लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಟಿ.ಎ.ಪಿ.ಸಿ.ಎಂ.ಸಿ..ಆದರೆ ಈಗ ಕೇವಲ ರಾಜಕೀಯ ಮೂಡಿಗೆರೆ ತಾಲ್ಲೂಕಿನ ಹಿಂದಿನ ಸ್ವಾತಂತ್ರ್ಯ ಹೋರಾಟಗಾರರು ಮತ್ತು ತಾಲ್ಲೂಕಿನ ಮುಖಂಡರುಗಳು ಕಟ್ಟಿ ಬೆಳೆಸಿದ್ದಾರೆ.
ಗುಂಪುಗಾರಿಕೆಯಿಂದ ಅಭಿವೃದ್ದಿ ಕೆಲಸ ನಡೆಯುತ್ತಿಲ್ಲ .ಉದಾಹರಣೆಗೆ ವಾರ್ಷಿಕ ಮಹಾಸಭೆಯಲ್ಲಿ ಪ್ರತಿ ವರ್ಷ ಹಳೆಯ ಭ್ರಷ್ಟಾಚಾರದ ವಿಷಯ ಚರ್ಚೆಗೆ ಬರುವುದರಿಂದ ಸಂಘದ ಮೂಲ ಉದ್ದೇಶವನ್ನು ಮರೆತು ಸಮಯವನ್ನು ಹಾಳು ಮಾಡುತ್ತಿದ್ದಾರೆ.
2024 ರ ಮಹಾಸಭೆಯಲ್ಲಿ ಕೇವಲ ವಿವಿಧ ಕ್ಷೇತ್ರದ ಸಾಧನೆ ಮಾಡಿರುವವವರಿಗೆ ಸನ್ಮಾನ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ ಆದರೆ ವಾರ್ಷಿ ಮಹಾಸಭೆಯ ಗಂಭೀರತೆಯನ್ನು ಹಾಳು ಮಾಡುತ್ತಿದ್ದಾರೆ.
ಆದರೆ ಸನ್ಮಾನ ಮಾಡುವುದು ಬೇರೆ ಸಮಯ → ನಿಗದಿ ಮಾಡಿ ಸನ್ಮಾನ ಮಾಡಿದರೆ ತಪ್ಪೇನಿಲ್ಲ. ಈಗ ಇದನ್ನು ಬೇರೆ ಊರಿನ ಪ್ರಾಥಮಿಕ * ಸಹಕಾರ ಸಂಘಗಳಿನ ವಾರ್ಷಿಕ ಮಹಾಸಭೆಯಲ್ಲಿ ಕೂಡ ಪ್ರಾರಂಭ ಮಾಡಿದ್ದಾರೆ.
ಈ ಸಹಕಾರ ಸಂಘಗಳಲ್ಲಿನ ವಾರ್ಷಿಕ ಮಹಾಸಭೆಗಳಲ್ಲಿ ಅಭಿವೃದ್ಧಿ ಕಡೆ ಗಮನ ಕೊಡದೆ ತಮ್ಮ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ವಾರ್ಷಿಕ ಮಹಾಸಭೆಗಳಲ್ಲಿ ಸನ್ಮಾನ ಕಾರ್ಯಕ್ರಮಗಳನ್ನು ನಡೆಸದಂತೆ ಜಿಲ್ಲಾ ಸಹಕಾರ ಸಂಘದ ನಿರ್ಬಂಧಕರಿಗೆ ಡಿ.ಆರ್ ರವರಿಗೆ ಸಾರ್ವಜನಿಕರಿಂದ ಲಿಖಿತ ಮೂಲಕ ಅರ್ಜಿ ಸಲ್ಲಿಸಲಾಗುವುದು.
ಮೂಡಿಗೆರೆ ಪಟ್ಟಣದ ಎಂ. ಜಿ.ರಸ್ತೆಯಲ್ಲಿರುವ ರೈತ ಮಾರುಕಟ್ಟೆಯ ಮೇಲ್ಬಾಗದ ಅಂತಸ್ತಿನ ಕಟ್ಟಡವನ್ನು ಪ್ರಾರಂಭ ಮಾಡುವಂತೆ ಕಳೆದ 5 ವರ್ಷದಿಂದ ಗಮನ ಸೆಳೆಯಲಾಗಿದೆ.ಇದನ್ನು ಪ್ರಾರಂಭ ಮಾಡದೆ ಇರುವುದರಿಂದ ಬಾಡಿಗೆ ರೂಪದಲ್ಲಿ ಬರುವ ಆದಾಯ ನಷ್ಟವಾಗಿದೆ. ಈ ಕಟ್ಟಡವನ್ನು ಪ್ರಾರಂಭಿಸಬೇಕೆಂದು 4 ವರ್ಷಗಳಿಂದಲೂ ವಾರ್ಷಿಕ ಮಹಾಸಭೆಯಗಳಲ್ಲಿ ಗಮನಕ್ಕೆ ತರುವುದರ ಜೊತೆಗೆ ಮೇಲಾಧಿಕಾರಿಗಳಿಗೆ ಲಿಖಿತ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.
