ಕೆರೆಗಳ ಅತಿಕ್ರಮಣ ಪಟ್ಟಿಗೆ ಆಕ್ಷೇಪ | ಮೂಡಿಗೆರೆ ಆಡಳಿತಕ್ಕೆ ದೂರುಗಳ ಸವಾಲು….
1 min read
ಕೆರೆಗಳ ಅತಿಕ್ರಮಣ ಪಟ್ಟಿಗೆ ಆಕ್ಷೇಪ | ಮೂಡಿಗೆರೆ ಆಡಳಿತಕ್ಕೆ ದೂರುಗಳ ಸವಾಲು
ಒತ್ತುವರಿ ತೆರವಿಗೆ ಪರ-ವಿರೋಧ.
ಸರಕಾರದ ಆದೇಶದಂತೆ ತಾಲೂಕು ಆಡಳಿತ ತಾಲೂಕಿನಲ್ಲಿರುವ ಸರಕಾರಿ ಕೆರೆಗಳ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾಗಿದೆ. ಒಂದೆಡೆ ಒತ್ತುವರಿ ತೆರವಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಅನೇಕ ಕೆರೆಗಳನ್ನು ಒತ್ತುವರಿ ಪಟ್ಟಿಯಲ್ಲಿ ಕೈಬಿಡಲಾಗಿದ್ದು ಮತ್ತೊಮ್ಮೆ ಪಟ್ಟಿ ಮಾಡಿ ಒತ್ತಡಕ್ಕೆ ಮಣಿಯದೆ ಕಾರ್ಯಾಚರಣೆ ನಡೆಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ತಾಲೂಕಿನಲ್ಲಿ ಸಣ್ಣನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 7, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 210 ಕೆರೆಗಳಿದ್ದು, ಉಳಿದಂತೆ ನೂರಾರು ಕೆರೆಗಳು ಗ್ರಾಮ ಪಂಚಾಯಿತಿಗಳ ಅಧೀನದಲ್ಲಿವೆ. ಇವುಗಳಲ್ಲಿ ಬಹುತೇಕ ಕೆರೆಗಳಲ್ಲಿ ಹೂಳೆತ್ತದೆ, ಕೋಡಿ ನಿರ್ಮಿಸದೆ ಬಿಟ್ಟಿದ್ದರಿಂದ ನೀರೆಲ್ಲ ಬತ್ತಿಹೋಗಿ ಕೆರೆಗಳ ಕುರುಹುಗಳೇ ಸಿಗದಂತಾಗಿದೆ. ಸುಮಾರು 20 ವರ್ಷದಿಂದ ಊರುಬಗೆ, ಹೊಸಕೆರೆ, ಉಗ್ಗೇಹಳ್ಳಿ ಉಪ್ಪರಹಡ್ಡು ಸೇರಿದಂತೆ ಕೆಲ ಕಡೆಯಲ್ಲಿ ಸರಕಾರಿ ಕೆರೆಗಳು ಹಾಳು ಬಿದ್ದಿರುವುದು ಅಧಿಕಾರಿಗಳಿಗೆ ಮಾಹಿತಿ ಇಲ್ಲದಂತಾಗಿದೆ.
ಕೆರೆ ಒತ್ತುವರಿಗೆ ಅಧಿಕಾರಿಗಳೇ ಕಾರಣ?: ಸಣ್ಣ
ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಗೆ ಒಳಪಟ್ಟ ಕೆರೆಗಳ ಅಭಿವೃದ್ಧಿಯನ್ನು ಸಮರ್ಪಕವಾಗಿ ಮಾಡಿದ್ದರೆ ಯಾವ ಸರಕಾರಿ ಕೆರೆಯೂ ಒತ್ತುವರಿಯಾಗುತ್ತಿರಲಿಲ್ಲ. ನಿರ್ಲಕ್ಷ್ಯ ತೋರಿದ್ದರಿಂದ ಕೆರೆ ಅಕ್ಕಪಕ್ಕದ ತೋಟದ ಮಾಲೀಕರಿಂದ ಒತ್ತುವರಿ ಮಾಡಿಕೊಳ್ಳುವ ಪೂರಕವಾದ ಕಾಮಗಾರಿಗಳು ನಡೆದಿವೆ. ಲೋಕವಳ್ಳಿ ಊರುಮುಂದಿನ ಕೆರೆ, ಬಿಳಗುಳದ ಕಲ್ಲೇಶ್ವರ ಕೆರೆ, ಕೆರೆಮಣೆ ಗದ್ದೆಕೆರೆ ಹೀಗೆ ಅನೇಕ ಕೆರೆಗೆಳು ಇದಕ್ಕೆ ಸಾಕ್ಷಿಯಾಗಿವೆ.
