लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇವರು ಬದಲಾಗುವುದು ಯಾವಾಗ

ಕರ್ತವ್ಯ ಮಾಡುವುದು ಅಂದ್ರೆ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲ.ಕಳೆದ ವಾರ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮೂಡಿಗೆರೆ ಸಕಲೇಶಪುರ ರಾಜ್ಯ ಹೆದ್ದಾರಿಯ ಬೆಟ್ಟದಮನೆ ಎಂಬಲ್ಲಿ ರಸ್ತೆ ತಿರುವುವಿನಲ್ಲಿ ಪೊಲೀಸ್ ಬ್ಯಾರಿಕೆಡ್ ಹಾಕಿ ವಾಹನ ಸವಾರರಿಗೆ ಅಪಾಯಕಾರಿ ಮಾಡುತ್ತಿದ್ದಾರೆ ಮೂಡಿಗೆರೆ ಪೊಲೀಸ್ ಅಂತ ಲೇಖನ ಹಾಕಿದ್ದೆ.
ಈಗ ಅಲ್ಲಿದ್ದ ಬ್ಯಾರಿಕೆಡ್ ತೆಗೆದು ಕಿರುಗುಂದ ತಿರುವಿನಲ್ಲಿ ಹಾಕಿದ್ದಾರೆ.
ನಾನು ಬ್ಯಾರಿಕೆಡ್ ಹಾಕಿ ತಪಾಸಣೆ ಮಾಡುವುದಕ್ಕೆ ವಿರೋಧ ಮಾಡುತ್ತಿಲ್ಲ, ತಪಾಸಣೆ ಬೇಕೆ ಬೇಕು ಅದು ಸ್ವಾಗತಾರ್ಹ.ಆದರೆ ಬ್ಯಾರಿಕೆಡನ್ನು ತಿರುವಿನಲ್ಲಿ ಇಡಬಾರದು.ರಸ್ತೆ ನೇರವಾಗಿ ಇರುವ ಕಡೆ ಇಡಬೇಕು, ಬ್ಯಾರಿಕೆಡ್ ಸಂಪೂರ್ಣವಾಗಿ ರಸ್ತೆಯ ಎರಡು ಬದಿ ಚಲಿಸುವ ವಾಹನ ಚಾಲಕರಿಗೆ ದೂರದಿಂದ ಕಾಣಬೇಕು, ಇದರಿಂದ ವಾಹನ ಸವಾರರು ಗಲಿಬಿಲಿ ಆಗುವುದು ತಪ್ಪಿ ಅಪಘಾತ ಆಗುವುದು ತಪ್ಪುತ್ತದೆ ಅಂತ ಕಾಳಜಿ ಇಂದ ಹಾಕಿದ್ದೆ.
ಅದೇಕೋ ಪೊಲೀಸ್ ಅವರಿಗೆ ತಾವು ಜನರ ಸೇವೆ ಗೆ (civilian service)ಗೆ ಇರುವುದು ಅನ್ನುವುದು ಹೇಳಿಕೊಟ್ಟಿಲ್ಲ ಅಂತ ಕಾಣುತ್ತೆ, ತಾವು ಇರುವುದೆ ನಾವು ಹೇಳಿದ್ದಂಗೆ, ಮಾಡಿದಂಗೆ ಜನ ಮುಚ್ಚಿಕೊಂಡು ಕೇಳಬೇಕು ಅನ್ನುವ ಮನೋಭಾವನೆ ಎಲ್ಲವನ್ನು ಶಾಸಕರು, ಲೋಕಸಭಾ ಸದಸ್ಯರೇ ಹೇಳಬೇಕಾ.

ಅಲ್ಲಿ ಬೆಟ್ಟದಮನೆ ಹತ್ತಿರ ದೇವರುoದ ಮಾರ್ಗವಾಗಿ ಬರುವ ರಸ್ತೆ ಕೂಡು ಇದೆ ಈಗ ಅದನ್ನ ಬಿಟ್ಟು ಕಿರಗುಂದದಲ್ಲಿ ಹಾಕಿದ್ದಾರೆ, ಏನು ಪ್ರಯೋಜನ
ಮುಂಚೆ ಇದ್ದ ಬೆಟ್ಟದಮನೆ ಸ್ಥಳದ ತಿರುವಿನಲ್ಲಿ ಬಿಟ್ಟು ಅಲ್ಲೇ ಸ್ವಲ್ಪ ಮುಂದೆ ರಸ್ತೆ ನೇರ ಇರುವಲ್ಲಿ ಹಾಕಬಹುದು , ಬೇಕಾದ್ರೆ ಜಾಗ ತೋರಿಸಬಲ್ಲೆ
✍️ ಅವರೇಕಾಡು ಪೃಥ್ವಿ.

About Author

Leave a Reply

Your email address will not be published. Required fields are marked *