लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ.ಸುದ್ದಿ ಜಾಲ.✒️: *ಜನರ ಜೀವವೇಕೆ ಅಗ್ಗ?*
ನೆನ್ನೆ ದಿನ ವಿಮಾನ ಪತನಗೊಂಡು ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ನಿಜಕ್ಕೂ ದುಃಖದ ಸಂಗತಿ. ಅಹಮದಾಬಾದಿನಿಂದ ಲಂಡನ್ನಿಗೆ ಹೊರಟಿದ್ದ ವಿಮಾನವಿದು.

ಬಹಳ ಸುದೀರ್ಘ ಹಾರಾಟವಾದ್ದರಿಂದ ಬಹುಶಃ ವಿಮಾನದ ಫ್ಯೂಲ್ ಟ್ಯಾಂಕ್ ಭರ್ತಿಯಾಗಿತ್ತು, ತಾಪಮಾನ ಸುಮಾರು 40 ಡಿಗ್ರಿಯಿತ್ತು, ಅಹಮದಾಬಾದ್ ವಿಮಾನ ನಿಲ್ದಾಣದ ಎಲಿವೇಶನ್ ಸುಮಾರು ಇನ್ನೂರು ಅಡಿ, ವಿಮಾನ ಟೇಕ್ ಆಫ್ ಪ್ರಕ್ರಿಯೆಯಲ್ಲಿತ್ತು ಮತ್ತು 645 ಅಡಿಯೆತ್ತರಕ್ಕೆ ಏರಿತ್ತು ಎಂಬುದು ತಜ್ಞರ ಅಭಿಪ್ರಾಯ.

ಅಹಮದಾಬಾದ್ ವಿಮಾನ ನಿಲ್ದಾಣ ಹಕ್ಕಿಗಳ ಉಪಟಳಕ್ಕೆ ಕುಖ್ಯಾತ ಬಹುಶಃ ಹಕ್ಕಿಗಳು ಏಕಕಾಲಕ್ಕೆ ವಿಮಾನದ ಎಂಜಿನ್ಗೆ ಸಿಲುಕಿ ವಿಮಾನ ಆಗಸಕ್ಕೆ ಏರಲಾಗದೆ ಪತನಗೊಂಡಿದೆ ಎಂಬುದು ಮೇಲ್ನೋಟ ಕಾಣುತ್ತಿದೆ.

ತಜ್ಞರು ಗಮನಿಸುತ್ತಿರುವ ಮತ್ತೊಂದು ವಿಷಯವೇನು ಅಂದ್ರೆ ವಿಮಾನ nose dive ಮಾಡಿಲ್ಲ. (ಮೂತಿ ಕೆಳಗೆ ಮಾಡಿ ವಿಮಾನ ಬಿದ್ದಿಲ್ಲ, ಕಾಗದದ ವಿಮಾನ ಗಾಳಿಯಲ್ಲಿ ತೇಲುವಂತೆ ತೇಲಿ ಬಿದ್ದಿದ್ದೆ) ವಿಮಾನ ಒಂದು shallow decent ನಲ್ಲಿತ್ತು. ವಿಮಾನ ನಿಲ್ದಾಣದ ಸುತ್ತಮುತ್ತ ವಿಶಾಲ ಬಯಲು ಇದ್ದಿದ್ದರೆ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಇಳಿಸಬಹುದಿತ್ತೇನೋ? ಅಥವಾ ಕಟ್ಟಡದ ಮೇಲೆ ವಿಮಾನ ಬಿದ್ದು ಈಗಾಗಿರುವ ಭಾರಿ ಪ್ರಾಣಹಾನಿ ಆಗುತ್ತಿರಲಿಲ್ಲವೇನೋ!

