ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಜೊಲ್ಲೆ ಜಿ, ಯವರು ಭಾಗವಹಿಸಿಮಾತನಾಡಿದರು.
1 min read
ಚಿಕ್ಕೋಡಿ
“ಬಿಜೆಪಿಯಲ್ಲಿ ಹೆಣ್ಣು ಮಕ್ಕಳಿಗೂ ಉತ್ತಮ ಸ್ಥಾನಮಾನ”
ಇಂದು ಚಿಕ್ಕೋಡಿಯಲ್ಲಿ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭಾಗವಹಿಸಿ, ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದರು.
ಮನೆ ಬೆಳಗುವ ಹೆಣ್ಣು ಮಕ್ಕಳಿಗೆ ಬಿಜೆಪಿ ಪಕ್ಷ, ‘ಮಹಿಳಾ ಮೋರ್ಚಾ’ ಎಂಬ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಹೀಗಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಈ ಮೂಲಕ ಗ್ರಾಮೀಣ ಭಾಗಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲು ಪಣತೊಡೋಣ. ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರು ಹೆಣ್ಣು ಮಕ್ಕಳ ಪ್ರಗತಿಗಾಗಿ ಜಾರಿಗೆ ತಂದ ಸುಕನ್ಯಾ ಸಮೃದ್ಧಿ ಯೋಜನೆ, ಬೇಟಿ ಬಚಾವೋ-ಬೇಟಿ ಪಡಾವೋ ಹೀಗೆ ಹಲವು ಯೋಜನೆಗಳು ಬಡ ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗುತ್ತಿದೆ. ಹೀಗಾಗಿ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿ ಜತೆಗೆ ಬಿಜೆಪಿ ಸರ್ಕಾರದ ಎಲ್ಲಾ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸಕ್ಕೆ ನಮ್ಮೊಂದಿಗೆ ನೀವೆಲ್ಲರೂ ಕೈಜೋಡಿಸಬೇಕು ಎಂದು ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಫಲಾನುಭವಿ ಮಕ್ಕಳಿಗೆ ಪಾಸ್ ಬುಕ್ ವಿತರಿಸಿದರು.
ಈ ಸಭೆಯಲ್ಲಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ಗೀತಾ ವಿವೇಕಾನಂದ, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಚಂದಮ್ಮಾ ಪಾಟೀಲ, ಶ್ರೀಮತಿ ಶಿಲ್ಪಾ ಸುವರ್ಣ, ರಾಜ್ಯ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮಾ ಭಂಡಾರಿ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ಶಾಂಭವಿ ಅಶ್ವತಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸತೀಶ ಅಪ್ಪಾಜಿಗೋಳ, ಮಹಿಳಾ ಮೋರ್ಚಾದ ಸದಸ್ಯರು, ಕಾರ್ಯದರ್ಶಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
चिक्कोडी
“महिलांनाही भाजपात चांगला स्थानमान”
आज चिक्कोडी येथे भाजपा महिला मोर्चाच्या कार्यकारिणीच्या बैठकीत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भाग घेऊन, कार्यकर्त्यांना उद्देशून संबोधित केले.
घर उजळणार्या मुलींसाठी भाजपा पक्षाने महिला मोर्चा असा एक उत्तम व्यासपीठ उपलब्ध करुन दिला आहे. अशा प्रकारे या संधीचा फायदा घेऊन, ग्राम पंचायत निवडणुकीत भाजपा पक्षाच्या विजयासाठी प्रयत्न केले पाहिजेत. यासाठी ग्रामीण भागात ही भाजपा सत्तेत आणण्यासाठी प्रयत्न करूया. आदरणीय पंतप्रधान श्री नरेंद्र मोदीजी, यांनी मुलींच्या प्रगतीसाठी राबविलेली सुकन्या समृद्धी योजना, बेटी बचाओ-बेटी पढाओ, असे अनेक प्रकल्प गरीब मुलींसाठी खास आकर्षण ठरली आहेत. अशाप्रकारे महिलांच्या विकासाबरोबरच सरकारच्या सर्व प्रकल्पांना नागरिकांच्या दारापर्यंत पोहचवण्यासाठी सर्वांनी हातभार लावावा असा संदेश दिला. याच संदर्भात सुकन्या समृद्धी योजनेंतर्गत लाभार्थी मुलांना पासबुक वाटप केले.
यावेळी राज्य महिला मोर्चाच्या अध्यक्षा श्रीमती गीता विवेकानंद, राज्य महिला मोर्चाच्या प्रधान कार्यदर्शी श्रीमती चंदम्मा पाटील, श्रीमती शिल्पा सुवर्णा, राज्य महिला मोर्चाच्या उपाध्यक्षा श्रीमती प्रेमा भंडारी, जिल्हा महिला मोर्चाच्या अध्यक्षा श्रीमती शांभवी अश्वतपूर, जिल्हा प्रधान कार्यदर्शी श्री सतीश अप्पाजीगोळ, महिला मोर्चा सदस्या, पक्षाचे कार्यकर्ते उपस्थित होते.