ಆದಿವಾಸಿಗಳಿಗೆ ಕೊಳೆತ ಆಹಾರ ವಿತರಣೆ…ಮೂಡಿಗೆರೆ..
1 min read
ಕರ್ನಾಟಕ ಸರ್ಕಾರ ಆದಿವಾಸಿಗಳಿಗೆ ಅಂದರೆ ಹಸಲರು ಹಾಗೂ ಗೌಡಲು ಪಂಗಡಕ್ಕೆ ನೀಡುತ್ತಿರುವ ಪೌಷ್ಟಿಕ ಯೋಜನೆ ಅಡಿಯಲ್ಲಿ ಗೋಣಿಬೀಡು ಹೋಬಳಿಯ ಎಲ್ಲಾ ಆದಿವಾಸಿಗಳಿಗೆ ಗೋಣೀಬೀಡು ಹಾಸ್ಟೆಲ್ ನಲ್ಲಿ ಆಹಾರವನ್ನು ಶೇಖರಣೆ ಮಾಡಿದ್ದು ಇಲ್ಲೇ ವಿತರಿಸಲಾಗುತ್ತದೆ.
ಆದರೆ ಈ ತಿಂಗಳು ಅಂದರೆ ಏಪ್ರಿಲ್ ನಲ್ಲಿ ಬಂದಿರತಕ್ಕಂತ ಪೌಷ್ಟಿಕ ಆಹಾರ ತೀರಾ ಕಳಪೆ ಪ್ರಮಾಣದಲ್ಲಿದ್ದು ಅದರಲ್ಲೂ ವಿಶೇಷವಾಗಿ ಮೊಟ್ಟೆ ಕೊಳೆತು ದುರ್ವಾಸನೆಯಲ್ಲಿ ತುಂಬಿದ್ದು ಆದಿವಾಸಿಗಳು ಸೇವನೆ ಮಾಡಲು ಸಾಧ್ಯವಾಗುತ್ತಿಲ್ಲ.
ಈ ವ್ಯವಸ್ಥೆಗೆ ನೇರವಾಗಿ ಕಾರಣ. ಪೌಷ್ಟಿಕ ಆಹಾರ ಸರಬರಾಜು ಆದ ಮೇಲೆ ಅದನ್ನು ಪರೀಕ್ಷೆ ಮಾಡದೆ ಅದರ ಗುಣಮಟ್ಟವನ್ನು ಪರೀಕ್ಷಿಸದೆ ಆದಿವಾಸಿಗಳಿಗೆ ನೀಡಿರುತ್ತಾರೆ.
ಸರ್ಕಾರ ಕೂಡಲೇ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಈ ವ್ಯವಸ್ಥೆಗೆ ನೇರವಾಗಿ
ಕಾರಣ ಸಮಗ್ರ ಗಿರಿಜನ ಅಭಿರುದ್ದಿ ಇಲಾಖೆಯ ಅಧಿಕಾರಿಗಳು ಅಂದರೆ ITDP ಅಧಿಕಾರಿಗಳು ನೇರ ಕಾರಣ ಎಂದು ಆನಂದ ಮರೆಬೈಲು
ಮೂಡಿಗೆರೆ ತಾಲೂಕು ಕಾರ್ಯದರ್ಶಿಗಳು
ಬುಡಕಟ್ಟು ಕೃಷಿಕರ ಸಂ (BKS) ತಿಳಿಸಿದರು.