ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಪೆಹಲ್ಗಾಮ್ ದುಷ್ಕೃತ್ಯಕ್ಕೆ ಖಂಡನೆ….
1 min read
✒️ ಅವಿನ್ ಟಿವಿ ಜಾಲತಾಣ:
ಶರಣ ಸಾಹಿತ್ಯ ಪರಿಷತ್ತು ವತಿಯಿಂದ
ಪೆಹಲ್ಗಾಮ್ ದುಷ್ಕೃತ್ಯಕ್ಕೆ ಖಂಡನೆ.
ಈ ಭೀಕರ ದುರಂತದಲ್ಲಿ ಹತ್ಯೆಗೊಳಗಾದ ಭಾರತದ ನಮ್ಮೆಲ್ಲ ಪ್ರೀತಿಯ ಸಹೋದರರಿಗೆ ಭಾವಪೂರ್ಣ ಶ್ರದ್ಧಾಂಜಲಿ
*ತರೀಕೆರೆ ೨೩:* ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನೆ ಕೃತ್ಯವನ್ನು ಖಂಡಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಯ ವತಿಯಿಂದ ಪ್ರವಾಸಿ ಮಂದಿರದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಹಾಗೂ ಕೃತ್ಯ ಖಂಡಿಸಿ ಖಂಡನೆಯನ್ನು ವ್ಯಕ್ತಪಡಿಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಹಾಗೂ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ ಪೆಹಲ್ಗಾಮ್ ಭಯೋತ್ಪಾದಕ ಕೃತ್ಯವು ನಾಗರೀಕ ಸಮಾಜದ ಮೇಲೆ ನಡೆದ ದಾಳಿಯಾಗಿದೆ. ದೇಶದ ನಾಗರೀಕರ ಸುರಕ್ಷತೆಗೆ ಕೇಂದ್ರ ಸರ್ಕಾರ ಕಠಿಣ ಕ್ರಮ ವಹಿಸಬೇಕು. ಭಾರತ ದೇಶದ ಭದ್ರತೆಗೆ ಇಂತಹ ಕೃತ್ಯಗಳು ದಕ್ಕೆ ತರುತ್ತವೆ. ಭಾರತೀಯರೆಲ್ಲ ಒಂದಾಗಿ ದೇಶದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಹೇಳಿದರು
ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಮಾತನಾಡಿ ಸಕಲ. ಜೀವ ರಾಶಿಗೂ ಬದುಕುವ ಹಕ್ಕಿದೆ. ದಯೆ ಇಲ್ಲದ ಧಮ೯ ಅದಾವುದಯ್ಯ , ದಯೆಯೆ ಧಮ೯ದ ಮೂಲವಯ್ಯ ಎಂದು ಬಸವಣ್ಣ ಬಹಳ ಹಿಂದೆಯೆ ಇಂತಹ ಕೃತ್ಯಗಳಿಗೆ ಉತ್ತರ ನೀಡಿದ್ದಾರೆ .ಭಯೋತ್ಪಾದಕರಿಗೆ ಧಮ೯ ಇಲ್ಲ. ಜನರನ್ನು ಕೊಲ್ಲುವ ಮನಸ್ಥಿತಿ ನಾಗರೀಕ ಸಮಾಜಕ್ಕೆ ಗೌರವ ತರಲ್ಲ . ಉಗ್ರರ ದುಷ್ಕೃತ್ಯವನ್ನು ಖಂಡಿಸುವುದಾಗಿ ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಆದಿಲ್ ಪಾಷಾ ಮಾತನಾಡಿ ಕಳೆದ ಮೂವತ್ತು ವಷ೯ಗಳಲ್ಲಿ ಪ್ರವಾಸಿಗರ ಮೇಲೆ ನಡೆದ ಈ ದಾಳಿಯು ಖಂಡನೀಯ. ದೇಶದ ಸುರಕ್ಷತೆಗೆ ಸಕಾ೯ರ ಹಾಗೂ ನಾಗರಿಕರು ಕೈಜೋಡಿಸಬೇಕು ಎಂದರು.
ಎಪಿಎಂಸಿ ಮಾಜಿ ನಿರ್ದೇಶಕ ಟಿ ಆರ್ ಶ್ರೀಧರ್ ಮಾತನಾಡಿ ಉಗ್ರಗಾಮಿಗಳು ಮತ್ತು ಅವರನ್ನು ಬೆಂಬಲಿಸುವ ದೇಶಗಳು ಶಕ್ತಿ ಇದ್ದರೆ ನೇರವಾಗಿ ಯುದ್ಧಕ್ಕೆ ಬರಲಿ, ರಣಹೇಡಿಗಳ ಈ ಕೃತ್ಯವನ್ನು ಪಕ್ಷ ಬೇದ ಮರೆತು , ಜಾತಿ ಧರ್ಮದ ಆಚೆ ಬಂದು ಒಟ್ಟಾಗಿ ಒಂದಾಗಿ ಒಂದೇ ಧ್ವನಿಯಿಂದ ಖಂಡಿಸಬೇಕು ಎಂದು ಕರೆ ಕೊಟ್ಟರು.
ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಟಿ.ಜಿ.ಸದಾನಂದ ಇದೇ ವೇಳೆ ಮಾತನಾಡಿ ದೇಶದ ಸುಭಿಕ್ಷತೆಗೆ ಸಮಗ್ರತೆಗೆ ಹಾಗೂ ಸುರಕ್ಷತೆಗೆ ಉಗ್ರಗಾಮಿಗಳು ಒಂದು ಸವಾಲಾಗಿದ್ದಾರೆ, ಈ ಸಂದರ್ಭದಲ್ಲಿ ದೇಶ ಮೊದಲು ಎಂಬ ಭಾವನೆ ನಮ್ಮೆಲ್ಲರಲ್ಲಿ ಬರಬೇಕಾಗಿದೆ ಎಂದರು.
ಪರಮೇಶ್ವಪ್ಪ. ಕಿರುಚಿತ್ರ ಕಲಾವಿದ ವಿಜಯ್. ದಿನೇಶ್ ಮತ್ತಿತರರು ಇದ್ದರು.
•••••••••✒️ ಬರಹ:
ಡಿ.ಎಂ.ಮಂಜುನಾಥಸ್ವಾಮಿ