ಶ್ರೀ ಸಾಯಿ ಸಂಸ್ಥೆವತಿಯಿಂದ ಮದ್ಯವ್ಯಸನಿಗಳಿಗೆ ಸತ್ಸಂಗ ಹಾಗೂ ಭಜನ ಕಾರ್ಯಕ್ರಮ #avintvcom
1 min read
ಆಂಕ್ಯರ್ :- ಶ್ರೀ ಸಾಯಿ ಸಂಸ್ಥೆವತಿಯಿಂದ ಮದ್ಯವ್ಯಸನಿಗಳಿಗೆ ಸತ್ಸಂಗ ಹಾಗೂ ಭಜನ ಕಾರ್ಯಕ್ರಮ ವ್ಯಸನಿಗಳ ಮನಸ್ಥಿತಿ ಪರಿವರ್ತನೆಗೆ ಸ್ವಾಮಿಜಿಯಿಂದ ಆಶೀರ್ವಚನ ನಡೆಯಿತು
ವಾ. ಓ :- ದೇವನಹಳ್ಳಿ ತಾಲೂಕಿನ ಆವತಿ ಸಮೀಪದಲ್ಲಿರುವ ಶ್ರೀ ಸಾಯಿ ಮದ್ಯಪಾನ ಮತ್ತು ಮಾದಕ ವ್ಯಸನಿಗಳ ಪರಿವರ್ತನ ಕೇಂದ್ರದಲ್ಲಿ ಕೇಂದ್ರದಲ್ಲಿರುವ ಮದ್ಯಪಾನಿಗಳಿಗೆ ಮನ ಪರಿವರ್ತಿಸಲು ಸತ್ಸಂಗ, ಭಜನೆ.ಬೋಧನೆಯನ್ನು ಗಿರಿಜಾ ಆತ್ಮಾನಂದ ಸ್ವಾಮೀಜಿಗಳಿಂದ ಆಶೀರ್ವಚನ ಕಾರ್ಯಕ್ರಮ ನಡೆಯಿತು.
ನಂತರ ಮಾತನಾಡಿದ ಗಿರಿಜಾ ಆತ್ಮನಂದ ಸ್ವಾಮೀಜಿ ಮಾತನಾಡಿ ಮದ್ಯಪಾನದಿಂದ ಎಷ್ಟೋ ಕುಟುಂಬಗಳು ಬೀದಿ ಪಾಲಾಗಿದೆ. ಮಧ್ಯಪಾನದ ಸೆರೆ ಜೀವನದ ಮೇಲೆ ಹೊರೆ, ಉತ್ತಮ ಚಿಕಿತ್ಸೆ ಪಡೆದು ಆದರಿಂದ ಹೊರಗಡೆ, ಕುಡಿತಕ್ಕೆ ಸ್ನೇಹಿತರ ಗಮ್ಮತ್ತು ನನಗಾಗಿ ಜೀವನಕ್ಕೆ ಆಪತ್ತು ಎಂಬಂತೆ ಇಡೀ ಜೀವನವನ್ನು ಹಾಳು ಮಾಡಿಕೊಳ್ಳುವ ಬದಲು, ಇಂತಹ ಮದ್ಯವ್ಯಸನಿಗಳ ಪರಿವರ್ತನ ಕೇಂದ್ರದಲ್ಲಿ ಪರಿವರ್ತನೆಯಾಗಿ ಎಷ್ಟೋ ಕುಟುಂಬಗಳು ಇದೀಗ ಜೀವನ ನಡೆಸುವುದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದಿರುತ್ತಾರೆ.
ಬೈಟ್ :-1 ಶ್ರೀ ಸಾಯಿ ಇಂಟರ್ನ್ಯಾಷನಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎನ್. ಮೂರ್ತಿ ಮಾತನಾಡಿ, ಸುಮಾರು ಎಂಟು ವರ್ಷದಿಂದ ಮಧ್ಯವರ್ತಿಗಳಿಗೆ ಕುಡಿತವನ್ನು ತಪ್ಪಿಸುವ ಸಲುವಾಗಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಬೈಟ್ :- 2 ಸಹಾಯಕ ಭಾಸ್ಕರ್ ಮಾತನಾಡಿ, ಈ ಕೇಂದ್ರವು ಸತತ 8 ವರ್ಷಗಳಿಂದ ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಸೇವೆಸಲ್ಲಿಸುತ್ತಾ ಬಂದಿದೆ. ಇವತ್ತು ಆಲ್ಕೋಹಾಲ್, ಡ್ರಗ್ ಅಬ್ಯೂಸ್ ಪ್ರೋಗ್ರಾಮ್ ಜೊತೆಗೆ ಸತ್ಸಂಗ, ಭಜನಾ ಮತ್ತು ಆಶೀರ್ವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾರಪ್ಪ, ಮಾಲತೇಶ್, ಜಯಂತ್ ಸೇರಿದಂತೆ ಹಲವರು ಇದ್ದರು.
ವರದಿ ರಾಜುಗೌಡ ದೇವನಹಳ್ಳಿ ತಾಲ್ಲೂಕು