day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಅಂಗವಿಕಲರನ್ನು ಸಾಮಾನ್ಯ ಜನರಂತೆ ಕಾಣಬೇಕು.ಅವರಲ್ಲಿ ವಿಶೇಷ ಕೌಶಲ್ಯ,ಪ್ರತಿಭೆ ಅಡಕವಾಗಿದೆ. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಅಂಗವಿಕಲರನ್ನು ಸಾಮಾನ್ಯ ಜನರಂತೆ ಕಾಣಬೇಕು.ಅವರಲ್ಲಿ ವಿಶೇಷ ಕೌಶಲ್ಯ,ಪ್ರತಿಭೆ ಅಡಕವಾಗಿದೆ. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕಾಗವಾಡ ಪಟ್ಟಣದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ.

ಕಾಗವಾಡ ವರದಿ: ಅಂಗವಿಕಲರನ್ನು ಸಾಮಾನ್ಯ ಜನರಂತೆ ಕಾಣಬೇಕು.ಅವರಲ್ಲಿ ವಿಶೇಷ ಕೌಶಲ್ಯ,ಪ್ರತಿಭೆ ಅಡಕವಾಗಿದೆ.ಅಂಗವಿಕಲರೂ ವಿಕಲಚೇತನರಾಗಿದ್ದರೂ ಜೀವನವನ್ನು ಧೈರ್ಯದಿಂದ ಎದುರಿಸಿ ಸಮಾಜದಲ್ಲಿ ಮಾದರಿ ಬದಕು ಸಾಗಿಸುತ್ತಾರೆ ಎಂದು ಯತಿಶ್ವರಾನಂದ ಸ್ವಾಮಿಜಿಯರು ನುಡಿದರು.

ಅವರು “ಅಥಣಿ ತಾಲೂಕಾ ಅಂಗವಿಕಲರ ಆಧಾರ ಸಂಘ ಕಾಗವಾಡ ” ಇವರು ದಿ.3ರಂದು ಹಮ್ಮಿಕೊಂಡ ‘ಅಂಗವಿಕಲರ ವಿಶ್ವದಿನಾಚರಣೆಯ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ವಹಿಸಿ ಮಾತನಾಡುತ್ತಾ,ಅಂಗವಿಕಲರಿಗೆ ಸೂಕ್ತ ಪ್ರೊತ್ಸಾಹ ಮತ್ತು ತರಭೇತಿ ನಿಡಿದರೆ ಉನ್ನತಮಟ್ಟಕ್ಕೆ ಬೆಳೆಯಲು ಅನುಕೂಲವಾಗುತ್ತದೆ ಎಂದರು.

ಪ್ರತಿಯೋಬ್ಬರು ಆತ್ಮವಿಶ್ವಾಸ, ಆತ್ಮಸ್ಥೈರ್ಯವನ್ನು ಹೊಂದಿರಬೇಕು.ಅಂಗವಿಕಲರು ಕೈಗಾರಿಕೆ,ಸಾಹಿತ್ಯ,ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿದ್ದಾರೆ.

ಅಂಗವೈಕಲ್ಯ ಎನ್ನುವುದು ಪರಮಾತ್ಮ ಮಾಡಿದ್ದು,ನಾವು ನಿವು ಮಾಡಿದ್ದು ಅಲ್ಲ.ಬಂದುಬಳಗದವರು ನಿಮ್ಮ ಕೈಬಿಟ್ಟರು ಭಗವಂತನು ನಿಮ್ಮ ಕೈಬಿಡುವುದಿಲ್ಲ ಎಂದು ಯತಿಶ್ವರಾನಂದ ಸ್ವಾಮಿಗಳು ನುಡಿದರು.

ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಕ್ರಷ್ಣಾಸಕ್ಕರೆ ಕಾರ್ಖಾನೆ ನಿರ್ದೇಶಕ ಸೌರಭ ಪಾಟಿಲ ಮಾತನಾಡಿ,ಅಂಗವಿಕಲರ ಸಂಘಕ್ಕೆ ಎಲ್ಲ ರೀತಿ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.ಕಾಗವಾಡ ಕ್ಷೇತ್ರ ಸಮನ್ವಾಧಿಕಾರಿ ಎಸ್.ಎಸ್.ಶೆಡಶಾಳೆ ಮಾತನಾಡಿದರು.

ವೀರೆಂದ್ರ ಯಡ್ರಾವೆ, ಸಿ.ಡಿ.ಚೌಗಲಾ ಅತಿಥಿಗಳಾಗಿ ಆಗಮಿಸಿದ್ದರು.ಸಂಘದ ಅಧ್ಯಕ್ಷ ಬಾಬುರಾವ ಮಾಲಗಾಂವೆ,ಸಂಘದ ಪದಾಧಿಕಾರಿಗಳು,ಕಾಗವಾಡ ಮತ್ತು ಅಥಣಿ ತಾಲೂಕಿನ ಅಂಗವಿಕಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ     ಪೀರು ನಂದೇಶ್ವರ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author