लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಂಗವಿಕಲರನ್ನು ಸಾಮಾನ್ಯ ಜನರಂತೆ ಕಾಣಬೇಕು.ಅವರಲ್ಲಿ ವಿಶೇಷ ಕೌಶಲ್ಯ,ಪ್ರತಿಭೆ ಅಡಕವಾಗಿದೆ. #avintvcom

1 min read
Featured Video Play Icon

ಕಾಗವಾಡ ಪಟ್ಟಣದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ.

ಕಾಗವಾಡ ವರದಿ: ಅಂಗವಿಕಲರನ್ನು ಸಾಮಾನ್ಯ ಜನರಂತೆ ಕಾಣಬೇಕು.ಅವರಲ್ಲಿ ವಿಶೇಷ ಕೌಶಲ್ಯ,ಪ್ರತಿಭೆ ಅಡಕವಾಗಿದೆ.ಅಂಗವಿಕಲರೂ ವಿಕಲಚೇತನರಾಗಿದ್ದರೂ ಜೀವನವನ್ನು ಧೈರ್ಯದಿಂದ ಎದುರಿಸಿ ಸಮಾಜದಲ್ಲಿ ಮಾದರಿ ಬದಕು ಸಾಗಿಸುತ್ತಾರೆ ಎಂದು ಯತಿಶ್ವರಾನಂದ ಸ್ವಾಮಿಜಿಯರು ನುಡಿದರು.

ಅವರು “ಅಥಣಿ ತಾಲೂಕಾ ಅಂಗವಿಕಲರ ಆಧಾರ ಸಂಘ ಕಾಗವಾಡ ” ಇವರು ದಿ.3ರಂದು ಹಮ್ಮಿಕೊಂಡ ‘ಅಂಗವಿಕಲರ ವಿಶ್ವದಿನಾಚರಣೆಯ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ವಹಿಸಿ ಮಾತನಾಡುತ್ತಾ,ಅಂಗವಿಕಲರಿಗೆ ಸೂಕ್ತ ಪ್ರೊತ್ಸಾಹ ಮತ್ತು ತರಭೇತಿ ನಿಡಿದರೆ ಉನ್ನತಮಟ್ಟಕ್ಕೆ ಬೆಳೆಯಲು ಅನುಕೂಲವಾಗುತ್ತದೆ ಎಂದರು.

ಪ್ರತಿಯೋಬ್ಬರು ಆತ್ಮವಿಶ್ವಾಸ, ಆತ್ಮಸ್ಥೈರ್ಯವನ್ನು ಹೊಂದಿರಬೇಕು.ಅಂಗವಿಕಲರು ಕೈಗಾರಿಕೆ,ಸಾಹಿತ್ಯ,ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿದ್ದಾರೆ.

ಅಂಗವೈಕಲ್ಯ ಎನ್ನುವುದು ಪರಮಾತ್ಮ ಮಾಡಿದ್ದು,ನಾವು ನಿವು ಮಾಡಿದ್ದು ಅಲ್ಲ.ಬಂದುಬಳಗದವರು ನಿಮ್ಮ ಕೈಬಿಟ್ಟರು ಭಗವಂತನು ನಿಮ್ಮ ಕೈಬಿಡುವುದಿಲ್ಲ ಎಂದು ಯತಿಶ್ವರಾನಂದ ಸ್ವಾಮಿಗಳು ನುಡಿದರು.

ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಕ್ರಷ್ಣಾಸಕ್ಕರೆ ಕಾರ್ಖಾನೆ ನಿರ್ದೇಶಕ ಸೌರಭ ಪಾಟಿಲ ಮಾತನಾಡಿ,ಅಂಗವಿಕಲರ ಸಂಘಕ್ಕೆ ಎಲ್ಲ ರೀತಿ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.ಕಾಗವಾಡ ಕ್ಷೇತ್ರ ಸಮನ್ವಾಧಿಕಾರಿ ಎಸ್.ಎಸ್.ಶೆಡಶಾಳೆ ಮಾತನಾಡಿದರು.

ವೀರೆಂದ್ರ ಯಡ್ರಾವೆ, ಸಿ.ಡಿ.ಚೌಗಲಾ ಅತಿಥಿಗಳಾಗಿ ಆಗಮಿಸಿದ್ದರು.ಸಂಘದ ಅಧ್ಯಕ್ಷ ಬಾಬುರಾವ ಮಾಲಗಾಂವೆ,ಸಂಘದ ಪದಾಧಿಕಾರಿಗಳು,ಕಾಗವಾಡ ಮತ್ತು ಅಥಣಿ ತಾಲೂಕಿನ ಅಂಗವಿಕಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ     ಪೀರು ನಂದೇಶ್ವರ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author