ಇದೊಂದು ಫ್ರೆಷ್ ರೀಡ್….
1 min read
✒️ ಅವಿನ್ ಟಿವಿ ಸುದ್ದಿಜಾಲ :
ಇದೊಂದು ಫ್ರೆಷ್ ರೀಡ್….
ನೇರ ದಿಟ್ಟ ನಿರಂತರ ಮಾತಿನ ಕಾರಣಕ್ಕಾಗಿ, ಆಡಳಿತ ಪಕ್ಷವನ್ನೂ ಕೂಡ ಸ್ವವಿಮರ್ಶೆಗೆ ಒಳಪಡಿಸುತ್ತಾ ವಿರೋಧ ಪಕ್ಷಗಳನ್ನು ವಿಮರ್ಶಿಸುತ್ತಾ ಟೀಕೆ ಟಿಪ್ಪಣಿ ಷರಾ ಮೂಲಕ ಸದಾ ಒಂದಿಲ್ಲೊಂದು ಸಂಗತಿಗಳೊಂದಿಗೆ ಬೌದ್ಧಿಕ ಚರ್ಚೆಗೆ ಹೆಸರುವಾಸಿಯಾಗಿರುವ ರಾಜಕಾರಣಿಯೊಬ್ಬರ ನಡೆಯ ಬಗ್ಗೆ ಗಮನ ಸೆಳೆಯುವ ಸುದ್ದಿ ಇದು.
ಅಂದರೆ,
ಇದೊಂದು ಫ್ರೆಷ್ ರೀಡ್…….
ದೇಶದಲ್ಲಿ ಏನೇ ಘಟನಾವಳಿಗಳು ನಡೆದರು, ಅವಘಡಗಳು ಸಂಭವಿಸಿದರು, ವೈಪ್ಯರಿತ್ಯಗಳು ಜರುಗಿದರು ಕೂಡ, ಈ ಎಲ್ಲ ಘಟನೆಗಳ ಮೇಲುಸ್ತುವಾರಿಗಾಗಿ ಕರ್ನಾಟಕ ಸರಕಾರ ಇಲ್ಲಿಂದ ಕಳಿಸುಕೊಡುವ ಏಕೈಕ ವ್ಯಕ್ತಿ ಎಂದರೆ ಅದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು.
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಇತ್ತೀಚಿಗೆ ಉಗ್ರರ ಹೀನ ಕೃತ್ಯಕ್ಕೆ 27 ಜನ ಪ್ರವಾಸಿಗರು ದಾರುಣವಾಗಿ ಸಾವನಪ್ಪಿದರು. ಹತ್ಯೆಯಾದ ಈ 27 ಪ್ರವಾಸಿಗರಲ್ಲಿ ಕರ್ನಾಟಕದ ಮೂವರು ಕೂಡ ಯಾವುದೇ ತಪ್ಪು ಮಾಡದೆ ಈ ದುಷ್ಕತ್ಯಕ್ಕೆ ಬಲಿಯಾಗಬೇಕಾಯಿತು.
ಹೀಗೆ ಬಲಿಯಾದವರ ಪಾರ್ಥಿವ ಶರೀರ ಮತ್ತು ಕಾಶ್ಮೀರದ ಪ್ರವಾಸಕ್ಕೆ ತೆರಳಿದ 178 ಕನ್ನಡಿಗರನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಹಿಂತಿರುಗಿ ಕರೆತರಲು, ಅಧಿಕಾರಿಗಳು ಮತ್ತು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರನ್ನು ಕರ್ನಾಟಕ ಸರ್ಕಾರ ಪೆಹಲ್ಗಾಂಗೆ ಕಳಿಸಿತ್ತು.
ಇದು ಕರ್ನಾಟಕ ಸರ್ಕಾರದ ಕರ್ತವ್ಯ ಮತ್ತು ವಿಶೇಷ ಜವಾಬ್ದಾರಿಯು ಸಹ ಆಗಿತ್ತು.
ಆದರೆ ಹುಬ್ಬಳ್ಳಿಯಿಂದ ಶ್ರೀನಗರಕ್ಕೆ ತುರ್ತಾಗಿ ಹೋಗಲು ಬೇಕಾದ ವಿಶೇಷ ವಿಮಾನಕ್ಕಾಗಿ ಸಂತೋಷ್ ಲಾಡ್ ಅವರು ಸಾಕಷ್ಟು ಪರದಾಟ ನಡೆಸಿದ್ದರು. ಸುಮಾರು 8:30 ಘಂಟೆಗಳ ಕಾಲ ವಿಶೇಷ ವಿಮಾನಕ್ಕಾಗಿ ನಿರಂತರ ಹುಡುಕಾಟ ನಡೆಸಿ, ನಂತರ ಮುಂಬೈ ನ ಕಂಪನಿಯೊಂದರ ವಿಶೇಷ ವಿಮಾನ ಬುಕ್ ಮಾಡುತ್ತಾರೆ.
