ಪಂಚಾಯತ್ ಚುನಾವಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಜೊಲ್ಲೆ ಯವರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದರು
1 min read
“ಪ್ರತಿ ಕಾರ್ಯಕರ್ತನನ್ನು ಗೌರವಿಸುವ ಏಕೈಕ ಪಕ್ಷ ಬಿಜೆಪಿ”
ಭಿವಶಿ ಗ್ರಾಮದಲ್ಲಿ, ಗ್ರಾಮ ಪಂಚಾಯತ್ ಚುನಾವಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಮತ್ತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭಾಗವಹಿಸಿ, ದಾಸಶ್ರೇಷ್ಠ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದರು.
ಜನಪರ ಪಕ್ಷವಾಗಿರುವ ಬಿಜೆಪಿಗೆ ಕಾರ್ಯಕರ್ತರೇ ಬಲಿಷ್ಠ ಶಕ್ತಿ. ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾಗಿರುವ ಕಾರ್ಯಕರ್ತರ ಶ್ರಮ ಹಾಗೂ ಅಭಿಮಾನ ಎಂದೆಂದಿಗೂ ಮನದಲ್ಲಿರುತ್ತದೆ. ಹಳ್ಳಿಯಿಂದ ದಿಲ್ಲಿಯವರೆಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಮಾತ್ರ, ಅಭಿವೃದ್ಧಿಯ ಪತಾಕೆ ಹಾರಲು ಸಾಧ್ಯವಾಗುತ್ತದೆ. ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರೆಲ್ಲೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ. ನಿಮ್ಮೊಂದಿಗೆ ನಮ್ಮ ಬೆಂಬಲ ಎಂದೆಂದಿಗಿರುತ್ತದೆ ಎಂದು ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
भिवशी
“भाजपा हा एकमेव पक्ष आहे जो प्रत्येक कार्यकर्त्याचा आदर करतो”
भिवशी गावात ग्रामपंचायत निवडणुकाचा निमित्ताने आयोजित कार्यकर्त्यांची बैठक राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी आणि बसवज्योती युथ फाऊंडेशनचे अध्यक्ष कु. बसवप्रसाद जोल्ले यांनी घेऊन, दासश्रेष्ठ कनकदास यांच्या प्रतिमेला पूजा करून, संबोधित केले.
लोकप्रिय पक्ष असलेल्या भाजपासाठी कार्यकर्ते ही सर्वात मजबूत शक्ती आहे. भाजपाला सत्तेवर नेणाऱ्या कार्यकर्त्यांची मेहनत आणि सदिच्छा कायमचे मनात राहील. खेड्यातून दिल्लीपर्यंत भाजपाची सत्ता आल्यावरच विकासाचा झेंडा फडकवणे शक्य होईल. ग्राम पंचायत निवडणुकीत भाजपा उमेदवारांच्या विजयासाठी कार्यकर्त्यांनी एकजूट होऊन काम केले पाहिजे. तुमच्याबरोबर आमचा पाठिंबा कायम राहील असा कार्यकर्त्यांना आत्मविश्वास वाढविले.
यावेळी जिल्हा पंचायत सदस्य, तालुका पंचायत सदस्य, पक्षाचे स्थानिक नेते आणि कार्यकर्ते उपस्थित होते.