लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಮಕ್ಕಳ ಶ್ರೇಯೋಭಿವೃದ್ಧಿ, ಮಹಿಳೆಯರ ಸಬಲೀಕರಣಕ್ಕಾಗಿ ಅವಿರತ ಶ್ರಮ” #avintvcom

1 min read
Featured Video Play Icon

ತುಮಕೂರ
“ಮಕ್ಕಳ ಶ್ರೇಯೋಭಿವೃದ್ಧಿ, ಮಹಿಳೆಯರ ಸಬಲೀಕರಣಕ್ಕಾಗಿ ಅವಿರತ ಶ್ರಮ”
ಇಂದು ತುಮಕೂರಿನಲ್ಲಿ, ಜಿಲ್ಲಾಡಳಿತ ಹಾಗೂ ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ, ಇಲಾಖೆಯ ಉಪನಿರ್ದೇಶಕರ ನೂತನ ಕಚೇರಿ ಹಾಗೂ 25 ನೂತನ ಅಂಗನವಾಡಿ ಕಟ್ಟಡಗಳ ಉದ್ಘಾಟನೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಜೆ.ಸಿ ಮಾಧುಸ್ವಾಮಿ ಜಿ, ಅವರ ಜೊತೆಗೂಡಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ನೆರವೇರಿಸಿ, ಸತ್ಕಾರ ಸ್ವೀಕರಿಸಿ, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಮಹಿಳೆಯರ ಸಬಲೀಕರಣವೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಲಾಖೆಯ ಪ್ರಮುಖ ಉದ್ದೇಶವಾಗಿದೆ. ಮಹಿಳೆಯರ ಆರ್ಥಿಕ ಅಭಿವೃದ್ಧಿಯೊಂದಿಗೆ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಅವರನ್ನು ಶಕ್ತರನ್ನಾಗಿ ಮಾಡಲು ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಇಂದು ಉದ್ಘಾಟನೆಗೊಂಡ ನೂತನ ಉಪನಿರ್ದೇಶಕರ ಕಚೇರಿಯ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿಮ್ಮ ಸೇವೆಗೆ ಎಂದೆಂದಿಗೂ ಸಿದ್ಧವಿದೆ. ಮುಗ್ಧ ಮನಸ್ಸಿನ ಪುಟಾಣಿಗಳ ಶಿಕ್ಷಣಕ್ಕೆ ಅಂಗನವಾಡಿ ಮೊದಲ ಮೆಟ್ಟಿಲಾಗಿದೆ. ಹೀಗಾಗಿ ಅವರ ಆರೈಕೆ, ಶಿಕ್ಷಣಕ್ಕೆ ಪೂರಕವಾಗುವ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಗುಣಮಟ್ಟದ ಕಟ್ಟಡಗಳನ್ನು ಒದಗಿಸಲಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿ ಮಾಡಿ, ದೇಶದ ಸತ್ಪ್ರಜೆಗಳಾಗುವ ಮಕ್ಕಳ ಏಳಿಗೆಗೆ ಅವಿರತವಾಗಿ ಶ್ರಮಿಸಲಾಗುವುದು ಎಂದು ನುಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಜೆ.ಬಿ ಜ್ಯೋತಿಗಣೇಶ, ಜಿಲ್ಲಾಧಿಕಾರಿಗಳಾದ ಡಾ. ಕೆ.ರಾಕೇಶ ಕುಮಾರ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಶುಭ ಕಲ್ಯಾಣ, ಇಲಾಖೆಯ ಉಪನಿರ್ದೇಶಕರಾದ ಶ್ರೀ ಎಸ್.ನಟರಾಜ್, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಗಣ್ಯರು, ಜನಪ್ರತಿನಿಧಿಗಳು, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು ಉಪಸ್ಥಿತರಿದ್ದರು.
“बालविकास आणि महिला सबलीकरणासाठी सातत्याने प्रयत्न”
आज, तुमकूरमध्ये, जिल्हा प्रशासन आणि जिल्हा पंचायत, महिला व बालविकास विभाग यांच्या संयुक्त विद्यमाने, विभागाच्या उपसंचालक नवीन कार्यालयाचे व 25 नवीन अंगणवाडी इमारतींचे उद्घाटन कायदा व संसदीय कार्यमंत्री श्री जे.सी. मधुस्वामी जी, यांच्यासमवेत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी करून, सत्कार स्वीकारून, कार्यक्रमास उद्देशून संबोधित केले.
मुलांचे सक्षमीकरण आणि महिला सबलीकरण करणे महिला व बालविकास विभागाचे मुख्य ध्येय आहे. भाजपा सरकार आर्थिक समानता आणि सामाजिक न्यायासह महिला सबलीकरणासाठी प्रयत्न करत आहे. या दरम्यान आज उद्घाटन झालेल्या नवीन उपसंचालक कार्यालयामार्फत महिला व बालविकास विभाग तुमच्या सेवेसाठी सदैव तत्पर आहे. अंगणवाडी ही निरागस मनाच्या चिमुकल्यांच्या शिक्षणासाठी पहिली पायरी आहे. म्हणूनच त्यांची देखभाल आणि
शिक्षणाच्या पूरकतेसाठी राज्यभर दर्जेदार इमारती देण्यात येत आहेत. येत्या काही दिवसांत आणखी अंगणवाडी केंद्रे विकसित करून, देशाचे सर्वोत्तम नागरिक होणाऱ्या मुलांच्या उन्नतीसाठी सातत्याने प्रयत्न केला जाईल असे सांगितले.
यावेळी आमदार जे.बी. ज्योतिगणेश, जिल्हाधिकारी डॉ. के. राकेश कुमार, जिल्हा पंचायत मुख्य कार्यकारी अधिकारी, श्रीमती शुभ कल्याण, विभागाचे उपसंचालक श्री एस. नटराज, जिल्हा पंचायत सदस्य, मान्यवर, लोकप्रतिनिधी, अंगणवाडी पर्यवेक्षक, कार्यकर्ते उपस्थित होते.

About Author