ಒತ್ತುವರಿ ಕೆರೆಗಳ ಸುಳ್ಳು ವರದಿ: ಈ ಹಿಂದೆ
ಒತ್ತುವರಿಯಾಗಿರುವ ಕೆರೆಗಳ ಪಟ್ಟಿ ತಯಾರಿಸುವಾಗ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಕೆರೆಗಳನ್ನು ತಾಲೂಕು ಆಡಳಿತ ಕೈಬಿಟ್ಟಿರುವ ಆರೋಪ
ಮೂಡಿಗೆರೆ ತಾಲೂಕಿನ ಕೋಳೂರು ಗ್ರಾಮದಲ್ಲಿ ಕೆರೆ ಒತ್ತುವರಿಯನ್ನು ತಾಲೂಕು ಆಡಳಿತದ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿ ತೆರವುಗೊಳಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕೆರೆಗಳು ವಿನಾಶದಂಚಿಗೆ ತಲುಪುವ ಜತೆಗೆ ಒತ್ತುವರಿಯಾಗಿವೆ. ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ 19 ಕೆರೆಗಳು ಒತ್ತುವರಿ ಯಾಗಿವೆ ಎಂದು ಸರಕಾರಕ್ಕೆ ಸುಳ್ಳು ವರದಿ ನೀಡಲಾಗಿದೆ. ಈ ಬಗ್ಗೆ ಮತ್ತೆ ಪರಿಶೀಲಿಸಿ ಭವಿಷ್ಯದಲ್ಲಿ ಜಲ ಸಂರಕ್ಷಣೆಗಾಗಿ ಎಲ್ಲ ಕೆರೆ ಒತ್ತುವರಿ ತೆರವು ಕಾರ್ಯ ನಡೆಸಬೇಕು.
– ರತನ್ ಊರುಬಗೆ, ಹಸಿರು ಫೌಂಡೇಷನ್ ಅಧ್ಯಕ್ಷರು, ಮೂಡಿಗೆರೆ
ಕೆರೆ ಒತ್ತುವರಿ ತೆರವಿಗೆ ಸರಕಾರ ಮುಂದಾಗಿರುವುದು ಶ್ಲಾಘನೀಯ. ತಾಲೂಕು ಆಡಳಿತದ ಪಟ್ಟಿ ಹೊರತುಪಡಿಸಿ 25 ಕೆರೆಗಳು ಒತ್ತುವರಿಯಾಗಿವೆ. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಕಾರ್ಯಾಚರಣೆಯನ್ನು ನಡೆಸಬೇಕು.
ರಮೇಶ್ ಕೆಳಗೂರು.
ತಾಲೂಕಿನಲ್ಲಿ 125 ಕೆರೆಗಳು ಒತ್ತುವರಿ ಮುಕ್ತವಾಗಿವೆ. ಅಲ್ಪ ಪ್ರಮಾಣದಲ್ಲಿ ಒತ್ತುವರಿ ಯಾಗಿರುವ 47 ಕೆರೆಗಳ ಅತಿಕ್ರಮಣವನ್ನು ತೆರವುಗೊಳಿಸಿದ್ದು, ದೊಡ್ಡ ಮಟ್ಟದಲ್ಲಿ 19 ಕೆರೆಗಳ ಒತ್ತುವರಿಯಾಗಿದೆ ಎಂದು ತಾಲೂಕು ಆಡಳಿತ ವರದಿ ನೀಡಿದೆ.
ಇದೀಗ ತಾಲೂಕು ಆಡಳಿತ 19 ಕೆರೆಗಳ ಪೈಕಿ 7
ದೊಡ್ಡ ಮಟ್ಟದಲ್ಲಿ ಒತ್ತುವರಿಯಾಗಿದ್ದ 19 ಕೆರೆಗಳ ಪಟ್ಟಿ ಹಿಂದೆಯೇ ತಯಾರಾಗಿತ್ತು. ಅದರಂತೆ ಇದೀಗ ತೆರವು ಕಾರ್ಯ ನಡೆಸಿ ಸರಕಾರಕ್ಕೆ ವರದಿ ನೀಡಬೇಕಾಗಿದೆ. ಸಾರ್ವಜನಿಕರಿಂದ ದೂರು ಬಂದರೆ ಪರಿಶೀಲಿಸಿ ತೆರವು ಕಾರ್ಯ ನಡೆಸಲಾಗುವುದು.
ರಾಜಶೇಖರ್ ಮೂರ್ತಿ ತಹಸೀಲ್ದಾರ್, ಮೂಡಿಗೆರೆ.