ಭಾರತದಲ್ಲಿ ಸುರಕ್ಷಿತ ವಿಮಾನಯಾನವನ್ನು ಖಾತರಿ ಪಡಿಸಿಕೊಳ್ಳುವ DGCA ಎನ್ನುವ ನಿರ್ದೇಶನಾಲಯವಿದೆ. ಅದೊಂದು ರೆಗುಲೇಟರಿ ಸಂಸ್ಥೆ. ಈ ಸಂಸ್ಥೆಯ ನಿರ್ದೇಶನದ ಪ್ರಕಾರ ಯಾವುದೇ ವಿಮಾನ ನಿಲ್ದಾಣದ ಹದಿಮೂರು ಕಿಲೋಮೀಟರ್ ಸುತ್ತಮುತ್ತ ಗಾರ್ಬೇಜ್ ಡಂಪ್ (ಕಸದ ರಾಶಿ), ಕಸಾಯಿಖಾನೆಗಳು ಇರಕೂಡದು, ದೊಡ್ಡದೊಡ್ಡ ಕಟ್ಟಡಗಳು, ವಸತಿ ಗೃಹಗಳು ಕೂಡ ಇರಬಾರದು ಎಂಬುದು DGCA ನಿರ್ದೇಶನವಂತೆ.

ಆದರೆ ಭಾರತದಲ್ಲಿ ಎಂದಿನಂತೆ ಇಂತಹ ನಿರ್ದೇಶನಗಳನ್ನು ಗಾಳಿಗೆ ತೂರಲಾಗುತ್ತದೆ. ಕಾನೂನು ಎನ್ನುವುದು ಭಾರತದಲ್ಲಿ ಹಾಳೆಯಲ್ಲಿರುತ್ತದೆ, ವಾಸ್ತವ ಬೇರೇನೆ ಇರುತ್ತದೆ. ಹಾಗಾಗಿ ಭಾರತದಲ್ಲಿ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಅನ್ನುವುದು ಪೈಲಟ್ ಗಳಿಗೆ ದುಃಸ್ವಪ್ನ. ಬೆಂಗಳೂರು, ಹೈದರಾಬಾದ್, ಕೋಚಿನ್ ವಿಮಾನ ನಿಲ್ದಾಣ ಬಿಟ್ಟರೆ ಬೇರೆಲ್ಲಾ ನಿಲ್ದಾಣಗಳಲ್ಲಿ ಜೀವಕೈಯಲ್ಲಿಡಿದು ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಮಾಡುತ್ತೇವೆ ಎನ್ನುವುದು ಬಹಳಷ್ಟು ಪೈಲಟ್ ಗಳ ಅಭಿಪ್ರಾಯ.

ವಿಮಾನ ನಿಲ್ದಾಣವೆಂದರೆ ಬೃಹತ್ ಕಟ್ಟಡ ಮಾತ್ರವಲ್ಲ. ಈ ಅವಘಡಗಳನ್ನು ತಡೆಯುವುದಕ್ಕೆ ತೆಗೆದುಕೊಂಡ ಕಠಿಣ ಕ್ರಮಗಳೇನು. ದುರಂತಗಳು ಸಂಭವಿಸಿದ್ದೆ ಆದರೆ ಅಲ್ಲಿಗೆ ಆಂಬ್ಯುಲೆನ್ಸ್ ಎಷ್ಟು ಸುಲಭವಾಗಿ ತಲುಪಬಲ್ಲದು. ವಿಮಾನ ಪತನಗೊಂಡರೆ ಅದು ಜನನಿಬಿಡ ಜಾಗದಲ್ಲಿ ಬೀಳದ ಹಾಗೆ ಕ್ರಮ ಕೈಗೊಳ್ಳಲಾಗಿದೆಯೇ ಎಂಬೆಲ್ಲಾ ವಿಷಯಗಳು ಮುಖ್ಯವಾಗುತ್ತವೆ.

