लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಶಾಂತಿಸಾಗರ ಮಹಾರಾಜರು ಜನ್ಮವೆತ್ತಿದ ಪುಣ್ಯಭೂಮಿ ಹೆಮ್ಮೆಯ ನಿಪ್ಪಾಣಿ ಮತಕ್ಷೇತ್ರದ ಭೋಜ ಗ್ರಾಮ. #avintvcom

1 min read
Featured Video Play Icon

ಭೋಜ

ಜೈನ ಧರ್ಮದ ಮೂಲ ಮಹಾಪುರುಷ, ದೇಶದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾಜ್ಞಾನಿ, ಶ್ರೀ ಶಾಂತಿಸಾಗರ ಮಹಾರಾಜರು ಜನ್ಮವೆತ್ತಿದ ಪುಣ್ಯಭೂಮಿ ಹೆಮ್ಮೆಯ ನಿಪ್ಪಾಣಿ ಮತಕ್ಷೇತ್ರದ ಭೋಜ ಗ್ರಾಮ. ಇಂದು ಈ ಗ್ರಾಮದ ಶಾಂತಿಸಾಗರಂ ತೀರ್ಥ ಜೈನ ಕೇಂದ್ರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿ, ತಪೋಭೂಮಿ ಪ್ರಣೇತಾ ಶ್ರೀ 108 ಪ್ರಜ್ಞಾಸಾಗರ ಜಿ, ಮುನಿ ಮಹಾರಾಜರ ಆಶೀರ್ವಾದ ಪಡೆದರು. ಬಳಿಕ ಪಂಚಕಲ್ಯಾಣ ಪೂಜೆಗೆ ಧ್ವಜಾರೋಹಣ ನೆರವೇರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.

ನಾಡಿನ ಒಳಿತಿಗಾಗಿ ಊರಿನ ಬಂಧುಗಳೆಲ್ಲಾ ಸೇರಿ ಈ ಪೂಜೆಯನ್ನು ಹಮ್ಮಿಕೊಂಡಿದ್ದೇವೆ. ಸುಮಾರು 9 ದಿನಗಳ ಕಾಲ ಇಲ್ಲಿ ಪೂಜಾ ಕೈಕಂರ್ಯಗಳು ನಡೆಯಲಿವೆ. ಇಂದು ಸರ್ವಾಂಗಿ ಯಕ್ಷ ದೇವತಾ ಪೂಜೆ, 24 ತೀರ್ಥಂಕರ ಪೂಜೆ ಹಾಗೂ ಆದರ್ಶ ಪಂಚಕಲ್ಯಾಣ ಪೂಜೆ ನೆರವೇರಿಸಿ, ನಾಡಿನೆಲ್ಲೆಡೆ ಸಮೃದ್ಧಿ ಪ್ರಜ್ವಲಿಸಿ, ನನ್ನ ಪ್ರಜೆಗಳಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಊರಿನ ಹಿರಿಯರು, ಗಣ್ಯರು, ಶ್ರಾವಕ, ಶ್ರಾವಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

जैन धर्माचे महापुरुष, देशाच्या हितासाठी आपले जीवन समर्पित केलेले महाज्ञानी, श्री शांतीसागर महाराज, यांचे जन्मस्थान पुण्यभूमी निपाणी मतदारसंघातील भोज गाव. आज या गावातील शांतीसागरम तीर्थ जैन केंद्राला भेट देऊन, तपोभूमी प्रणेता श्री 108 प्रज्ञासागर जी, महाराजांचे राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी आशीर्वाद घेतले व त्यानंतर पंचकल्यान पूजेला धर्म ध्वजारोहण करून, महा महोत्सवाला चालना दिले.

देशाच्या हितासाठी गावातील बंधूंनी मिळून ही पूजा आयोजित केली आहे. येथे सुमारे 9 दिवस पूजा होणार आहे. आज सर्वंगी यक्ष देवता पूजा 24 तीर्थंकर पूजा व आदर्श पंचकल्याण पूजा करून, सर्व नागरिकांना ज्ञान व समृद्धी मिळू अशी प्रार्थना केली.

यावेळी गावातील प्रमुख, मान्यवर, श्रावक, श्राविका व ग्रामस्थ उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author