ಇಂತಹ ಅವಘಡ ನಡೆದ ಸಂದರ್ಭದಲ್ಲಿ, ಮಾನವೀಯತೆ ಮೆರೆದು ಸಾಮಾಜಿಕ ಕಳಕಳಿಯನ್ನು ಮಿಡಿದು, ಸೇವಾ ಮನೋಭಾವನೆ ಪ್ರದರ್ಶನ ಮಾಡಬೇಕಾಗಿದ್ದ ವಿಮಾನ ಕಂಪನಿಗಳು ನಿಗದಿಯಾಗಿದ್ದ ಟಿಕೆಟ್ ಧರಕ್ಕಿಂತ ಅತಿ ಹೆಚ್ಚು ಟಿಕೆಟ್ ಧರವನ್ನು ಈ ಸಮಯದಲ್ಲಿ ದಿಡೀರನೆ ಏರಿಸಿ ಬಿಟ್ಟಿದ್ದವು.
ಏರಿದ ಈ ಟಿಕೆಟ್ ದರವನ್ನು ಲೆಕ್ಕಿಸದೆ 05 ರಿಂದ 06 ಲಕ್ಷ ಇದ್ದ ಟಿಕೇಟ್ ಧರಕ್ಕೆ 56 ಲಕ್ಷ ನೀಡಿ ಸಂತೋಷ್ ಲಾಡ್ ಮತ್ತು ಅವರ ತಂಡ ವಿಮಾನ ಏರಿ ದುಪ್ಪಟ್ಟು ಧರವನ್ನು ಕೊಟ್ಟು ಹೊರಟೆಬಿಟ್ಟರು .
ಹೀಗೆ ವಿಮಾನವನ್ನು ಏರಿ, ಜಮ್ಮು ಕಾಶ್ಮೀರದ ಪ್ರವಾಸದಲ್ಲಿದ್ದ ಸುಮಾರು 178 ಕನ್ನಡಿಗರನ್ನು ಮರಳಿ ಕರ್ನಾಟಕಕ್ಕೆ ಕ್ಷೇಮವಾಗಿ ಕರೆತರಲು 1.73 ಕೋಟಿ ರೂ ಖರ್ಚಾಗಿದೆ.
ವಿಶೇಷವೆಂದರೆ ಈ 1.73 ಕೋಟಿ ರೂಗಳನ್ನು ಸರ್ಕಾರದ ಖಜಾನೆಯಿಂದ ಭರಿಸದೆ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಮ್ಮ ಸ್ವಂತ. ಹಣವನ್ನು ಈ ಕಾರ್ಯಾಚರಣೆಗೆ ಭರಿಸಿದ್ದಾರೆ.
ಬಹುತೇಕ ರಾಜಕೀಯ ಕ್ಷೇತ್ರ ಸೇವಾ ಮನೋಭಾವನೆಯನ್ನು ಮರೆತು, ಸ್ವಾರ್ಥದಿಂದ ಹೊಲಸು ರಾಜಕೀಯದೊಂದಿಗೆ ಭ್ರಷ್ಟ ರಾಜಕಾರಣ ಮಾಡುತ್ತಿರುವ ಈ ಕಾಲಘಟ್ಟದಲ್ಲಿ, ಸರ್ಕಾರವೊಂದು ಭರಿಸಬೇಕಾಗಿದ್ದ ಒಂದು ದೊಡ್ಡ ಮೊತ್ತದ ಹಣವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೇ ಸ್ವತಃ ಭರಿಸಿ, ಕನ್ನಡಿಗರನ್ನು ಕ್ಷೇಮವಾಗಿ ಮರಳಿ ಕರೆ ತಂದಿರುವುದು ಮಾದರಿ ರಾಜಕಾರಣಿಯೊಬ್ಬರ ನಡೆಯಾಗಿದೆ.
ಜನಮನದಲ್ಲಿ ಭರವಸೆ ಮತ್ತು ನಂಬಿಕೆಯನ್ನು ಕಳೆದುಕೊಂಡು ಸಾಗುತ್ತಿರುವ ರಾಜಕೀಯ ಕ್ಷೇತ್ರಕ್ಕೆ ಪ್ರಿಯ ಸಂತೋಷ್ ಲಾಡ್ ಅವರ ಈ ನೆಡೆ ಸಂತೋಷದ ಸಂಗತಿಯಾಗಿದೆ.
ಅವಿನ್ ಟಿವಿ ಸುದ್ದಿಜಾಲದ ಪರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಧನ್ಯವಾದಗಳು.
•••••••••••••✒️
ಡಿ.ಎಂ. ಮಂಜುನಾಥಸ್ವಾಮಿ
ಚಿಕ್ಕಮಗಳೂರು.