ಬಜರಂಗದಳ ನಗರ ಸಹ ಸಂಚಾಲಕರಾದ ನಾಗೇಶ್ ಗೌಡ ರಾಂಬೊ ಇವರ ದುಷ್ಕರ್ಮಿಗಳಿಂದ ಮಾರಣಾಂತಿಕವಾದ ಹಲ್ಲೆ #avintvcom
1 min read
ದಾಸಶ್ರೇಷ್ಠ ಕನಕದಾಸರ ಜಯಂತಿ
ಧಾರವಾಡ ( ಕರ್ನಾಟಕ ವಾರ್ತೆ) ಡಿ.03:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಂದು ಸರಳವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಕನಕದಾಸರ ಜಯಂತಿ ಸರಳವಾಗಿ ಆಚರಿಸಲಾಯಿತು.
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು. ನಂತರ ಅಪರ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಮುಖಂಡರಾದ ಬಸವರಾಜ ದೇವರು, ಯಲ್ಲಮ್ಮ ನಾಯ್ಕರ್, ಲೋಹಿತ ನಾಯ್ಕರ, ಬಸವರಾಜ್ ಮಲಕಾರಿ, ಮಂಜು ನಡಟ್ಟಿ, ರಮೇಶ್ ನಲವಡಿ, ಕಲ್ಲಪ್ಪ ಕರಿಗಾರ್, ಜುಂಜಪ್ಪ ಕಮಳಿ, ಹರೀಶ್ ಪಾಟೀಲ್, ರವಿ ಐರಾಣಿ, ರಾಮಪ್ಪ ಐರಾಣಿ, ಸೇರಿದಂತೆ ಹಲವಾರು ಗಣ್ಯರು, ಅಧಿಕಾರಿಗಳು, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು