ಒಕ್ಕಲಿಗ ಸಮುದಾಯ ಮುಖ್ಯವಾದುದಾದರೂ ಅದು ಇಂದಿನವರೆಗೂ ಪರಿವರ್ತನೆಯನ್ನು ಹೊಂದುತ್ತಲೇ ಬಂದಿದೆ #avintvcom
1 min read
#ಒಕ್ಕಲಿಗರಧರ್ಮದಹಿನ್ನಲೆ ಒಕ್ಕಲಿಗ ಸಮುದಾಯ ಯಾವಾಗ ಆರಂಭವಾಯಿತು ಎಂಬುದನ್ನು ತಿಳಿಯುವುದು ಮುಖ್ಯವಾದುದಾದರೂ ಅದು ಆರಂಭದಿಂದನಿಂದ ಇಂದಿನವರೆಗೂ ಪರಿವರ್ತನೆಯನ್ನು ಹೊಂದುತ್ತಲೇ ಬಂದಿದೆ ಬಹು ಪ್ರಾಚೀನ ವೇದಕಾಲದ ಕೃತಯುಗದಲ್ಲಿ ಸಮಾಜ ಜೀವನದಲ್ಲಿ ವರ್ಣಾಶ್ರಮ ಧರ್ಮ ನಿಯಮ ರಚನೆಯಾಗಿ ಮನುಧರ್ಮ ಶಾಸ್ತ್ರದಲ್ಲಿ ಜಾತಿ ವ್ಯವಸ್ಥೆ ರೂಢಿಗೆ ಬಂದರು ಯುಗ ಯುಗಗಳೇ ಉರುಳಿ ಹೋಗಿವೆ ಈ ಅಂತರದಲ್ಲಿ ಅನೇಕ ಮತಪಂಥಗಳು ನಾಗರೀಕತೆಗಳೂ ಉದಯಿಸಿ ಕೆಲವು ಅಳಿಸಿಯೂ ಹೋಗಿವೆ ಆದರೂ ನಮ್ಮ ದೇಶದ ಜಾತಿ ವೆವಸ್ಥೆಯ ನೀತಿ ಬದಲಾಗದೆ ಉಳಿದುಕೊಂಡಿದೆ ಜಾತಿ – ಉಪಜಾತಿಗಳು- ಪಂಗಡಗಳು -ಒಳಪಂಗಡಗಳು ಶಾಖೋಪಶಾಖೆಗಳಾಗಿವೆ ವೃದಿಯಾಗಿ ಹಬ್ಬಿಕೊಂಡಿವೆ. ಪ್ರಮುಖ ಚಾತುರ್ವರ್ಣಾಶ್ರಮಗಳಾದ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಹಾಗೂ ಶೂದ್ರವರ್ಗ ಇವುಗಳಲ್ಲಿ ಒಕ್ಕಲಿಗ ಜನಾಂಗವು ಶೂದ್ರವರ್ಗದ ಗುಂಪಿನಲ್ಲಿ ಗುರ್ತಿಸಲ್ಪಡುತ್ತದೆ ಒಕ್ಕಲಿಗ ಎಂದರೆ ಭೂಮಿಯನ್ನು ಉತ್ತು ಬಿತ್ತಿ ಬೆಳೆ ತೆಗೆಯುವ ಎಂದರ್ಥ ಬೇಸಾಯಗಾರನೇ ಒಕ್ಕಲಿಗ ಎಂದು ಅರ್ಥಯಿಸಬಹುದು ಈ ಭೂಮಿಯ ಮೇಲೆ ಕೃಷಿ ಆರಂಭವಾದಾಗಿಂದಲೇ ಒಕ್ಕಲಿಗನ ಉಗಮವೂ ಅಂದೇ ಆರಂಭವಾಗುದೆ ಎನ್ನಬಹುದು ತೇತ್ರಾಯುಗದಲ್ಲಿ ಪ್ರಸಿದ್ಧನಾದ ಅಯೋಧ್ಯ ಅರಸು ಶ್ರೀರಾಮಚಂದ್ರನು ಇಕ್ಷ್ವಾಕುವಂಶಕ್ಕೆ ಸೇರಿದವನು ಈ ವಂಶಕ್ಕ ಸೇರಿದ ಮೂಲಪುರುಷನೇ ಇಕ್ಷ್ವಾಕು.ಈ ಜಗತ್ ಸೃಷ್ಠಿಯ ಮೊದಲ ಕೃಷಿಕ ಅವನು ಮೊದಲು ಭೂಮಿಯನ್ನು ಉತ್ತು ದೇವಲೋಕದಿಂದ ತಂದ ಸಿಹಿಯಾದ ಹುಲ್ಲನ್ನು ಬಿತ್ತಿ ಬೆಳೆದಂತೆ ಇಕ್ಷು ಎಂದರೆ ಕಬ್ಬು ಸಸ್ಯಶಾಸ್ತ್ರದ ಪ್ರಕಾರ ಕಬ್ಬು ಸಸ್ಯ ಜಾತಿಗೆ ಸೇರಿದ ಹುಲ್ಲು ಸಿಹಿಹುಲ್ಲು ಇದನ್ನು ಮೊದಲಬಾರಿಗೆ ಭೂಮಿಯ ಮೇಲೆ ಕೃಷಿ ಮಾಡಿದವನಾದ್ದಿರಿಂದ ಇಕ್ಷ್ವಾಕು ಎಂಬ ಹೆಸರು ಅವನಿಗೆ ಬಂದಿತು ಹೀಗೆ ಇಕ್ಷ್ವಾಕು ವಂಶದ ಚರಿತ್ರೆಯನ್ನು ಗಮನಿಸಿದರೆ ಇದು ಒಕ್ಕಲಿಗ ಜನಾಂಗಕ್ಕೆ ಸಾಮ್ಯವಿರುವುದು ತಿಳಿಯುತ್ತದೆ ಚರಿತ್ರೆಯ ಮೂಲಗಳನ್ನು ಅವಲೋಕಿಸಿದರೆ ಈ ದೇಶವನ್ನಾಳಿದ ಅನೇಕ ರಾಜಮಹಾರಾಜರಲ್ಲಿ ಗಂಗರು ಕೆಳದಿ ಅರಸರು ನೊಳಂಬರು ದುರ್ಗದ ನಾಯಕರು ಪಾಳ್ಳೇಗಾರರು ಮಾಗಡಿ -ಯಲಹಂಕದ ಅರಸರು ಮುಂತಾದ ರಾಜವಂಶಗಳು ಒಕ್ಕಲಿಗ ಮೂಲದವರೇ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಮಾಹಿತಿ Krishnegowda LR ಅಧ್ಯಕ್ಷರು ಒಕ್ಕಲಿಗ ಧರ್ಮ ಮಹಾ ಸಭಾ ಕುಣಿಗಲ್ ತಾ” ಪ್ರಕಟಣೆ ತುಮಕೂರು ಒಕ್ಕಲಿಗ ಧರ್ಮ ಮಹಾಸಭಾ