ಅವಿನ್ ಟಿವಿ ಕಳಕಳಿ..
1 min read
ಅವಿನ್ ಟಿವಿ ಕಳಕಳಿ..
ಪಶ್ಚಿಮ ಘಟ್ಟ ಮತ್ತು ಕರಾವಳಿಪ್ರದೇಶಗಳ ಪ್ರವಾಸಿ ತಾಣ ಮತ್ತು ದೇವಸ್ಥಾನಗಳ ದರ್ಶನಕ್ಕೆ ಹೋಗುವುದನ್ನ ಮುಂದೂಡಿ,
ಮಳೆ ಗಾಳಿ ತೀವ್ರತೆ ಹೆಚ್ಚಿರುವುದರಿಂದ ಪ್ರವಾಸಿಗರು ಮತ್ತು ಭಕ್ತಾದಿಗಳು ದಯವಿಟ್ಟು ಸ್ವಲ್ಪ ದಿನದ ಮಟ್ಟಿಗೆ ಪಶ್ಚಿಮ ಘಟ್ಟ ಮತ್ತು ಕರಾವಳಿಪ್ರದೇಶಗಳ ಪ್ರವಾಸಿ ತಾಣ ಮತ್ತು ದೇವಸ್ಥಾನಗಳ ದರ್ಶನಕ್ಕೆ ಹೋಗುವುದನ್ನ ಮುಂದೂಡಿ,
ಮರಗಳು ಬೀಳುತ್ತಿವೆ ರಸ್ತೆ ಅಲ್ಲಲ್ಲಿ ಬಂದ್ ಆಗುತ್ತಿದೆ, ಚಿಕ್ಕಪುಟ್ಟ ಹಳ್ಳಗಾವಲಿಗಳು ಉಕ್ಕಿ ಹರಿಯುತ್ತಿವೆ.
ವಿಪರೀತಾ ಮಳೆಯಿಂದ ರಸ್ತೆ ಜಾರುತ್ತಿದೆ, ರಸ್ತೆ ಸರಿಯಾಗಿ ಕಾಣುವುದಿಲ್ಲ, ಅಪಘಾತ ಆಗುವ ಸಂಭವ ಇದೆ, ರಸ್ತೆ ಬದಿ ಇರುವ ಹಳ್ಳ, ಚರಂಡಿ ಮತ್ತು ಚಿಕ್ಕ ಚಿಕ್ಕ ಹಳ್ಳ ಗವಲಿಗಳು ನೀರು ತುಂಬಿ ಅದರ ಆಳ ಗೊತ್ತಾಗದೆ ವಾಹನ ಗಳು ಅದರಲ್ಲಿ ಬೀಳುವ ಸಂಭವ ವಿದೆ, ಪ್ರಾಣಪಾಯ, ಗಾಯಾಳು ಆಗುವ ಸಂಭವ ವಿದೆ
ಅನಿವಾರ್ಯ ಕಾರಣ, ಆಸ್ಪತ್ರೆ ತುರ್ತು ಈ ತರ ಇದ್ದರೆ ಹೋಗಿ, ಇಲ್ಲದಿದ್ದರೆ ಮನೆ ಯಲ್ಲೇ ಮೂರು ಹೊತ್ತು ಬಿಸಿ ಬಿಸಿ ಕಾಫಿ ಕುಡಿದು ಮಳೆಯನ್ನ ಆನಂದಿಸಿ
ಇವನ್ನೆಲ್ಲ ಬದಿಗಿರಿಸಿ ಹೋಗಿ ಅಲ್ಲಿ ಸ್ಥಳೀಯ ಆಡಳಿತ, ಪೊಲೀಸ್, ಕಂದಾಯ ಅಧಿಕಾರಿಗಳು, pwd, KEB ಸಿಬ್ಬಂದಿಯ ಪ್ರಾಣ ಹಿಂಡಬೇಡಿ,ಸರ್ಕಾರಿ ಅಧಿಕಾರಿಗಳು ಅಂದ್ರೆ ಅವರು ನಮ್ಮ ನಿಮ್ಮ ಹಾಗೆ ಮನುಷ್ಯರೆ, ಅವರಿಗೂ ಸಹ ಅಪ್ಪ ಅಮ್ಮ, ಪತ್ನಿ ಮಕ್ಕಳು ಸಂಸಾರ ಇದೆ, ಈಗಾಗಲೇ ಅವರಿಗೆ ಕಡಿತ ಬಂದರು ಕೆರೆದುಕೊಳ್ಳಲು ಸಮಯವಿಲ್ಲ, ಜೊತೆಗೆ ಸಿಬ್ಬಂದಿ ಕೊರತೆ ಬೇರೆ
ನಿಮ್ಮ ಅನುಕೂಲಕ್ಕೆ ಹೇಳುತ್ತಿರುವುದು
✍️ ಅವರೇಕಾಡು ಪೃಥ್ವಿ