ನವ ವಸಾಹತುಶಾಹಿಯ ಕೂಸೇ ಕ್ರಿಕೇಟ್”…
1 min read
” ನವ ವಸಾಹತುಶಾಹಿಯ ಕೂಸೇ ಕ್ರಿಕೇಟ್”……………… ಇಂಗ್ಲೆಂಡ್ ದೇಶವು ಪ್ರಪಂಚದ ವಿವಿಧ ದೇಶಗಳಲ್ಲಿ ವಸಾಹತುಶಾಹಿ ಸ್ಥಾಪಿಸುವ ಜೊತೆಗೆ, ಕ್ರಿಕೆಟ್ ಎಂಬಾ ಕ್ರೀಡೆಯನ್ನು ಜಗತ್ತಿಗೆ ಪರಿಚಯಿಸಿತು. ಇಂಗ್ಲೆಂಡ್ ದೇಶದ ವಸಾತಶಾಹಿ ಒಪ್ಪಿಕೊಂಡ ಹಾಗೂ ವಸಾಹತುಶಾಹಿ ನೀತಿಗೆ ಒಳಗಾಗಿದ್ದ, ಅನೇಕ ದೇಶಗಳು ಕ್ರಿಕೆಟ್ ಎಂಬ ಆಟವನ್ನು ಆಡಲು ಪ್ರಾರಂಭಿಸಿದವು. ಇಂದಿಗೂ ಆ ಪದ್ಧತಿ ಚಾಲ್ತಿಯಲ್ಲಿದೆ. ಆದರೆ ಇಂಗ್ಲೆಂಡ್ ದೇಶದ ವಸಾಹತುಶಾಹಿ ಆಳ್ವಿಕೆಗೆ ಸಂಪೂರ್ಣ ಒಳಗಾಗದ ಅನೇಕ ದೇಶಗಳು ಇಂದಿಗೂ ಕ್ರಿಕೆಟ್ ಆಟವನ್ನು ಆಡುವುದಿಲ್ಲ ಅಂತಹ ದೇಶಗಳೆಂದರೆ ಚೀನಾ,ಜಪಾನ್, ರಷ್ಯಾ,ಫ್ರಾನ್ಸ್, ಇಟಲಿ, ಜರ್ಮನಿ ಇನ್ನು ಮುಂತಾದ ರಾಷ್ಟ್ರಗಳು ಕ್ರಿಕೆಟ್ ಆಟವನ್ನು ಆಡದೆ ದೈಹಿಕವಾಗಿ ಮಾನಸಿಕವಾಗಿ, ಸದೃಢರಾಗಲು ಒಲಂಪಿಕ್ಸ್, ಫುಟ್ಬಾಲ್ ಅಂತಹ ಆಟಗಳನ್ನು ಆಡಿ ಅನೇಕ ಪದಕಗಳನ್ನು ಗಳಿಸುತ್ತಾವೆ ಆದರೆ ಭಾರತ. ??? ಭಾರತ ದೇಶದಲ್ಲಿ ಇಂದು ದಿನ ಬೆಳಗಾದರೆ ವಿವಿಧ ಮಾದರಿಯ ಕ್ರಿಕೆಟ್ ಆಟಗಳು ಇದರಿಂದ ಭಾರತ ಸಾಧಿಸಿದ್ದಾದರೂ ಏನು? ಭಾರತದ ನೆಲದಲ್ಲೇಕೆ!!! ಪ್ರತಿ ವರ್ಷ ಕ್ರಿಕೆಟ್ ಆಟದ ಮೇಲೆ ಬಂಡವಾಳ ಹೂಡಿಕೆದಾರರು ಕೋಟಿ ಕೋಟಿ ಹಣವನ್ನು ಹೂಡಿಕೆ ಮಾಡುತ್ತಾರೆ.? ಹೂಡಿಕೆದಾರರು ವಿಶ್ವದ ನಂಬರ್ ಒನ್ ಶ್ರೀಮಂತರೇ, !!ಆದರೇ, ಭಾರತದ ಬಡತನ ನಿರ್ಮೂಲನೆ ಆಗಿದೆಯೇ.???????????