ಕೆಲವು ವರುಷಗಳ ಹಿಂದೆ ಸಲ್ಲಿ (Sully) ಎಂಬ ಸಿನಿಮಾ ನೋಡಿದ್ದೆ. ಹಕ್ಕಿ ಬಡಿದು ವಿಮಾನದ ಎರಡು ಎಂಜಿನ್ ಫೇಲ್ ಆದಾಗ ವಿಮಾನದ ಪೈಲಟ್ ಚೆಸ್ಲಿ ಸಲ್ಲೆನ್ ಬರ್ಗ್ ವಿಮಾನವನ್ನು ನ್ಯೂಯಾರ್ಕ್ ನಗರದ ಹಡ್ಸನ್ ನದಿಯಲ್ಲಿ ತೇಲುವಂತೆ ಇಳಿಸಿ ಪ್ರಯಾಣಿಕರ ಪ್ರಾಣ ಉಳಿಸಿದ ಘಟನೆ ಆಧಾರಿತ ಚಿತ್ರವದು. ಅಂದು ನ್ಯೂಯಾರ್ಕ್ ಆಗಸದಲ್ಲಿ ವಿಮಾನಕ್ಕೆ ಹಕ್ಕಿ ಬಡಿದಾಗ ವಿಮಾನ ಸುಮಾರು 2700 ಅಡಿಗಳ ಎತ್ತರದಲ್ಲಿತ್ತು. ಅಂದು ಪೈಲಟ್ ಸಲ್ಲಿಗೆ ಸಮಯ ಮತ್ತು ಎತ್ತರದ advantage ಇತ್ತು ಆದರೆ ಅವೆರಡೂ ಭಾರತದ ಪೈಲಟ್ ಪರವಾಗಿ ಇರಲಿಲ್ಲ ಎಂಬುದು ದುಃಖಕರ ಸಂಗತಿ.

ಪತನಗೊಂಡ ಬೋಯಿಂಗ್ ಡ್ರೀಮ್ ಲೈನರ್ ಬಹಳ ರಿಲೈಯಬಲ್ (ವಿಶ್ವಾಸಾರ್ಹ) ವಿಮಾನವೆಂದು ಹೆಸರುಮಾಡಿದೆ. ಹಕ್ಕಿಗಳ ಉಪಟಳವಿಲ್ಲದೆ ಏಕಕಾಲಕ್ಕೆ ಎರಡು ಎಂಜಿನ್ ಫೇಲ್ ಆಗುವ ಸಾಧ್ಯತೆ ಕಡಿಮೆ ಎಂಬುದು ತಜ್ಞರ ಅಭಿಪ್ರಾಯ.

ಇನ್ನು ಕೆಲವು ತಿಂಗಳು ತನಿಖೆ ನಡೆಯುತ್ತದೆ. ತನಿಖೆಯಲ್ಲಿ ಸಾಮಾನ್ಯವಾಗಿ ಹಕ್ಕಿಗಳನ್ನು ದೂಷಿಸುವುದು, ವಿಮಾನವೇ ಸರಿಯಿಲ್ಲ ಅಂತ ಹೇಳುವುದು ಅಥವಾ ಪೈಲಟ್ ಅಸಡ್ಡೆ ಕಾರಣ ಎಂದು ಬೆರಳು ಮಾಡುವುದು ಸಹಜ. ವಿಮಾನದ ದುರಂತದಲ್ಲಿ ಪೈಲಟ್ ಜೀವಕಳೆದುಕೊಂಡರೆ ಅವನನ್ನು ಹೂತುಬಿಡಿ ಆತ ಬದುಕಿದ್ದರೆ ಅವನನ್ನು ನೇಣುಗಂಬಕ್ಕೆ ಏರಿಸಿ ಎಂಬ ಮಾತಿದೆ. ಇಲ್ಲೂ ಅದೇ ಆಗದಿರಲಿ. ನಮ್ಮ ದೇಶದ ವಿಮಾನ ನಿಲ್ದಾಣಗಳ ಕಡು ವಾಸ್ತವ ಪೈಲಟ್ ನಾ ಜೊತೆಗೆ ಹೂತು ಹೋಗದಿರಲಿ.

