ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಇನ್ ಸ್ಪೆಕ್ಟರ್ ಮೂಡಿಗೆರೆಯ ಸತೀಶ್…
1 min readವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಇನ್ ಸ್ಪೆಕ್ಟರ್ ಮೂಡಿಗೆರೆಯ ಸತೀಶ್…
ಮೂಡಿಗೆರೆ ತಾಲೂಕ್ ಬಿಳಗಲಿ ಸತೀಶರವರು
ಮೂಡಿಗೆರೆಯವರು ಎನ್ನುವುದೆ ಒಂದು ಹೆಮ್ಮೆ..
ಒಂದು ವಿಷಯವನ್ನು ಹಂಚಿಕೊಳ್ಳಲು ತುಂಬಾ ಸಂತೋಷ, ಹೆಮ್ಮೆ ಆಗ್ತಾ ಇದೆ. ನಾಳೆ ಭಾರತದಿಂದ 18 ಯೋಧರ ತಂಡ ಆಪ್ರಿಕಾ ಖಂಡದ ದಕ್ಷಿಣ ಸೂಡಾನ್ ದೇಶಕ್ಕೆ ತೆರಳುತ್ತಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಒಂದು ವರ್ಷಗಳ ಕಾಲ ಕಾರ್ಯ ನಿರ್ವಹಿಸುವ ಸಲುವಾಗಿ ದೆಹಲಿಯಿಂದ ಪ್ರಯಾಣ ಬೆಳೆಸ್ತಾ ಇದೆ. ಈ ತಂಡದಲ್ಲಿ ಕರ್ನಾಟಕದಿಂದ 3 ಜನ (2-SP, 1-,
1- inspector) ಇದ್ದಾರೆ. ವಿಶ್ವಸಂಸ್ಥೆ ನಡೆಸುವ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ದೆಹಲಿಯಲ್ಲಿ ನಡೆದ ವಿಶೇಷ ತರಬೇತಿಗಳನ್ನು ಮುಗಿಸಿ ಹೊರಡುತ್ತಿದೆ
ಈ ತಂಡ.
ಈ ತಂಡದಲ್ಲಿರುವ ಇನ್ಸ್ ಪೆಕ್ಟರ್
ಮೂಡಿಗೆರೆ ತಾಲ್ಲೂಕಿನ ಒಂದು ಕುಗ್ರಾಮ ಬಿಳಗಲಿ. ಇಲ್ಲಿಯ ಸುಬ್ಬಣ್ಣ ಮತ್ತು ಶ್ರೀಮತಿ ಕಮಲಾಕ್ಷಿಯವರ ಮೊದಲ ಪುತ್ರ ಸತೀಶ್. ಬಹಳ ಬಡತನದಲ್ಲಿ ತಾಯಿಯ ಮಹತ್ವಾಕಾಂಕ್ಷೆ, ತಂದೆಯ ಸ್ವಾಭಿಮಾನ ವನ್ನು ಮೈಗೂಡಿಸಿಕೊಂಡು ಬೆಳೆದ ಸತೀಶ್ ಈಗಾಗಲೆ ಎರಡು ಬಾರಿ ಮುಖ್ಯಮಂತ್ರಿ ಪದಕ, ಒಮ್ಮೆ ರಾಷ್ಟ್ರಪತಿ ಪದಕ ಪಡೆದವರು. ಹಿಡಿದ ಕೆಲಸವನ್ನು ಎಷ್ಟೇ ಕಷ್ಟನಷ್ಟಗಳೆದುರಾದರೂ ಬಿಡದೆ ಸಾಧಿಸುವ ಅಪರೂಪದ ಛಲಗಾರ. PC ಯಾಗಿ ಕೆಲಸಕ್ಕೆ ಸೇರಿ ಇಂದು ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರ ಸಾಧನೆಗೆ ಮಲೆನಾಡಿನವರ ಹಾರೈಕೆ ಇರಲಿ.
ಶುಭವಾಗಲಿ ಸತೀಶ್ ಮತ್ತು ತಮ್ಮ ತಂಡಕ್ಕೆ. ಅಲ್ಲೂ ಯಶಸ್ವಿಯಾಗಿ, ತಮ್ಮ ಛಾಪನ್ನು ಒತ್ತಿ ಬನ್ನಿ.