ಅರಸೀಕೆರೆ ಗೆ ಆರ್ ರಘು ಕೌಟಿಲ್ಯ ರ ಕುಟುಂಬ ಖಾಸಗಿ ಭೇಟಿ #avintvcom
1 min read
ಅರಸೀಕೆರೆ ಗೆ ಆರ್ ರಘು ಕೌಟಿಲ್ಯ ರ ಕುಟುಂಬ ಖಾಸಗಿ ಭೇಟಿ.
ಇತ್ತೀಚೆಗಷ್ಟೇ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಆರ್ ರಘು ಕೌಟಿಲ್ಯ ರವರು ತಮ್ಮ ಕುಟುಂಬ ಸಮೇತ ಅರಸೀಕೆರೆ ನಗರದ ಹಿರಿಯ ಚೇತನ ಸಂಘ ಪರಿವಾರದ ಹಾಗೂ ಮಡಿವಾಳ ಸಮಾಜದ ಮುಖಂಡರಾದ ಶ್ರೀ ರಾಮಚಂದ್ರ ರವರ ನಿವಾಸಕ್ಕೆ ಆಗಮಿಸಿದ್ದರು
ರಾಮಚಂದ್ರ ರವರನ್ನು ಭೇಟಿಯಾಗಿ ನಮ್ಮ ವಿಶ್ವಾಸ ತುಂಬಾ ದೀರ್ಘಕಾಲದ್ದು ನಮಗೆ ಮಾರ್ಗದರ್ಶಕರು ಎಂದು ರಘು ಕೌಟಿಲ್ಯ ನುಡಿದರು.
ನಿಗಮದಿಂದ ಎಲ್ಲಾ ವರ್ಗದ ಹಿಂದುಳಿದವರಿಗೆ ಸಾಲ ಸೌಲಭ್ಯ ನೀಡಿ ಆರ್ಥಿಕ ಸ್ಥಿತಿವಂತರನ್ನಾಗಿ ಸ್ವಾವಲಂಬಿ ಬದುಕನ್ನ ಕಟ್ಟಿಕೊಡಬೇಕೆಂದು ಪಣ ತೊಟ್ಟಿದ್ದೇನೆ ಎಂದರು.
ಈ ಸಮಯದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಉಪಾಧ್ಯಕ್ಷರಾದ ಶ್ರೀ ಜಿ ವಿ ಟಿ ಬಸವರಾಜು ,ರಾಮಚಂದ್ರಪ್ಪ ,ತಾಲ್ಲೂಕ್ ಬಿಜೆಪಿ ಅಧ್ಯಕ್ಷ ಲೋಕೇಶ್,ಹಾಗೂ ಪಧಾಧಿಕಾರಿಗಳು,ತಾಲ್ಲೂಕ್ ಮಡಿವಾಳ ಸಮಾಜದ ಅಧ್ಯಕ್ಷ ಶಿವಣ್ಣ,ದೇವರಾಜು,ರೇಣುಕಪ್ಪ, ಲೋಕೇಶ್,ಷಡಕ್ಷರಿ, ಚಂದ್ರಪ್ಪ ,ನವರು ಆತ್ಮೀಯವಾಗಿ ಅಭಿನಂದಿಸಿದರು,