…ಮಾತು, ಭಾಷಣ ಕಮ್ಮಿ ಮಾಡಿ.. ಕೆಲಸ ಮಾಡಿ ಅಷ್ಟೇ..!!!… ಬಿಎಸ್ಪಿ ರಾಷ್ಟ್ರೀಯ ಸಂಯೋಜಕರಾದ ರಾಜ ರಾಂ ಖಡಕ್ ಸಂದೇಶ…..
1 min read
ದಿನಾಂಕ -08,05, 2025ರಂದು ಮೈಸೂರಿನ ಪುರಭವನದಲ್ಲಿ ನಡೆದ ಬಹುಜನ ಸಮಾಜ ಪಾರ್ಟಿ ವತಿಯಿಂದ ಮೈಸೂರು ವಲಯ ಮ
ಟ್ಟದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಾವೇಶ
ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಸಂಯೋಜಕರು, ಕರ್ನಾಟಕ ಉಸ್ತುವಾರಿಗಳಾದ ರಾಜಾ ರಾಮ್ ರವರು ಪಕ್ಷದಲ್ಲಿ ಇದುವರೆಗೂ ಏನಾಗಿದೆ ಯಾವ ರೀತಿ ಕೆಲಸ ಆಗಿದೆ ಅದು ಬೇಡ.ಇನ್ನು ಮುಂದೆ ನೀವು ಭಾಷಣ ಕಮ್ಮಿ ಮಾಡಿ ಕೆಲಸ ಜಾಸ್ತಿ ಮಾಡಿ, ರಾಜ್ಯದಿಂದ ಹೋಬಳಿ ಮಟ್ಟದ ವರೆಗೂ ಎಲ್ಲ ಹಂತದ ನಾಯಕರು ಕೂಡ ಕೆಲಸ ಮಾಡಬೇಕು ಆಗ ಮಾತ್ರ ಉತ್ತಮ ಫಲಿತಾಂಶ ಸಿಗಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ರವರು ಮಾತನಾಡಿ ಕರ್ನಾಟಕದಲ್ಲಿ ದೊಡ್ಡ ಫಲಿತಾಂಶ ನಾವು ಮೈಸೂರು ವಲಯದಲ್ಲಿ ನೋಡಲು ಬಯಸಿದ್ದೇವೆ, ಹಾಗಾಗಿ ಬಂದಿರುವ ಪ್ರತಿ ಜಿಲ್ಲೆಯಲ್ಲೂ ಕೂಡ ಗಟ್ಟಿಯಾದ ಪಕ್ಷ ಸಂಘಟನೆಯ ಅವಶ್ಯಕತೆ ಇದೆ ಇಂದು ಅದಕ್ಕೆ ಪೂರಕವಾದ ಒಳ್ಳೆಯ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳುತ್ತ ಎಲ್ಲ ಜಿಲ್ಲೆಯ ಕಾರ್ಯಕಾರಿ ಸಮಿತಿ ಯ ಪಟ್ಟಿಯನ್ನು ತರಿಸಿಕೊಂಡು ವರದಿಯನ್ನು ಕೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ವಹಿಸಿದ್ದರು. ರಾಜ್ಯ ಸಂಯೋಜಕರಾದ ಗಂಗಾಧರ್ ಬಹುಜನ, ಅಶೋಕ್ ಚಕ್ರವರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಟಿ ರಾಧಾಕೃಷ್ಣ, ಕಾಂತಪ್ಪ ಅಳoಗಾರ್, ಕೆ ಬಿ ಸುಧಾ, ಜಾಕೀರ್ ಅಲಿಖಾನ್, ಪರಮೇಶ್, ರಾಜ್ಜ್ಯ ನಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಕ್ಕಿ ಮಂಜುನಾಥ್ ನಿರೂಪಿಸಿದರು.