ಅಬಚೂರಿನ ಫೋಸ್ಟಾಫೀಸು ಕಥನದಂತಾದ ಬೆಟ್ಟಗೆರೆ ಅಂಚೆ ಶಾಖೆ..?.!
1 min read
ಅಬಚೂರಿನ ಫೋಸ್ಟಾಫೀಸು ಕಥನದಂತಾದ ಬೆಟ್ಟಗೆರೆ ಅಂಚೆ ಶಾಖೆ..?.!
ಮೂಡಿಗೆರೆ: ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಫೋಸ್ಟಾಫೀಸು ಕನ್ನಡದ ಪ್ರಾತಿನಿಧಿಕ ಕತೆಗಳಲ್ಲೊಂದು. ಈ ಕಥನದ ನಾಯಕ ಅಂಚೆಯ ಬೋಬಣ್ಣ ಸಂಬಂಧಿಸಿದ ವಿಳಾಸವಾಸಿಗೆ ಅಂಚೆಯಲ್ಲಿ ಅವಿ ‘ನಿಗೆ ಬಂದಿದ್ದ ಪತ್ರವನ್ನು ತಲುಪಿಸದೆ ಅದನ್ನು ಎಲ್ಲರೂ ಒಪನ್ ಅಗಿ ಓದುವಂತೆ ಹರಾಜಿಗಿಟ್ಟು ವಿವಾದಕ್ಕಿಡಾಗುವುದು ಕಥೆಯ ಓದುಗರಿಗೆ ಬಹುತೇಕ ಗೊತ್ತೇ ಇರುತ್ತದೆ. ಇಂಥದ್ದೇ ಒಂದು ಸಮಸ್ಯೆ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಮೂಡಿ ಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ವ್ಯಾಪ್ತಿಯ ಬೆಟ್ಟಗೆರೆ ಗ್ರಾಮದ ಘೋಸ್ಟಾ ಫೀಸಿಗೂ ಬಂದೊದಗಿದೆ. ಇಲ್ಲಿ ಸರಿ ಸುಮಾರು ಮೂವತ್ತೈದು ವರ್ಷಗಳಿಂದ ಒಬ್ಬರು ಕೆಲವು ತಿಂಗಳುಗಳ ಹಿಂದೆ ವಯೋನಿವೃತ್ತಿ ಹೊಂದಿದ್ದಾರೆ.
ಇದರಿಂದಾಗಿ ಅಧಿಕೃತವಾದ ಡಾಕ್ ಸೇವಕ್ ಇಲ್ಲಿಗೆ ನೇಮಕವಾಗಿಲ್ಲ. ಈ ಕಾರಣದಿಂದಾಗಿ ಸಾಮಾನ್ಯ ಅಂಚೆಪತ್ರಗಳು ಸಂಬಂಧಿಸಿದವ ‘ರಿಗೆ ಸಕಾಲಕ್ಕೆ ನೇರವಾಗಿ ವಿಲೇವಾರಿ ಯಾಗದೆ ಅಂಚೆ ಶಾಖೆಯಲ್ಲೇ ಬಹುಕಾಲ ಉಳಿದುಕೊಳ್ಳುವಂತೆ ಪರಿಸ್ಥಿತಿಯ ಲಕ್ಷಣಗಳು ಕಂಡುಬರುತ್ತಿವೆ. ಆದ್ದರಿಂದ ತನ್ನ ಸಾರ್ವಜನಿಕರಿಗೆ ವಿಶ್ವಾಸಾರ್ಹ ಸೇವೆಯನ್ನು ಒದಗಿಸುವ ಸಿಬ್ಬಂದಿಯನ್ನುಅಂಚೆ ಇಲಾಖೆ ನೇಮಿಸಿಕೊಳ್ಳಬೇಕಿದೆ.
ತನ್ಮೂಲಕ ಗ್ರಾಮೀಣ ಅಂಚೆ ವ್ಯವಸ್ಥೆಯ ಮೇಲೆ ಜನರ ನಂಬಿಕೆಯನ್ನು ಸದಾ ಕಾಯ್ಡು ಕೊಳ್ಳುವಂತೆ ಮಾಡುವುದು ಅದರ ಮುಖ್ಯ ಜವಾಬ್ದಾರಿ ಕೂಡ ಆಗಿರುತ್ತದೆ. ಅದರಂತೆ ಹಲವು ವರ್ಷಗಳಿಂದ ಕರ್ತವ್ಯ ನಿಷ್ಠೆಯ ಪ್ರಾಮಾಣಿಕತೆಯಿಂದ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಘೋಸ್ಟ್ ಮಾಸ್ಟರ್ ನಿವೃತ್ತಿ
ಹೊಂದುತ್ತಿರುವುದರಿಂದ ಅಗತ್ಯ ಸಿಬ್ಬಂದಿ ಯನ್ನು ಕೂಡಲೇ ನೇಮಿಸಬೇಕಿದೆ. ಈ ಸಮಸ್ಯೆ ಇಲ್ಲಿನದು ಮಾತ್ರವಾಗಿರದೆ ಬಹುತೇಕ ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಕೇಳಿದಾಗ ಮತ್ತಷ್ಟು ಅಚ್ಚರಿ ಎನಿಸುತ್ತದೆ.
– ಡಾ.ಸಂಪತ್ ಬೆಟ್ಟಗೆರೆ