लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರು 38 ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಬಳಗದಿಂದ ಆಚರಿಸಿದರು.

1 min read
Featured Video Play Icon

ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರು 38 ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಬಳಗದಿಂದ ಆಚರಿಸಿದರು.

ನಗರದ ಶಾಸಕ ಆನಂದ ನ್ಯಾಮಗೌಡ ಅವರ ನಿವಾಸದ ಎದುರಿಗೆ ಅವರ ಅಪಾರವಾದ ಅಭಿಮಾನಿ ಬಳಗದವರು ಅವರ 38ನೇ ಹುಟ್ಟು ಹಬ್ಬವನ್ನು  ಬೃಹತ್ತಾದ ಹೂವಿನ ಹಾರವನ್ನು ಹಾಕಿ.ಶಾಲು ಹೊದಿಸಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು.

ನಗರಸಭೆ ಪೌರಕಾರ್ಮಿಕರಿಗೆ  ಸೀರೆಗಳು ಹಾಗೂ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದರು.

ನಗರದ ಹೊರವಲಯದ ಕಟ್ಟೆ ಕೆರೆಯಲ್ಲಿ ಟ್ರೇನ್ ಮೂಲಕ ಸಂಚರಿಸಿದರು.

ನಂತರ ಶಾಸಕ ಆನಂದ ನ್ಯಾಮಗೌಡ ಅವರ ರಾಶಿಯಾದ ವೃಷಭ ರಾಶಿಯ ಸಪ್ತ ಪರಿಣಿ ಎಂಬ ಸಸಿಗೆ ನೀರು ಉನಿಸುವ ಮೂಲಕ ಅಪಾರ ಅಭಿಮಾನಿಗಳ ಸಮೂಹದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿ ಕೊಂಡರು.

ಕಟ್ಟೆ ಕರೆಗೆ ಬಾಗಿನ ಅರ್ಪಿಸಿದರು.

ನಂತರ ಮಾತನಾಡಿದ ಅವರು. ನಮ್ಮ ತಂದೆಯವರ ಕನಸು ಕಟ್ಟೆ ಕರೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಪ್ರವಾಸಿ ತಾಣವನ್ನಾಗಿಸಬೇಕೆಂದು ಅವರ ಕನಸು ಕಂಡಿದ್ದರು. ಅವರ ಕನಸಿನಂತೆ ಜೀಮ್.ಕ್ಯಾಂಟೀನ್.ಇಕೋ ಪ್ರೇಂಡಲಿ ಹಾಲ್ ಅಂದರೆ ಮಳೆಗಾಲ. ಬೇಸಿಗೆ.ಚಳಿಗಾಲದಲ್ಲಿ ಯಾವ ತರಹದ ವಾತಾವರಣದಲ್ಲಿ ಪರಿಸರದಿಂದ ಹಾಗೂ ಪಕ್ಷಿಗಳಿಂದ ಎಷ್ಟು ಅನೂಕುಲ ಇದೆ ಮನುಷ್ಯರ ಜೊತೆ ಎಂಬುವದು ಮೇಸೆಜ್  ನೀಡುವ ಹಾಲ್ ನ್ನು ಹೊಸದಾಗಿ ಮಾಡುತ್ತಿದೆವೆ ಎಂದರು.

ಬಿಜೆಪಿ ಸರಕಾರ ಬಂದ ಮೇಲೆ ಯಾವುದೇ ತರಹದ ಅನೂದಾನ ದೊರಕಿರುವುದಿಲ್ಲ.ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರು 3 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಸರಕಾರ ಬದಲಾವಣೆ ಯಾಗಿದ್ದು. ಆದರೂ ಸಹ ಅರಣ್ಯ ಇಲಾಖೆ. ಪ್ರವಾಸೋದ್ಯಮ ಇಲಾಖೆಯಿಂದ  ಸುಮಾರು 7 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿಸಿ ಕಟ್ಟೆ ಕೆರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಯನ್ನು ಮಾಡುತ್ತೇನೆ.

ಮಹಾಲಿಂಗಪೂರದಲ್ಲಿ ನಡೆದ ಗಲಾಟೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ರಾಮಯ್ಯ   ಶ್ರೀಮತಿ ಉಮಾಶ್ರೀ ಅವರ ನೇತೃತ್ವದಲ್ಲಿ ಬೃಹತ್ ಪ್ರಮಾಣದಲ್ಲಿ ಹೋರಟವನ್ನು 5 ರಂದು  ಹಮ್ಮಿಕೊಳ್ಳಲಾಗುತ್ತದೆ ಎಂದರು.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಲ್ಲಿ ಬಿಜೆಪಿ ಸರಕಾರದ ಆಡಳಿದಲ್ಲಿ ಅತ್ಯಾಚಾರ.ದೌರ್ಜನ್ಯಗಳು ಮಹಿಳೆಯರ ಮೇಲೆ ನಡೆಯುತ್ತಿದ್ದಾವೆ ಇದು ಯಾವ ಕಾರಣಕ್ಕೂ ನಡೆಯಬಾರದು. ಜವಾಬ್ದಾರಿ ಯುತ್ತ ಸ್ಥಾನದಲ್ಲಿ ಇದ್ದವರು ಅರಿತುಕೊಳಬೇಕಾಗಿದೆ ಇಂತಹ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೆವೆ ಎಂದು ಹೇಳಿದರು.

ವರದಿ. ಪರಶುರಾಮ್. ಕಾಂಬಳೆ

 

 

About Author