ಆದರೆ ಇಲ್ಲಿವರೆಗೂ ಪ್ರಾರಂಭ ಮಾಡಿಲ್ಲ ಮೂಡಿಗೆರೆ ಎಂ.ಜಿ ರಸ್ತೆಯಲ್ಲಿ ರೈತ ಮಾರುಕಟ್ಟೆಯ ಎದುರು ಭಾಗದಲ್ಲಿರುವ ಹಳೆಯ ಕಟ್ಟಡ ಈಗ ಆಡಳಿತ ಮಂಡಳಿ ಕಛೇರಿ ಮತ್ತು ಬ್ಯಾಂಕ್ ನಡೆಯುತ್ತಿದೆ ಜೊತೆಗೆ ಗೊಬ್ಬರದ ಗೋಡಾನ್ ಕೂಡ ಇದೆ. ಇದು ಬಹಳ ಹಳೆಯದಾಗಿದ್ದು ಇದನ್ನು ಪುನರ್ ನಿರ್ಮಾಣ ಮಾಡಬೇಕು ಎಂದು 2024 ರ ವಾರ್ಷಿಕ ಮಹಾಸಭೆಯಲ್ಲಿ ತಿರ್ಮಾನಿಸಲಾಗಿದೆ.
ಈ ಕಟ್ಟಡ ಹೊಸದಾಗಿ ನಿರ್ಮಾಣ ಮಾಡಿದರೆ ವಿವಿಧ ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಂಡು ಸಂಘಕ್ಕೆ ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಅವಕಾಶ ದೊರಕಲಿದೆ. ಆದರೆ ಕಟ್ಟಡ ಪುನರ್ ನಿರ್ಮಾಣದ ಬಗ್ಗೆ ಯಾವುದೇ ಪೂರ್ವಭಾವಿ ಕೆಲಸ ನಡೆದಿರುವುದಿಲ್ಲ.
ಎ.ಪಿ.ಎಂ.ಸಿ ಮೂಡಿಗೆರೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಈ ಸಂಪೂರ್ಣ ಬಂದ್ ಆಗಿದೆ .ಇದಕ್ಕೆ ಆಡಳಿತ ಅಧಿಕಾರಿ ನೇಮಕ ಆಗಲು ಮುಖ್ಯ ಕಾರಣ ಅಭಿವೃದ್ಧಿ ಶೂನ್ಯ ಆಗಿದ್ದರಿಂದ ಮತ್ತು ರೈತ ಪರವಾದ ಮತ್ತು ಜನ ಪರವಾದ ಯಾವುದೆ ಕೆಲಸ ಮಾಡದೆ ಇರುವುದರಿಂದ.
ಕೇವಲ ಓಟಿನ ರಾಜಕಾರಣಕ್ಕೆ ಬಳಸಿಕೊಂಡು ತಮ್ಮ ನಿರ್ದೇಶಕ ಸ್ಥಾನವನ್ನು ಜವಾಬ್ದಾರಿಯಿಂದ ನಿರ್ವಹಣೆ ಮಾಡದೆ ಇದ್ದುದ್ದರಿಂದ ಚುನಾಯಿತ ಮಂಡಳಿಯಾಗಿದ್ದ ಎ.ಪಿ.ಎಂ.ಸಿ ಈಗ ಸರ್ಕಾರ ಆಡಳಿತ ಅಧಿಕಾರಿಯನ್ನು ನೇಮಿಸಿದೆ.
ಇದೇ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಟಿ.ಎ.ಪಿ.ಎಂ.ಎಸ್.ಸಿ ಗೂ ಬರುವ ಸೂಚನೆಗಳು ಕಾಣುತ್ತಿವೆ.
ಈಗ ರೈತ ಭವನದಲ್ಲಿ ಬರುತ್ತಿರುವ ಮದುವೆ ಬಾಡಿಗೆ ಹಣವನ್ನು ಖರ್ಚು ಮಾಡಿ ಉಳಿದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಮತ್ತು ಕೆಲವೊಂದು ರಾಜಕಾರಣಿಗಳು ಖಾಯಂ ಆಗಿ ಸಂಘದಲ್ಲಿ ನೆಲೆಯೂರಲು ತಮ್ಮ ವೇದಿಕೆ ಸಿದ್ದ ಮಾಡಿ ಬಳಸಿಕೊಳ್ಳುತ್ತಿದ್ದಾರೆ.

ದಾರದಹಳ್ಳಿ ಡಿ.ಎಸ್‌ ರಮೇಶ್ ಗೌಡ.
ಜಿಲ್ಲಾ ರೈತ ಸಂಘದ ಹಸಿರು ಸೇನಾ ಸಂಚಾಲಕರು
ಮೂಡಿಗೆರೆ ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ

About Author

Leave a Reply

Your email address will not be published. Required fields are marked *