ಕನ್ನಡ ಕೂಟದ ಅಧ್ಯಕ್ಷ ರಘುನಂದನ್ ಹಾಲೂರು….
1 min read
ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಕಂಪು ಪಸರಿಸುತ್ತಿರುವ ಅಲ್ಲಿನ ಕನ್ನಡ ಕೂಟದ ಅಧ್ಯಕ್ಷ ರಘುನಂದನ್ ಹಾಲೂರು ಅವರಿಗೆ ಕಸಾಪ 111ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶುಕ್ರವಾರ ತಾಲ್ಲೂಕು ಕಸಾಪದಿಂದ ನಗರದಲ್ಲಿ ಆತ್ಮೀಯವಾಗಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ದಯಾನಂದ್ ಮಾವಿನ ಕೆರೆ, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮಂಜುನಾಥಸ್ವಾಮಿ, ಪ್ರಭು ಲಿಂಗಶಾಸ್ತ್ರಿ, ಬಸವರಾಜ್, ಸತೀಶ್, ಸಂದೀಪ್ ಮತ್ತಿತರರು ಹಾಜರಿದ್ದರು.