लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್ ನ ಆರ್ಸಿಬಿ ಗೆಲುವಿನ ವಿಜಯೋತ್ಸವ ಬೇಕಿತ್ತಾ.????.

1 min read

ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್ ನ ಆರ್ಸಿಬಿ ಗೆಲುವಿನ ವಿಜಯೋತ್ಸವ ಬೇಕಿತ್ತಾ.????.

ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್ ನ ಆರ್ಸಿಬಿ ಗೆಲುವಿನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾಲ್ತುಳಿತದಿಂದ ಮೃತಪಟ್ಟ ಹಾಗೂ ಗಾಯಗೊಂಡಿರುವ ದುರ್ಘಟನೆಯನ್ನು ಸಿಪಿಐ ಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿ ವಿಷಾದ ವ್ಯಕ್ತಪಡಿಸುತ್ತದೆ. ಹಾಗೂ ಈ ದುರ್ಘಟನೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ನೇರ ಹೊಣೆಯಾಗಿದೆ. ಹಾಗೂ ವಿಜಯೋತ್ಸವ ಕಾರ್ಯಕ್ರಮದ ಮೂಲಕ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ರಾಜಕೀಯ ಹುನ್ನಾರದ ಹಾಗೂ ಕ್ರಿಕೆಟ್ ನ ಉನ್ಮಾದದಿಂದ ಇಂತಹ ದುರ್ಘಟನೆಗಳು ಸಂಭವಿಸಲು ಕಾರಣವಾಗಿದೆ ಎಂದು ಪಕ್ಷ ಅಭಿಪ್ರಾಯಪಡುತ್ತದೆ.

