ಶ್ರೀಮತಿ ಸುಧಾ ಮಂಜುನಾಥ ರವರನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮನೆಯಂಗಳದ ಕಾರ್ಯಕ್ರಮ #avintvcom
1 min read
ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಗೈದಂತಹ ಮೂಡಿಗೆರೆ ತಾಲ್ಲೂಕಿನ ಸಾಧಕರಾದ ಶ್ರೀಮತಿ ಸುಧಾ ಮಂಜುನಾಥ ರವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮನೆಯಂಗಳದ ಕಾರ್ಯಕ್ರಮದಲ್ಲಿ ಗುರುತಿಸಿ ಗೌರವಿಸಲಾಯಿತು. ಸಾಧಕರು ಜಿಲ್ಲೆ ಹಾಗೂ ರಾಜ್ಯಮಟ್ಟದ ಹಲವಾರು ಪ್ರಶಸ್ತಿಯನ್ನು ಪಡೆದಿದ್ದು ಆಧ್ಯಾತ್ಮಿಕ ಕ್ಷೇತ್ರದ ಮಹಾತ್ಮೆಯ ಎರಡು ಸಿ ಡಿ ಗಳು ಬಿಡುಗಡೆ ಗೊಂಡಿವೆ.
ಜಗತ್ತಿನಲ್ಲಿಯೇ ಸಂಗೀತಕ್ಕೆ ವಿಶಿಷ್ಟವಾದ ಸ್ಥಾನವಿದೆ. ಸಂಗೀತ ಮನಸ್ಸನ್ನು ನಿಮರ್ಲಗೊಳಿಸುತ್ತದೆ ಮತ್ತು ಮಾನಸಿಕ ಖಾಯಿಲೆಗಳಿಂದ ಮುಕ್ತ ವಾಗಿರಿಸುತ್ತದೆ ಎಂದು
ಈ ಕಾರ್ಯಕ್ರಮವನ್ನು ಉದ್ದೇಶಿ ಮಾತಾನಾಡಿದ ದೀಪಕ್ ದೊಡ್ಡಯ್ಯ ನವರು ನುಡಿದರು.
ನೂರಾರು ವಿದ್ಯಾರ್ಥಿ ಗಳಿಗೆ ತರಬೇತಿಯನ್ನು ನೀಡಿ ಸಂಗೀತ ಕ್ಷೇತ್ರಕ್ಕೆ ಕೊಡಿಗೆಯಾಗಿ ನೀಡಿರುವ ಇವರು ಕೇವಲ ಶಿಕ್ಷಕರಾಗಿ ಉಳಿಯದೆ ನಿಜವಾದ ಗುರುಗಳಾಗಿ ಅವರಿಗೆ ಮಾರ್ಗದರ್ಶಕರಾಗಿ ಮುನ್ನ ಪಡೆಯುತ್ತಿದ್ದಾರೆ. ಎಲ್ಲರೂ ಗುರುವಿನಂತಹ ಶ್ರೇಷ್ಠ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ ಇವರ ಅಪರವಾದ ಸಾಧನೆ ಮತ್ತು ಸಂಗೀತದ ಬಗೆಗಗಿನ ತಪಸ್ಸು ಇವರನ್ನು ಗುರುವನ್ನಾಗಿಸಿದೆ ಎನ್ನಲು ಸಾಧನೆ ಪ್ರಶಸ್ತಿಗಳು ಇವರನ್ನು ಹುಡುಕಿ ಬರುವುದನ್ನು ಕಂಡಗಾಲೇ ತಿಳಿಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ರವರು ಅಧ್ಯಕ್ಷತೆ ನುಡಿಯನ್ನು ನುಡಿದರು. ಗೀತಾ ಗಾಯನ ಮೂಲಕ ಶಿಷ್ಯ ವೃಂದದಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತ್ತು.
ಕಾರ್ಯಕ್ರಮದಲ್ಲಿ ಎನ್.ಮಂಜುನಾಥ್ . ಹಮೀದ್. ಪ್ರಸನ್ನ ಗೌಡಳ್ಳಿ ,ಸುಚಿತ್ರಪ್ರಸನ್ನ. ಜಯಮ್ಮ. ಪರಿಷತ್ತಿನ ಸದಸ್ಯರಾದ
ಶಾಂತಕುಮಾರ್ .ಆರ್.ಪ್ರಕಾಶ
ಎಮ್.ಎಸ್.ನಾಗರಾಜ್.
ಹಾ.ಬಾ.ನಾಗೇಶ್ . ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು