“ಗ್ರಾ.ಪಂ. ಚುನಾವಣೆಯಲ್ಲಿ ಶೇ.100 ರಷ್ಟು ಸ್ಥಾನಗಳನ್ನು ಪಡೆಯುವ ಗುರಿ” #avintvcom
1 min read
ಧಾರವಾಡ
“ಗ್ರಾ.ಪಂ. ಚುನಾವಣೆಯಲ್ಲಿ ಶೇ.100 ರಷ್ಟು ಸ್ಥಾನಗಳನ್ನು ಪಡೆಯುವ ಗುರಿ”
ಇಂದು ಧಾರವಾಡ ನಗರದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶ ಸಭೆಯನ್ನು ಗಣ್ಯರ ನೇತೃತ್ವದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿ, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಕಾರ್ಯಗತಗೊಳಿಸುವ ಮೂಲಕ ಪಂಚಾಯಿತಿಯಿಂದ ಲೋಕಸಭೆ ಮಟ್ಟದವರೆಗೆ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು ಎನ್ನುವ ನಿಟ್ಟಿನಲ್ಲಿ ಜನಾಂದೋಲವನ್ನು ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಜನಪರ ಪಕ್ಷವಾಗಿದ್ದು, ಅಂದಿನಿಂದ ಇಂದಿನವರೆಗೂ ಜನರ ಸಂಕಷ್ಟಕ್ಕೆ ಮಿಡಿಯುತ್ತಾ, ಅಭಿವೃದ್ಧಿ ಕಾರ್ಯಗಳತ್ತ ಹೆಜ್ಜೆ ಇಡುತ್ತಾ ಬಂದಿದೆ. ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಪ್ರೇರಣೆಯಾಗಬೇಕು. ಬಿಜೆಪಿ ಸರ್ಕಾರದ ಯೋಜನೆಗಳನ್ನು ಮೆಚ್ಚಿದ ಪ್ರಜೆಗಳು ಮುಂಬರುವ ಗ್ರಾ.ಪಂ. ಚುನಾವಣೆಯಲ್ಲೂ ಮತ್ತೊಮ್ಮೆ ಬಿಜೆಪಿಗೆ ಮತ ನೀಡುವ ಮೂಲಕ ಬಿಜೆಪಿ ಪಕ್ಷದ ಗೆಲುವನ್ನು ಎತ್ತಿ ಹಿಡಿಯಲಿದ್ದಾರೆ ಎಂಬ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಜಿ, ಗೃಹ ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿ ಜಿ, ಕೃಷಿ ಸಚಿವರಾದ ಶ್ರೀ ಬಿ.ಸಿ ಪಾಟೀಲ್ ಜಿ, ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ಜಿ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಮೋಹನ್ ಮಾಳಶೆಟ್ಟಿ, ರಾಜ್ಯ ಯುವಮೋರ್ಚಾದ ಅಧ್ಯಕ್ಷರಾದ ಡಾ. ಸಂದೀಪ್ ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಎಂ. ರಾಜೇಂದ್ರ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಗ್ರಾಮ ಸ್ವರಾಜ್ಯ ಸಮಾವೇಶದ ಸಂಯೋಜಕರಾದ ಶ್ರೀ ಸಿದ್ಧರಾಜು, ರಾಜ್ಯ ಪದಾಧಿಕಾರಿಗಳು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಗಣ್ಯರು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
धारवाड
“ग्राम पंचायत निवडणुकीत 100 टक्के जागा मिळण्याचे लक्ष्य”
आज धारवाड शहरात पक्षाच्या वतीने आयोजित ग्रामस्वराज्य परिषद बैठक मान्यवरांच्या नेतृत्वात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी उद्घाटन करून, कार्यक्रमास उद्देशून संबोधित केले.
राज्यात ग्रामस्वराज्य ही संकल्पना राबवून भाजपाने पंचायत ते लोकसभा स्तरापर्यंतच्या सर्व जागा जिंकल्या पाहिजेत असा मेळावा घेण्यात आला आहे. भाजप हा एक सर्वसामान्यांचा पक्ष असून, तेव्हापासून आजपर्यंत सर्व संकटावर मात करत, विकासाच्या दिशेने पाऊल टाकत आले आहे. ग्रामपंचायतींमध्ये भाजपा सत्तेत आल्यामुळे खेड्यांच्या विकासाला उत्तेजन मिळायला पाहिजे. भाजप सरकारच्या योजनांपासून प्रभावित झालेल्या नागरिकांनी पुढील येणाऱ्या निवडणुकीत पुन्हा एकदा भाजपला मत देऊन, पक्षाचा विजय कायम राखतील असा विश्वास आहे असे सांगितले.
यावेळी उद्योग मंत्री श्री जगदीश शेट्टर जी, गृहमंत्री श्री बसवराज बोम्मायी जी, कृषिमंत्री श्री बी.सी. पाटील जी, कामगार मंत्री श्री शिवराम हेब्बार जी, प्रदेश भाजपा अध्यक्ष श्री मोहन माळशेट्टी, प्रदेश युवा मोर्चा अध्यक्ष डा. संदीप कुमार, प्रदेश भाजपा उपाध्यक्ष श्री एम.राजेंद्र, प्रदेश भाजपा प्रधान कार्यदर्शी, आणि ग्रामस्वराज्य अधिवेशन समन्वयक श्री सिद्धराजु, प्रदेश पदाधिकारी, आमदार, विधान परिषदेचे सदस्य, जिल्हा प्रधान कार्यदर्शी, मान्यवर, स्थानिक नेते आणि पक्षाचे कार्यकर्ते उपस्थित होते.