ಮೃತಪಟ್ಟವರಿಗೆ ಮತ್ತು ಗಾಯಗೊಂಡವರಿಗೆ ಸರಕಾರ ಹೆಚ್ಚಿನ ಪರಿಹಾರವನ್ನು ವಿತರಿಸಬೇಕೆಂದು ಪಕ್ಷ ಆಗ್ರಹಿಸುತ್ತದೆ. ಕ್ರಿಕೆಟ್ ಒಂದು ಕ್ರೀಡೆಯಾಗಿ ಉಳಿದಿಲ್ಲ. ಬದಲಿಗೆ ಇದು ಕಾರ್ಪೊರೇಟ್ ಮತ್ತು ಹಣಕಾಸು ಬಂಡವಾಳದ ಮೋಜಿನ ಕ್ರೀಡೆಯಾಗಿದೆ. ಶ್ರೀಮಂತ ಮಕ್ಕಳ ಕ್ರೀಡೆಯಾಗಿ ಮಾರ್ಪಟ್ಟು ಇಡೀ ದೇಶದ ಯುವಜನರನ್ನು ಉನ್ಮಾದದ ಮೂಲಕ ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ಟೂರ್ನಮೆಂಟ್ ಗಳಿಗೆ ಅವಕಾಶ ಕಲ್ಪಿಸುವುದರ ಮೂಲಕ ದೇಶದ ನಿರುದ್ಯೋಗ, ಬಡತನ, ಹಸಿವು, ಆರ್ಥಿಕ ಕುಸಿತ, ಕೃಷಿ ಮತ್ತು ಕೈಗಾರಿಕೆಗಳ ಬಹುದೊಡ್ಡ ಸವಾಲು ಕಂಡುಬಂದಿದ್ದರೂ ಕೂಡಾ ಈ ಎಲ್ಲ ಸಮಸ್ಯೆಗಳನ್ನು ಮುಚ್ಚುವ ಸಲುವಾಗಿ ಇಂತಹ ಟೂರ್ನಮೆಂಟ್ ಗಳನ್ನು ಆಯೋಜಿಸಿ ಪ್ರಾಂಚೈಸಿ ಮೂಲಕ ದೇಶದ ಕ್ರಿಕೆಟ್ ಆಟಗಾರರನ್ನು ಪಶುಗಳಂತೆ ಖರೀದಿಸಿ ಗುಲಾಮರನ್ನಾಗಿ ಮಾಡಿಕೊಂಡು ತಮ್ಮ ಬಂಡವಾಳದ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಈಗಾಗಲೇ ದೇಶದಲ್ಲಿ ಶೇಕಡ 60%ರಷ್ಟು ಜನರ ದಿನದ ಆದಾಯ ನೂರು ರೂಪಾಯಿ ಆಗಿದ್ದು ಅಲ್ಲದೆ ಶೇಕಡ 40%ರಷ್ಟು ಜನ ಎರಡು ಹೊತ್ತಿನ ಊಟ ಮಾಡಲು ಕಷ್ಟ ಪಡುತ್ತಿರುವ ಪರಿಸ್ಥಿತಿಯನ್ನು ಈಗಾಗಲೇ ಸರ್ಕಾರದ ಸಂಸ್ಥೆಗಳು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ. ಹಾಗೂ ದೇಶದ ರೈತರು ತಮ್ಮ ಬೆಳೆಗಳಿಗೆ ಬೆಂಬಲ ಬೆಲೆ ಗಾಗಿ ಹಲವಾರು ವರ್ಷಗಳಿಂದ ಸಂಘರ್ಷ ಮಾಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯದ ಕ್ಷೇತ್ರಗಳನ್ನು ಬಂಡವಾಳ ಹೂಡಿಕೆಗೆ ಅನುಮತಿ ನೀಡಿದೆ. ಇದರಿಂದಾಗಿ ದೇಶದಲ್ಲಿ ಹಸುವಿನ ಸಾವುಗಳು ಸಂಭವಿಸುತ್ತಿವೆ. ಈ ನೈಜ ಸಮಸ್ಯೆಗಳನ್ನು ಜನರಿಂದ ಮುಚ್ಚಿಟ್ಟು ಕ್ರಿಕೆಟ್ ನಂತಹ ಬಂಡವಾಳಗರ ಆಟವನ್ನು ದೇಶಾದ್ಯಂತ ವಿಸ್ತರಿಸಿ ಯುವಜನತೆಯನ್ನು ಉನ್ಮಾದಗೊಳಿಸಲಾಗುತ್ತಿದೆ.ಇದರ ಪರಿಣಾಮ ಇಂತಹ ಸಾವು ನೋವುಗಳಿಗೆ ಸಾಕ್ಷಿಯಾಗಿದೆ. ಆರ್ ಸಿ ಬಿ ಗೆಲುವು ದೇಶದ ಗೆಲುವಲ್ಲ! ಜನತೆಯ ಗೆಲುವಲ್ಲ! ಅದು ಕಂಪನಿಗಳ ಗೆಲುವು ಮದ್ಯದ ದೊರೆ ಸ್ಥಾಪಿಸಿದ ಕಂಪನಿ ಇದು. ಇದರ ಗೆಲುವನ್ನು ರಾಜ್ಯದ ಗೆಲುವಂತೆ ಬಿಂಬಿಸಿದ ಮಾಧ್ಯಮಗಳು ಕೂಡ ಇದರ ಹೊಣೆಯನ್ನು ಹೊರಬೇಕಾಗಿದೆ. ಕ್ರೀಡೆಯ ಹೆಸರಲ್ಲಿ ಜೂಜಾಟ ನಡೆಸುವ ಸರ್ಕಾರದ ಈ ನೀತಿಯನ್ನು ಎಲ್ಲ ಪ್ರಗತಿಪರ ಶಕ್ತಿಗಳು, ಜನಪರ ಶಕ್ತಿಗಳು ಖಂಡಿಸಬೇಕಾಗಿದೆ. ಮೃತಪಟ್ಟ ಹಾಗೂ ಗಾಯಗೊಂಡಿರುವ ಎಲ್ಲರಿಗೂ ಸೂಕ್ತ ಪರಿಹಾರ ನೀಡಬೇಕೆಂದು ರಾಜ್ಯ ಸಮಿತಿ ಒತ್ತಾಯಿಸುತ್ತದೆ.

ರುದ್ರಯ್ಯ. ಬಿ
ರಾಜ್ಯ ಕಾರ್ಯದರ್ಶಿ
ಸಿಪಿಐ(ಎಂಎಲ್)ರೆಡ್ ಸ್ಟಾರ್

About Author

Leave a Reply

Your email address will not be published. Required fields are marked *