ಕೆರೆ ಬೇಟೆ..ಸಂಚಿಕೆ..1.. ಸರ್ಕಾರಿ ಕೆರೆ ಒತ್ತುವರಿ ತೆರವಿಗೆ ಅಗ್ರಹ…….
1 min read
ಕೆರೆ ಬೇಟೆ..ಸಂಚಿಕೆ..1..
ಸರ್ಕಾರಿ ಕೆರೆ ಒತ್ತುವರಿ ತೆರವಿಗೆ ಅಗ್ರಹ
ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಬಣಕಲ್ ಗ್ರಾಮ ಪಂಚಾಯತಿ
ವ್ಯಾಪ್ತಿಯ ಬಣಕಲ್ ಹೊರಟ್ಟಿ ಗ್ರಾಮದಲ್ಲಿ ಅಮೃತ್ ಸರೋವರ್ ಯೋಜನೆ ಅಡಿ
ಸುಮಾರು ೧೮.ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸರ್ಕಾರಿ ಕೆರೆಯನ್ನು
ಸ್ಥಳೀಯ ನಿವಾಸಿಯಾದ ಉಪೇಂದ್ರ ಎಂಬುವವರು ಕೆರೆ ಮತ್ತು ಕೆರೆಗೆ
ಹೋಗುವ ದಾರಿಯನ್ನು ಅತಿಕ್ರಮಣ ಮಾಡಿಕೊಂಡಿದ್ದು, ಈ ಸಂಬಂಧ ಸ್ಥಳೀಯ
ಗ್ರಾಮ ಪಂಚಾಯಿತಿ ಮತ್ತು ತಹಸಿಲ್ದಾರ್ ಹಾಗೂ ಜಿಲ್ಲಾಧಿಕಾರಿಯವರಿಗೆ ಲಿಖಿತವಾಗಿ
ದೂರು ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಲ್ಲವೆಂದು ಸ್ಥಳೀಯ ಆಕಾಶ್
ಎಂಬುವರು ದೂರಿದ್ದಾರೆ.
ಅವರು ವಾಹಿನಿಯೊಂದಿಗೆ ಮಾತನಾಡುತ್ತ ಸರ್ಕಾರದ ಹಣ ಈ ರೀತಿ ದುರುಪಯೋಗ ಆಗುತ್ತಿದ್ದರೂ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದ್ದು ಸರ್ಕಾರಿ ಕೆರೆ ಅತಿಕ್ರಮಣ ಮಾಡಿದವರ ಪರವಾಗಿ ಇದೆಯೇ ಎಂಬ ಸಂಶಯ
ಮೂಡುತಿದೆ ಎಂದರು.
ಅಲ್ಲದೆ ಆ ದಾರಿಯಲ್ಲಿ ಸ್ಥಳೀಯ ಜನರ ಕೃಷಿ ಜಮೀನುಗಳಿದ್ದು ಜಮೀನಿಗೆ
ಹೋಗುವ ದಾರಿಯನ್ನು ಸಹ ಅತಿಕ್ರಮಣ ಮಾಡಿಕೊಂಡಿದ್ದು ಹತ್ತಾರು ಎಕರೆ
ಜಮೀನನ್ನು ಪಾಳು ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಹಣದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿ ನಿರ್ಮಿಸಲಾದ ಬಾವಿ ಇದ್ದು
ಇದರಿಂದ ಹಲವಾರು ಕುಟುಂಬಗಳಿಗೆ ನೀರು ಪೂರೈಕೆಯಾಗುತ್ತಿದೆ, ಆದರೆ ಈಗ ಆ
ಸ್ಥಳಕ್ಕೆ ಹೋಗುವ ದಾರಿ ಅತಿಕ್ರಮಣಗೊಂಡಿರುವುದರಿಂದ ಯಾರು ಸಹ ಅಲ್ಲಿಗೆ
ಹೋಗದಂತಾಗಿದ್ದು ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಅತಿಕ್ರಮಣಗೊಂಡಿರುವ
ಸರ್ಕಾರಿ ಕೆರೆ ದಾರಿ ಮತ್ತು ಕೆರೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಡಿಸಿಕೊಡಬೇಕೆಂದು ಸ್ಥಳೀಯ ನಿವಾಸಿ ಆಕಾಶ್ ಒತ್ತಾಯಿಸಿದ್ದಾರೆ.