लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಾವೇರಿ ಜಿಲ್ಲೆ ಹಾನಗಲ್ ರಸ್ತೆಯ ಕುಳೆನೂರು ಕ್ರಾಸ್ ಅಪಘಾತ (ಬೈಕ್ ಸವಾರ ಮಾರಣಹೋಮ) #avintvcom

1 min read
Featured Video Play Icon

ಹಾವೇರಿ ಜಿಲ್ಲೆ ಹಾನಗಲ್ ರಸ್ತೆಯ ಕುಳೆನೂರು ಕ್ರಾಸ್ ಅಪಘಾತ (ಬೈಕ್ ಸವಾರರ ಮಾರಣಹೋಮ ) ಹಾವೇರಿ ಬೈಕ್ ಸವಾರ ಸುರೇಶ್ ತಂದೆ ಲಕ್ಷ್ಮಣ್ ತಿಮ್ಮಣ್ಣನವರ್ ಸಾ :ಚಿಕ್ಕಹುಲ್ಲಾಳ ಈತನು ಚಲಾಯಿಸುತ್ತಿದ್ದ ಬೈಕ್ ಬಜಾಜ್ ಸಿಟಿ ೧೦೦ ಮೋಟಾರ್ ಸೈಕಲ್ ಚಿ ನಂಬರ್ DUFBK 34186ನೆದರ ಹಿಂಬದಿ ಸೀಟಿನಲ್ಲಿ ಕುಳಿತ ತನ್ನ ಸ್ನೇಹಿತ ಉಡುಚಪ್ಪ ತಂದೆ ಹನುಮಂತಪ್ಪ ದೊಡ್ಮನಿ ಸಾ : ಚಿಕ್ಕಹುಲ್ಲಾಳ ಈತನಿಗೆ ಕೂರಿಸಿಕೊಂಡು ಹಾವೇರಿಯಿಂದ ಸಂಗೂರಿನ ಮಾರ್ಗವಾಗಿ ಚಿಕ್ಕಹುಲ್ಲಾಳ ಗ್ರಾಮಕ್ಕೆ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆರೋಪಿ ಕಾರು ಚಾಲಕ ನಿಂಗನಗೌಡ ಅಭಿಷೇಕ್ ತಂದೆ ಸೋಮನಗೌಡ ಪಾಟೀಲ್ ಸಾ :ದಸರತಕೊಪ್ಪ ತಾಲ್ಲೂಕು ಹಾನಗಲ್ ಈತನು ತಾನು ನಡೆಸುತ್ತಿದ್ದ ಕಾರು ರಿಜಿಸ್ಟ್ರೇಷನ್ ನಂಬರ್ K A 25/ಎಂ ಸಿ 6613ನೇ ಕಾರು ಹಾನಗಲ್ಲ ಹಾವೇರಿ ರಸ್ತೆ ಮೇಲೆ ಹಾನಗಲ್ ಕಡೆಯಿಂದ ಅತೀ ಜೋರಾಗಿ ನಿರ್ಲಕ್ಷ್ಯ ನಿರ್ಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಿಲುವಾಗಿಲು ನಡೆಸಿಕೊಂಡು ಬಂದ ಸಾಯಂಕಾಲ 7ಗಂಟೆಗೆ ಕುಳೇನೂರು ಕ್ರಾಸ್ ಸಮೀಪದ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯ ಎಡಬದಿಯಲ್ಲಿ ತನ್ನ ಎದುರಿನಿಂದ ಸುರೇಶ್ ತಂದೆ ಲಕ್ಷ್ಮಣ ತಿಮ್ಮಣ್ಣನವರ್ ಈತನು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಈ ಮೋಟಾರ್ ಸೈಕಲ್ ಸವಾರರಿಗೆ ಹಾಗೂ ಹಿಂಬದಿ ಸವಾರರ ಸಾವಿಗೆ ಕಾರಣವಾಗಿರುತ್ತಾನೆ ವಿಧಿಯಾಟ ಆತನ ತಂದೆ ತಾಯಿಗಳು ಅನಾಥರ ಇರುತ್ತಾರೆ ಆತನ ಹೆಂಡತಿಯ ಮಡಿಲಲ್ಲಿ 3ತಿಂಗಳ ಗರ್ಭಿಣಿಯಾಗಿದ್ದು ಇವಳ ಚೋಳ ಸ್ಥಿತಿ ಏನು ಎಂಬ ಪ್ರಶ್ನೆಗೆ ಚಿಕ್ಕಹುಲ್ಲಾಳ ಗ್ರಾಮ ಸಂಕಷ್ಟದಲ್ಲಿದೆ ಉಡಚಪ್ಪ ತಂದೆ ಹನುಮಂತಪ್ಪ ದೊಡ್ಮನಿ ಮೂಲತಃ ಚಿಕ್ಕಹುಲ್ಲಾಳ ಗ್ರಾಮದವನಾಗಿದ್ದು ಗ್ರಾಮದ ವಾಲೀಕಾರ ಸೇವೆಯನ್ನು ಸಲ್ಲಿಸುತ್ತಿದೆ ಈತ ಮೂಲಗಳ ಪ್ರಕಾರ ಸೇವೆಯ ಮೇಲಿದ್ದ ನೆಂದು ಕೆಲವೊಂದಿಷ್ಟು ಜನರ ಅಭಿಪ್ರಾಯ ಏನೇ ಆಗಿರಲಿ ತನ್ನ ಹೆತ್ತ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗಳಿಗೆ ಆ ದೇವರು ಸಂಕಷ್ಟವನ್ನು ಭರಿಸುವ ಶಕ್ತಿ ನೀಡಲಿ ಇದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಜನರ ಆಶಯ ಆದರೆ ತಮ್ಮ ಮಕ್ಕಳನ್ನು ಹಾಗೂ ಗಂಡಂದಿರನ್ನು ಕಳೆದುಕೊಂಡ ಆ ಹೆಣ್ಣು ತಾಯಂದಿರು ಹಾಗೂ ಮಕ್ಕಳಿಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡಬೇಕೆಂದು ಅನೇಕ ಗಣ್ಮಾನ್ಯರ ಅಭಿಪ್ರಾಯ ರಾಜ್ಯದ ಅನೇಕ ವಾಲೀಕಾರರು ಇವರ ಜೀವನ ಅಷ್ಟಕ್ಕಷ್ಟೇ ಇರುವುದರಿಂದ ಇವರ ಸಾವು ನೋವುಗಳಿಗೆ ಸ್ಪಂದಿಸುವುದು ಮಾನವೀಯತೆಯ ಧರ್ಮ (ವರದಿಗಾರರು ಬಿಎಸ್ ಸಪ್ಪಣ್ಣನವರ್ )

About Author