ನಮ್ಮ ವಿಮಾನ ನಿಲ್ದಾಣಗಳು ಎಷ್ಟು ಸುರಕ್ಷಿತ? ವಿಮಾನದ ನಿಲ್ದಾಣಗಳಲ್ಲಿ DGCA ನಿರ್ದೇಶನ ಏಕೆ ಪಾಲಿಸಲಾಗುತ್ತಿಲ್ಲ? ಪ್ರಖರ ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣದ ಸುತ್ತ ಹಕ್ಕಿಗಳೇಕೆ ಹಾರಾಡುತ್ತವೆ? DGCA ನಿಯಮಗಳನ್ನು ಗಾಳಿಗೆ ತೂರುವ ವ್ಯವಸ್ಥೆಯ ಹಿಂದೆ ಇರುವ ರಾಜಕೀಯ ಲಾಬಿ ಯಾರದ್ದು? ನಿಯಮಗಳನ್ನು ಸಡಲಿಸುವ ಭ್ರಷ್ಟಾಚಾರದ ಕುರಿತು ನಾಗರೀಕರಿಗೇಕೆ ಅರಿವಿಲ್ಲ? ಇಂತಹ ಅಪಾಯಕಾರಿ ನಿಲ್ದಾಣಗಳಲ್ಲಿ ಜೀವದ ಹಂಗು ತೊರೆದು ವಿಮಾನ ಹಾರಿಸುವಂತೆ ಒತ್ತಡ ಹೇರುವ ಖಾಸಗಿ airliner ಸಂಸ್ಥೆಗಳ ಲೋಭ ಎಂತದ್ದು? ಭಾರತದ ಸಾಮಾನ್ಯ ನಾಗರೀಕನ ಜೀವವೇಕೆ ಅಗ್ಗ? ವಿದ್ಯಾರ್ಥಿ ಹಾಸ್ಟೆಲ್ ಏಕೆ ವಿಮಾನ ನಿಲ್ದಾಣಕ್ಕೆ ಸಮೀಪವಿತ್ತು…? Can we ask such questions?

ನಮ್ಮ ಮೀಡಿಯಾ ಹೇಗೆ ವರ್ತಿಸಿತು ಎಂಬುದರ ಬಗ್ಗೆಯೂ ಸ್ವಲ್ಪ ಗಮನ ಹರಿಸುವುದು ಅವಶ್ಯಕ. ಘಟನಾ ಸ್ಥಳಕ್ಕೆ ಕೇಂದ್ರ ಗೃಹ ಸಚಿವ, ವಿಮಾನಯಾನ ಸಚಿವ ದೌಡು ಅದು ಇದು ಅಂತ ಮಾಧ್ಯಮಗಳು ಸುದ್ದಿ ಬಿತ್ತರಿಸಿದವು. ಶೋಕ ಭರಿತ ಗಳಿಗೆಯಲ್ಲೂ ತಮ್ಮ ನೆಚ್ಚಿನ ನಾಯಕರಿಗೆ ಪೊಲಿಟಿಕಲ್ ಮೈಲೇಜ್ ನೀಡುವ ಖಯಾಲಿ ಮಾಧ್ಯಮಗಳದ್ದು. ಗಮನಿಸಿ ಈ ಅವಘಡವನ್ನು ಮಾಧ್ಯಮಗಳು incident ಎಂದು ಬಿಂಬಿಸುತ್ತಿವೆ ಹೊರತು ಇದೊಂದು avoidable accident ಎಂದು ತೋರಿಸುತ್ತಿಲ್ಲ!

ಮುಂದುವರೆದು ನಿಯಮಗಳನ್ನು ಸೂಚಿಸುವ DGCA ಕೂಡಾ ತೀರಾ Insensitive ಆಗಿ ನಡೆದುಕೊಂಡಿದೆ. ಅದು ಪೈಲಟ್ ಮತ್ತು ವಿಮಾನ ಸಿಬ್ಬಂದಿಗಳ ಹೆಸರನ್ನು ಮಾಧ್ಯಮಗಳಿಗೆ ಕೊಟ್ಟುಬಿಟ್ಟಿದೆ. ಮಾಧ್ಯಮಗಳು ನಿರಂತರವಾಗಿ ಪೈಲಟ್ ಗಳ ಚಿತ್ರವನ್ನು ಬಿತ್ತರಿಸುತ್ತಿವೆ! ಅವರ ಮನೆಯವರ ಮನಸ್ಥಿತಿ ಹೇಗಿರಬಹುದು… What must be their trauma? ಪದಗಳಿಲ್ಲ.

Inputs from Cpt. Mohan Ranganathan
••••••••••••••••
D.M.Manjunathaswamy.
Chikkamagaluru

About Author

Leave a Reply

Your email address will not be published. Required fields are marked *