಕಾಲ ಉಳಿದುಕೊಳ್ಳಲಿ ಮತ್ತೆ ಮುಖ್ಯಮಂತ್ರಿಗಳಾಗಿ ಜನರಿಗೆ ನೊಂದು ಬಂದವರಿಗೆ ಮತ್ತೆ ಮುಖ್ಯಮಂತ್ರಿಯಾಗಿ ಬರಲಿ ಎನ್ನುವುದೇ ನಮ್ಮೆಲ್ಲರ ಆಸೆ