ಕ್ರಿಕೆಟ್ ಎಂಬ ಮೋಹ ಜಾಲಕ್ಕೆ ಒಳಗಾಗಿರುವ ಯುವ ಸಮುದಾಯ ದಿನ ಬೆಳಗಾದರೆ ಸಾಕು ಗಲ್ಲಿ- ಗಲ್ಲಿಯಲ್ಲಿ ತನ್ನ ಕೆಲಸ ಕಾರ್ಯಗಳನ್ನು ಬಿಟ್ಟು ಕ್ರಿಕೆಟ್ ಆಟದಲ್ಲಿ ಮಗ್ನರಾಗಿದ್ದಾರೆ. ಈ ಬಾರಿ 2025ರ ಐ.ಪಿ.ಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲದಿದ್ದರೆ ತನ್ನ ಗಂಡನಿಗೆ ಡೈವೋರ್ಸ್ ಕೊಡುತ್ತೇನೆ ಎಂದು ಹೇಳುವ ಭಾರತದ ನಾರಿ ಒಂದು ಕಡೆಯಾದರೆ.. ಕೋಟಿ ಕೋಟಿ ಬೆಡ್ಡಿಂಗ್ ದಂದೆಗಳು ಎಲ್ಲೆಂದರಲ್ಲಿ ನಡೆದವು. ಮೊಬೈಲ್ ಗೆ ಜಿಯೋ ನೆಟ್ ಪ್ಯಾಕ್ ಕರೆನ್ಸಿ, ಟಿವಿಗೆ ಸ್ಪೋರ್ಟ್ಸ್ ಚಾನೆಲ್ ಹಾಕಿಸದಿದ್ದವರೆಲ್ಲಾ ತರಾತುರಿಯಲ್ಲಿ ಹಾಕಿಸಿದರು ಲಾಭ ಯಾರಿಗೆ?? ಯುವ ಸಮುದಾಯ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳದಂತೆ ವ್ಯವಸ್ಥಿತವಾಗಿ ದೂರ ಇಡುವ ಸಲುವಾಗಿ ಇಂತಹ ಆಟಗಳು ದಿನಂಪ್ರತಿ ನಡೆಯುತ್ತಾವೆ. ಜನ ಮರುಳೋ ಜಾತ್ರೆ ಮರಳೋ ಎನ್ನುವ ಹಾಗೆ ಯುವ ಸಮುದಾಯ ಕ್ರಿಕೆಟ್ ಎಂಬ ಕ್ರೀಡೆಗೆ ಮರುಳಾಗಿದ್ದಾರೆ. ರಾಜಕಾರಣಿಗಳು ಹಣವನ್ನು ನೀಡಿ ಹಳ್ಳಿ-ಹಳ್ಳಿಗಳಲ್ಲಿ ತನ್ನ ರಾಜಕೀಯ ಲಾಭಕ್ಕಾಗಿ ಕ್ರಿಕೆಟ್ ಆಟವನ್ನು ಆಡಿಸುತ್ತಿದ್ದಾರೆ. ಇಂತಹ ಜಾಗತೀಕರಣದ ಮೂಸೆಯಿಂದ ಹೊರ ಬಂದು ಯುವ ಸಮುದಾಯ ಭಾರತದ ಆರ್ಥಿಕ, ರಾಜಕೀಯ , ಶೈಕ್ಷಣಿಕ,ಸಾಮಾಜೀಕ ಹಾಗೂ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ನವ ವಸಾಹತುಶಾಹಿಯ ಮತ್ತೊಂದು ರೂಪವೇ ಕ್ರಿಕೆಟ್. ✍️ ಹರೀಶ್ ನಲ್ಕೆ